ಶಾಯಿರಿ ಪ್ರಿಯ ಸಿಂಗ್…
Team Udayavani, Jul 28, 2017, 6:50 AM IST
ಬೆಂಗಳೂರು: “ಉರ್ದು ಶಾಯಿರಿ’ ಪ್ರಿಯರಾಗಿದ್ದ ಧರಂಸಿಂಗ್, ತಮ್ಮ ರಾಜಕೀಯ ಭಾಷಣಗಳಲ್ಲಿ ಉರ್ದು ಶಾಯಿರಿ ಮೂಲಕ ಪರಿಸ್ಥಿತಿಯನ್ನು ವಿಶ್ಲೇಷಿಸುತ್ತಿದ್ದರು. ಸಮ್ಮಿಶ್ರಸರ್ಕಾರದಲ್ಲಿ ಮುಖ್ಯಮಂತ್ರಿ ಸ್ಥಾನ ಳೆದುಕೊಂಡಾಗ ,
“ಸಿಕಂದರ್ ಜಬ್ ಚಲಾ ದುನಿಯಾಸೆ. ದೊನೋ ಹಾಥ್ ಖಾಲಿ ಥೆ… ಕ್ಯಾ ಲಾಯಾ ಥಾ ಸಿಕಂದರ್ ದುನಿಯಾ ಮೆ?….ಲೆ ಚಲಾ ಕ್ಯಾ…ಹೈಂ ಹಾಥ್ ದೋನೋ ಖಾಲಿ ಬಾಹರ್ ಕಫನ್ ಕೆ’ (ಅಲೆಕ್ಸಾಂಡರ್ ಲೋಕ ಬಿಟ್ಟು ಹೋಗುವಾಗ ಎರಡು ಕೈಗಳು ಬರಿದಾಗಿದ್ದವು…ಏನನ್ನು ತಂದಿದ್ದ ಅಲೆಕ್ಸಾಂಡರ್ ಲೋಕಕ್ಕೆ….ಬಿಟ್ಟು ಹೋಗುವಾಗ ಈ ಲೋಕ ಆತನ ಎರಡೂ ಬರಿದಾದ ಕೈಗಳು “ಕಫನ್’ನಿಂದ (ಶವಕ್ಕೆ ಹೊದಿಸುವ ಬಟ್ಟೆ) ಹೊರಗಿವೆ ಎಂದು ಹೇಳಿದ್ದರು.
“ಮಿಟಾ ದೆ ಅಪ್ನಿ ಹಸ್ತಿ ಕೋ..ಗರ್ ತೂ ಮರ್ತಬಾ ಚಹ್ತಾ ಹೈ….ಕಿ ದಾನಾ ಖಾಕ್ ಮೆ ಮಿಲ್ಕರ್ ಗುಲೆ ಗುಲಾlರ್ ಹೋತಾ ಹೈ….(ನೀನು ಸ್ಥಾನಮಾನ ಬಯಸುತ್ತೀ ಎಂದಾದರೆ,ನಿನ್ನನ್ನೇ ನೀನು ಅಳಿಸಿಕೊಂಡು ಬಿಡು…ಬೀಜವು ಭೂಮಿಯೊಳಗೆ ಸೇರಿದಾಗಲೇ ಫಲ ಕೊಡುವುದು) ಎಂದೂ ಸಭೆ ಸಮಾರಂಭಗಳಲ್ಲಿ ಹೇಳುತ್ತಿದ್ದರು.