Wednesday, May 22, 2013
Last Updated: 12:20:16 AM IST
  • ನಾನೆಲ್ಲಿರುವೆ:
  • ಮುಖಪುಟ ಶ್ರದ್ಧಾಂಜಲಿ
  • ಉದಯವಾಣಿ
  • ವೆ ಬ್
  • ಹುಡುಕಿ
ಶ್ರದ್ಧಾಂಜಲಿ
  • ನಿಧನ

    ಉದಯ ಶೆಟ್ಟಿ

    ಕಾರ್ಕಳ : ನಗರದ ಬಂಗ್ಲೆಗುಡ್ಡೆಯ ಬಂಗ್ಲೆಮನೆ ನಿವಾಸಿ ಕೃಷಿಕ ಉದಯ ಶೆಟ್ಟಿ (47) ಅಸೌಖ್ಯದಿಂದ ಮೇ 20ರಂದು ನಿಧನ ಹೊಂದಿದರು. ಮೃತರು ತಾಯಿ, ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.

    ಗಿರಿಜಾ

    ಕೆಯ್ಯೂರು: ಮಾಡಾವು ನಿವಾಸಿ ಗಿರಿಜಾ (53) ಮೇ 19 ರಂದು ನಿಧನ ಹೊಂದಿದರು. ಮೃತರು ಪತಿ, ಪುತ್ರಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

    ವಿಜಯ್‌ ಅಂಚನ್‌

    ಮೂಡಬಿದಿರೆ : ಧ್ವನಿವರ್ಧಕ, ಪರದೆ, ಮೇಕಪ್‌, ಸಂಗೀತ ರಂಗದಲ್ಲಿ ಮೂರು ದಶಕಗಳಿಂದಲೂ ಸಕ್ರಿಯರಾಗಿದ್ದ ಇಲ್ಲಿನ ನಾಗರಕಟ್ಟೆಯ ವಿಜಯ್‌ ಸೌಂಡ್ಸ್‌ ಆ್ಯಂಡ್‌ ಡೆಕೊರೇಟರ್ನ ಮಾಲಕ ವಿಜಯ್‌ ಅಂಚನ್‌ (53) ಮೇ 20ರಂದು ನಿಧನ ಹೊಂದಿದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

    ಲಕ್ಷ್ಮಣ್‌ ಆರ್‌. ಪ್ರಭು

    ಉಡುಪಿ : ಕಕ್ಕುಂಜೆಯ ನಿವೃತ್ತ ಯೋಧ ದಿ| ರಘುರಾಮ ಪ್ರಭು ಅವರ ಪುತ್ರ, ವೈಶ್ಯವಾಣಿ ಸಮಾಜದ ಪ್ರಮುಖ ವ್ಯಕ್ತಿ ಲಕ್ಷ್ಮಣ್‌ ಆರ್‌. ಪ್ರಭು (59) ಅಸೌಖ್ಯದಿಂದ ಕಕ್ಕುಂಜೆಯ ಸ್ವಗೃಹದಲ್ಲಿ ಮೇ 19ರಂದು ನಿಧನ ಹೊಂದಿದರು. ಮೃತರು ಪತ್ನಿ, ಮೂವರು ಪುತ್ರಿಯರು, ಪುತ್ರನನ್ನು ಅಗಲಿದ್ದಾರೆ.

    ಪ್ರಮೋದ್‌ ಎಸ್‌. ರಾವ್‌

    ಉಡುಪಿ : ಸಿಂಡಿಕೇಟ್‌ ಬ್ಯಾಂಕ್‌ನ ನಿವೃತ್ತ ಸೀನಿಯರ್‌ ಮ್ಯಾನೇಜರ್‌, ಬೀಡಿನಗುಡ್ಡೆ ನಿವಾಸಿ ಪ್ರಮೋದ್‌ ಎಸ್‌. ರಾವ್‌ (61) ಅಸೌಖ್ಯದಿಂದ ಮಣಿಪಾಲದ ಆಸ್ಪತ್ರೆಯಲ್ಲಿ ಮೇ 19ರಂದು ನಿಧನ ಹೊಂದಿದರು.

     ಅವರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

    ಜಿ. ಸುರೇಶ್‌ ಶೆಣೈ

    ಮೂಡಬಿದಿರೆ : ಬಸ್‌ ಏಜೆಂಟ್‌, ಎಸ್‌.ವಿ. ಏಜೆಂಟ್ಸ್‌ನ ಪ್ರವರ್ತಕ, ಪಬ್ಲಿಕ್‌ ಲಿಂಕ್ಸ್‌ ಎಡ್ವರ್‌ಟೈಸಿಂಗ್‌ನ ಪಾಲುದಾರರಾಗಿದ್ದ ಜಿ. ಸುರೇಶ್‌ ಶೆಣೈ (66) ಮೇ 19ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

    ಮೃತರು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅವರ ಪತ್ನಿ ಕೆಲ ಸಮಯದ ಹಿಂದಷ್ಟೇ ನಿಧನ ಹೊಂದಿದ್ದರು.

    ಸಿಂಡಿಕೇಟ್‌ ಬ್ಯಾಂಕ್‌ ಕಲ್ಲ ಮುಂಡ್ಕೂರು ಶಾಖೆಯಲ್ಲಿ ನೌಕರಿ ಆರಂಭಿಸಿದ್ದ ಅವರು ಕೆಲಕಾಲ ಇಲ್ಲಿನ ಗಣೇಶ್‌ ಕಾಫಿ ಹೌಸ್‌ನಲ್ಲೂ ದುಡಿದಿದ್ದರು. ಶೆಣೈ ಅವರು ಸಚಿವ ಕೆ. ಅಭಯಚಂದ್ರ ಅವರ ಸಹಪಾಠಿ. ಮೂಡಬಿದಿರೆ ಬಸ್‌ ಏಜೆಂಟರು ಬಸ್‌ನಿಲ್ದಾಣದಲ್ಲಿ  ಶೋಕ ಸೂಚಕವಾಗಿ ಕಪ್ಪು ಬಾವುಟ ಹಾರಿಸಿದರು.

    ಲೂಸಿ ಪಿಂಟೊ

    ಮಂಗಳೂರು : ಮಲ್ಲೂರು ದೆಮ್ಮಲೆಯ ಡೇವಿಡ್‌ ಪಿಂಟೊ ಅವರ ಪತ್ನಿ ಲೂಸಿ ಪಿಂಟೊ (70)  ಮೇ 20ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತಿ, ಪುತ್ರ ಮತ್ತು 6 ಮಂದಿ ಪುತ್ರಿಯರನ್ನು ಅಗಲಿದ್ದಾರೆ.

    ಸುಬ್ರಾಯ ಕಾಮತ್‌

    ಕಾರ್ಕಳ : ಚಿಕ್ಕಮಗಳೂರು ತಾಲೂಕು ಕಳಸದ ಉದ್ಯಮಿ ಸುಬ್ರಾಯ ಕಾಮತ್‌ (80) ಮೇ 20 ರಂದು ನಿಧನ ಹೊಂದಿದರು. ಮೃತರು ಪತ್ನಿ, ಮೂವರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ.

    ಅವರು ಕಳಸ ಶ್ರೀ ವೆಂಕಟರಮಣ ದೇವಳ ಉತ್ಸವಕ್ಕೆ ಕಾಷ್ಠ ರಥ, ಕೆಮೂ¤ರು ದೇವಸ್ಥಾನಕ್ಕೆ ತಿಜೋರಿ ಸಮರ್ಪಣೆ ಮುಂತಾದ ಧಾರ್ಮಿಕ ಸೇವೆಯಿಂದ ಜನಪ್ರಿಯರಾಗಿದ್ದರು.

    ಪಿಯಾದ್‌ ಮಾರ್ಟಿಸ್‌

    ಉಡುಪಿ : ಕಾರ್ಕಳ ತಾಲೂಕಿನ ರಂಗನಪಲ್ಕೆ ಪೊಕ್ಕಿಪಳ್ಳಿ ಪಿಯಾದ್‌ ಮಾರ್ಟಿಸ್‌ (80) ಮೇ 20ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಐವರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ.

    ನಾಗಪ್ಪ ಬಿ. ಎಸ್‌.

    ಮಂಗಳೂರು : ಕರ್ನಾಟಕ ಸರಕಾರದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ರಾಯಚೂರ್‌ನ ವಿಶೇಷ ಜಿಲ್ಲಾಧಿಕಾರಿಯಾಗಿ ನಿವೃತ್ತರಾದ ನಾಗಪ್ಪ  ಬಿ. ಎಸ್‌. (81) ಮೇ 20ರಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರು ಪತ್ನಿ ಸುಮಿತ್ರಾ ನಾಗಪ್ಪ, ಜಿಪಂ ಸಿಇಒ ಡಾ| ಕೆ. ಎನ್‌. ವಿಜಯಪ್ರಕಾಶ್‌ ಸಹಿತ ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

    ಮೂಲತಃ ಕಲ್ಲಡ್ಕ ಗೋಳ್ತಮಜಲಿನ ನಾಗಪ್ಪ ಅವರು ತಹಶೀಲ್ದಾರ್‌ ಹುದ್ದೆಯೊಂದಿಗೆ ವೃತ್ತಿ ಜೀವನ ಆರಂಭಿಸಿದರು. ನಾಗರಿಕ ಆಹಾರ ಪೂರೈಕೆ ಇಲಾಖೆಯ ಉಪ ನಿರ್ದೇಶಕರಾಗಿ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾಕ ಇಲಾಖೆಯ ಜಿಲ್ಲಾ ಅಧಿಕಾರಿಯಾಗಿ, ಬೀದರ್‌ನ ಆಯುಕ್ತರಾಗಿ ವಿವಿಧ ಇಲಾಖೆಗಳಲ್ಲಿ ಉಪ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ವಿಶಿಷ್ಟ ಸೇವಾ ಸಾಧನೆಗೆ ಪ್ರಸಿದ್ಧರಾಗಿದ್ದ ಅವರು ಮುಖ್ಯಮಂತ್ರಿಗಳ ಚಿನ್ನದ ಪದಕ, ಇಲಾಖೆಗಳಿಂದ ಶ್ರೇಷ್ಠ ಸೇವಾ ಸಾಧನೆ ಪುರಸ್ಕಾರಗಳಿಗೆ ಪಾತ್ರರಾಗಿದ್ದರು.

    ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ, ಶಾಸಕರಾದ ಕೆ. ವಸಂತ ಬಂಗೇರ, ಜೆ. ಆರ್‌. ಲೋಬೋ, ಜಿಲ್ಲಾಧಿಕಾರಿ ಪ್ರಕಾಶ್‌, ಹರ್ಷಗುಪ್ತ ಮುಂತಾದ ಗಣ್ಯರು ದಿವಂಗತರ ಅಂತಿಮದರ್ಶನ ಪಡೆದರು.

    ವನಜಾಕ್ಷಿ ಶೆಡ್ತಿ

    ಬ್ರಹ್ಮಾವರ : ಶಿರ್ವ ದಿ| ಗೋಪಾಲ ಹೆಗ್ಡೆ ಅವರ ಪತ್ನಿ ಮೊದಲ್ತಾವು ವನಜಾಕ್ಷಿ ಶೆಡ್ತಿ (88) ಮೇ 20ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.

    ಮೃತರು ಪುತ್ರ ಬೆಂಗಳೂರಿನ ಉದ್ಯಮಿ ಮೊದಲ್ತಾವು ಪ್ರಕಾಶ್ಚಂದ್ರ ಹೆಗ್ಡೆ ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.

    ಬಾಬು ವಿ. ನೆವುಗಿ

    ಕಾರವಾರ : ಇಲ್ಲಿನ ಮೆಕ್ಕೇರಿ ವಾಣಿವಾಡ ನಿವಾಸಿ, ವೈಶ್ಯವಾಣಿ ಸಮಾಜದ ಹಿರಿಯ ಬಾಬು ವಿ. ನೆವುಗಿ (89) ಅಸೌಖ್ಯದಿಂದ ಸ್ವಗೃಹದಲ್ಲಿ ಮೇ 19ರಂದು ನಿಧನ ಹೊಂದಿದರು.

    ಮೃತರು ಪತ್ನಿ, ಎಂಟು ಮಂದಿ ಪುತ್ರಿಯರು ಹಾಗೂ ಪುತ್ರನನ್ನು ಅಗಲಿದ್ದಾರೆ.

    ಪಿಯಾದ್‌ ಮೊಂತೆರೋ

    ಪುತ್ತೂರು : ಚಿಕ್ಕಪುತ್ತೂರು ನಿವಾಸಿ ಪಿಯಾದ್‌ ಮೊಂತೆರೋ (91) ಮೇ 19ರಂದು ನಿಧನ ಹೊಂದಿದರು.

    ಮೃತರು ಇಬ್ಬರು ಪುತ್ರರು ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.

  • Copyright @ 2009 Udayavani.All rights reserved.
  • Designed & Hosted By 4cplus