ಗಂಡ ಹೆಂಡತಿ ಮತ್ತು ಮುನಿಸು

ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದ್ದೇನು ಗೊತ್ತಾ?

Team Udayavani, Sep 27, 2019, 5:00 AM IST

x-28

ಕನ್ನಡದಲ್ಲಿ ಈಗಾಗಲೇ ಬರುತ್ತಿರುವ ಸಸ್ಪೆನ್ಸ್‌, ಥ್ರಿಲ್ಲರ್‌ ಸಿನಿಮಾಗಳ ಸಾಲಿಗೆ ಮತ್ತೂಂದು ಹೊಸ ಚಿತ್ರ ಸೇರ್ಪಡೆಯಾಗಿದೆ. ಅದೊಂದು ಮಿಸ್ಟ್ರಿ ಸ್ಟೋರಿ ಹೊಂದಿರುವ ಸಿನಿಮಾ. ಹೆಸರು “ಅಮೃತ್‌ ಅಪಾರ್ಟ್‌ಮೆಂಟ್ಸ್‌’. ಹೌದು, ಇದೇ ಮೊದಲ ಬಾರಿಗೆ ಗುರುರಾಜ ಕುಲಕರ್ಣಿ ಅವರು ನಿರ್ದೇಶನ ಮಾಡಿದ್ದಾರೆ. ನಿರ್ಮಾಣವೂ ಅವರದೇ. ಈ ಹಿಂದೆ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದ ಗುರುರಾಜ ಕುಲಕರ್ಣಿ ಅವರಿಗೆ ಇದು ಮೂರನೇ ಸಿನಿಮಾ. ಕಥೆ ಬರೆದು ಮೊದಲ ಸಲ ನಿರ್ದೇಶನಕ್ಕಿಳಿದಿರುವ ಗುರುರಾಜ ಕುಲಕರ್ಣಿ, ತಮ್ಮ ಚಿತ್ರದ ಬಗ್ಗೆ ಹೇಳಲೆಂದೇ ಇತ್ತೀಚೆಗೆ ತಮ್ಮ ಚಿತ್ರತಂಡದ ಜೊತೆ ಪತ್ರಕರ್ತರ ಮುಂದೆ ಬಂದಿದ್ದರು ಗುರುರಾಜ ಕುಲಕರ್ಣಿ.

ಅಂದು ಮೊದಲು ಮಾತು ಶುರು ಮಾಡಿದ್ದು ನಿರ್ದೇಶಕರು. “ಈ ಚಿತ್ರ ಮಾಡೋಕೆ ಕಾರಣ ಕಥೆ. ಆ ಬಗ್ಗೆ ಹೇಳುವುದಾದರೆ, ಹೊಸದಾಗಿ ಮದುವೆಯಾದ ಗಂಡ, ಹೆಂಡತಿ ನಡುವಿನ ಕಥೆ ಇದು. ಪ್ರೀತಿಸಿ ಮದುವೆ ಮಾಡಿಕೊಂಡ ಜೋಡಿ, ಆರು ತಿಂಗಳಲ್ಲೇ ವಾದ, ವಿವಾದಗಳಿಂದ ಬೇಸತ್ತು, ಇನ್ನೇನು ಬೇರೆ ಆಗಬೇಕು ಎಂಬ ಸಂದರ್ಭದಲ್ಲಿ ಒಂದು ಘಟನೆ ನಡೆಯುತ್ತದೆ. ಅಲ್ಲೊಂದು ತನಿಖೆ ಶುರುವಾಗುತ್ತೆ. ಆಮೇಲೆ ಏನೆಲ್ಲಾ ಆಗುತ್ತೆ, ಆ ಘಟನೆ ಏನು ಎಂಬುದು ಸಸ್ಪೆನ್ಸ್‌. ಸುಮಾರು 60 ದಿನಗಳ ಕಾಲ ಚಿತ್ರೀಕರಣ ನಡೆದಿದ್ದು, ಡಬ್ಬಿಂಗ್‌ ಮುಗಿಸಿ, ಈಗ ಸಂಕಲನ ಕೆಲಸದಲ್ಲಿದೆ’ ಎಂದು ವಿವರ ಕೊಟ್ಟರು ಅವರು.

ಚಿತ್ರದಲ್ಲಿ ಸೀತಾ ಕೋಟೆ ಅವರು ಇಲ್ಲೊಂದು ವಿಶೇಷ ಪಾತ್ರ ಮಾಡಿದ್ದಾರಂತೆ. ಅವರೇ ಹೇಳುವಂತೆ, “ನನ್ನ ತಂದೆ ಲಾಯರ್‌ ಆಗಿದ್ದವರು. ನನಗೂ ಲಾಯರ್‌ ಆಗುವ ಆಸೆ ಇತ್ತು. ಆದರೆ, ನಾನು ಕಲಾವಿದೆ ಆಗಿಬಿಟ್ಟೆ. ಈಗ ಸಿನಿಮಾದಲ್ಲಿ ಮೊದಲ ಸಲ ಲಾಯರ್‌ ಪಾತ್ರ ಸಿಕ್ಕಿದೆ. ಯಾವುದೇ ಒತ್ತಡವಿಲ್ಲದೆ, ಪಾತ್ರ ಮಾಡಿದ್ದೇನೆ. ಒಂದೊಳ್ಳೆಯ ಚಿತ್ರದಲ್ಲಿ ನಟಿಸಿದ ಖುಷಿ ನನಗಿದೆ’ ಎಂದರು ಸೀತಾ ಕೋಟೆ.

ತಾರಕ್‌ ಪೊನ್ನಪ್ಪ ನಾಯಕರಾಗಿ ನಟಿಸಿದ್ದು, ಅವರಿಲ್ಲಿ ಸಾಫ್ಟ್ವೇರ್‌ ಎಂಜಿನಿಯರ್‌ ಪಾತ್ರ ಮಾಡಿದ್ದಾರಂತೆ. “ಮದುವೆಯಾದ ಜೋಡಿ ಮಧ್ಯೆ ನಡೆಯುವ ಸಣ್ಣ ಸಣ್ಣ ಮುನಿಸು, ವಾದ, ವಿವಾದಗಳಿಂದ ಏನೆಲ್ಲಾ ಆಗುತ್ತೆ, ಅವರ ಮಧ್ಯೆ ಒಂದು ಘಟನೆ ಎದುರಾಗಿ, ಅವರು ಎಂತಹ ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕುತ್ತಾರೆ’ ಅನ್ನೋದು ಕಥೆ ಎಂದರು ತಾರಕ್‌. ಚಿತ್ರದಲ್ಲಿ ಮಾನಸ ಜೋಶಿ ಅವರು ಖಡಕ್‌ ಎಸಿಪಿ ಪಾತ್ರದಲ್ಲಿ ನಟಿಸಿದ್ದಾರಂತೆ. ಇದೇ ಮೊದಲ ಸಲ ಆ ಪಾತ್ರ ಮಾಡಿದ್ದು, ಒಳ್ಳೆಯ ತಂಡದ ಜೊತೆ ಕೆಲಸ ಮಾಡಿದ್ದು ಸಂತಸ ತಂದಿದೆ ಎಂದರು ಅವರು.

ಮನೋಹರ್‌ ಬಾಲಾಜಿ ಅವರಿಗೂ ಈ ಕಥೆ ಕೇಳಿದಾಗ, ವಿಶೇಷತೆ ಇದೆ ಎನಿಸಿ, ಸಿನಿಮಾದಲ್ಲಿ ನಟಿಸಲು ಒಪ್ಪಿದ್ದಾರೆ. ಅವರಿಲ್ಲಿ ಒಬ್ಬ ಅಂಬರೀಷ್‌ ಅಭಿಮಾನಿಯಾಗಿ, ಮಂಡ್ಯ ಮೂಲದ ವ್ಯಕ್ತಿಯಾಗಿ ನಟಿಸಿದ್ದಾರಂತೆ. ಸಿನಿಮಾ ನೋಡುವಾಗ, ಥ್ರಿಲ್ಲರ್‌ ಎನಿಸುತ್ತದೆ. ಆದರೆ, ನೈಜತೆಗೆ ಹತ್ತಿರವಾಗಿರುವ ಅಂಶಗಳು ಇಲ್ಲಿವೆ’ ಎಂದರು ಅವರು.
ಚಿತ್ರದಲ್ಲಿ ಊರ್ವಶಿ ಗೋವರ್ಧನ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಸಂಪತ್‌ಕುಮಾರ್‌, ಸಿತಾರಾ, ಜಗದೀಶ ಜಾಲ, ಶ್ರವಣ್‌ ಯತಾಳ್‌, ಅರುಣ ಮೂರ್ತಿ, ರಾಜು ನೀನಾಸಂ, ಶಂಕರ್‌ ಇತರರು ಕಾಣಿಸಿಕೊಂಡಿದ್ದಾರೆ.
ಅರ್ಜುನ್‌ ಅಜಿತ್‌ ಛಾಯಾಗ್ರಹಣವಿದೆ. ಎಸ್‌.ಡಿ.ಅರವಿಂದ್‌ ಮೂರು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಕೆ.ಕಲ್ಯಾಣ್‌, ವಿ.ಮನೋಹರ್‌ ಹಾಗು ಡಾ.ಬಿ.ಆರ್‌.ಪೋಲಿಸ್‌ ಪಾಟೀಲ್‌ ಅವರ ಸಾಹಿತ್ಯವಿದೆ. ಸುನೀಲ್‌ ಆರ್‌.ಡಿ. ಮತ್ತು ನರಸಿಂಹ ಕುಲಕರ್ಣಿ ಸಹ ನಿರ್ಮಾಪಕರು.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yuva rajkumar

Yuva Rajkumar; ಫ್ಯಾಮಿಲಿ ಡ್ರಾಮಾದಲ್ಲಿ ಯುವ ಕನಸು

lineman and dilkush cinema releasing today

Kannada Cinema; ಇಂದು ತೆರೆಗೆ ಬರುತ್ತಿದೆ ಲೈನ್ ಮ್ಯಾನ್, ದಿಲ್ ಖುಷ್

Somu Sound Engineer,Kerebete ; ಸಿನಿಜಾತ್ರೆಯಲ್ಲಿ ನೆಲದ ಸೊಗಡು

Somu Sound Engineer,Kerebete ; ಸಿನಿಜಾತ್ರೆಯಲ್ಲಿ ನೆಲದ ಸೊಗಡು

karataka damanaka movie

Karataka Damanaka; ಶಿವಣ್ಣ ಪ್ರಭುದೇವ ಜೊತೆಯಾಟ

ranganayaka movie releasing today

Ranganayaka Movie; ರಂಗಿನ ಕಥೆಯೊಂದಿಗೆ ರಂಗನಾಯಕ ಎಂಟ್ರಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.