ಐಪಿಎಲ್‌ ಹರಾಜಿನಲ್ಲಿ ಹೊಸಬರ ಮೇಳ


Team Udayavani, Feb 17, 2017, 3:45 AM IST

IPL-2017.jpg

ಬೆಂಗಳೂರು: ಐಪಿಎಲ್‌ ಹರಾಜಿಗೆ ಇನ್ನುಳಿದಿರುವುದು ಮೂರೇ ದಿನ. ಯಾವ ಆಟಗಾರ ಎಷ್ಟು ಮೊತ್ತಕ್ಕೆ ಯಾವ ತಂಡದ ಪಾಲಾಗುತ್ತಾನೆ ಎಂಬ ಕ್ರಿಕೆಟ್‌ ಅಭಿಮಾನಿಗಳ ಕೌತುಕ ಈಗಾಗಲೇ ಗರಿಗೆದರಿದೆ.

ಐಪಿಎಲ್‌ ಹರಾಜಿನ ಈ ಸಲದ ವಿಶೇಷವೆಂದರೆ ಪ್ರತಿಭಾನ್ವಿತ ಹೊಸಬರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿರುವುದು. ಜತೆಗೆ ಸ್ಟಾರ್‌ ಆಟಗಾರರೂ ಮೊದಲ ಬಾರಿಗೆ ಐಪಿಎಲ್‌ ಬಾಗಿಲು ಬಡಿಯುತ್ತಿದ್ದಾರೆ. ಇವರಲ್ಲಿ ಇಂಗ್ಲೆಂಡಿನ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಪ್ರಮುಖರು. ಇನ್‌ಸ್ಟಂಟ್‌ ಕ್ರಿಕೆಟ್‌ನಲ್ಲಿ 134.03ರಷ್ಟು ಸ್ಟ್ರೈಕ್‌ರೇಟ್‌ ಹೊಂದಿರುವ ಸ್ಟೋಕ್ಸ್‌ ಯಾವ ತಂಡಕ್ಕೂ ಬಹೂಪಯೋಗಿ ಆಗಬಲ್ಲರು. 6-7ನೇ ಕ್ರಮಾಂಕದಲ್ಲಿ ಬಂದು ಉತ್ತಮ ಫಿನಿಶರ್‌ ಪಾತ್ರವನ್ನು ನಿಭಾಯಿಸುವ ಛಾತಿ ಇವರದು. ಸಹಜವಾಗಿಯೇ ಸ್ಟೋಕ್ಸ್‌ಗೆ ಬಲೆ ಬೀಸಲು ಬಹುತೇಕ ಎಲ್ಲ ತಂಡಗಳೂ ಪೈಪೋಟಿಗೆ ಬೀಳುವ ಸಾಧ್ಯತೆ ಇದೆ. ಮುಖ್ಯವಾಗಿ ಕೆಕೆಆರ್‌, ಪುಣೆ, ಮುಂಬಯಿ ಹಾಗೂ ಡೆಲ್ಲಿ ಫ್ರಾಂಚೈಸಿಗಳು ಇವರ ಮೇಲೆ ಕಣ್ಣಿಟ್ಟಿವೆ.

ಸ್ಟೋಕ್ಸ್‌ ಮೂಲ ಬೆಲೆ 2 ಕೋಟಿ ರೂ.
ರಾಯ್‌, ಮಿಲ್ಸ್‌, ರಬಾಡ…

ಇಂಗ್ಲೆಂಡ್‌ ಆರಂಭಕಾರ, ಟಿ-20 ಸ್ಪೆಷಲಿಸ್ಟ್‌ ಜಾಸನ್‌ ರಾಯ್‌ ಕೂಡ ಬಹಳಷ್ಟು ಫ್ರಾಂಚೈಸಿಗಳ ಕಣ್ಣು ಕುಕ್ಕಿಸಿದ್ದಾರೆ. ಒಂದು ಕೋ.ರೂ. ಮೂಲಬೆಲೆಯನ್ನು ಇವರಿಗೆ ನಿಗದಿಗೊಳಿಸಲಾಗಿದೆ.

ಇಂಗ್ಲೆಂಡಿನ ಶರವೇಗಿ ಟೈಮಲ್‌ ಮಿಲ್ಸ್‌ ಬೆಲೆ 50 ಲಕ್ಷ ರೂ. ಅತ್ಯಧಿಕ ಡಾಟ್‌ಬಾಲ್‌, ಅತೀ ಕಡಿಮೆ ಬೌಂಡರಿ ನೀಡುವ ಹೆಗ್ಗಳಿಕೆ ಮಿಲ್ಸ್‌ ಅವರದು. ಇವರನ್ನು ಪಡೆಯುವ ತಂಡದ ಬೌಲಿಂಗ್‌ ವಿಭಾಗ ಹೆಚ್ಚು ಬಲಿಷ್ಠವಾಗಿರುವುದರಲ್ಲಿ ಅನುಮಾನವಿಲ್ಲ.

ದಕ್ಷಿಣ ಆಫ್ರಿಕಾದ ಘಾತಕ ವೇಗಿ ಕ್ಯಾಗಿಸೊ ರಬಾಡ ಈ ಐಪಿಎಲ್‌ನ ಸ್ಟಾರ್‌ ಆಕರ್ಷಣೆ ಆಗಬಲ್ಲರು. ಇವರ ಮೂಲಬೆಲೆ ಭರ್ತಿ ಒಂದು ಕೋಟಿ ರೂ.

ನ್ಯೂಜಿಲ್ಯಾಂಡಿನ ಆಲ್‌ರೌಂಡರ್‌ ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌ ಕೂಡ ಈ ಸಲದ ಐಪಿಎಲ್‌ ರೇಸ್‌ನಲ್ಲಿದ್ದಾರೆ. ಮೂಲಬೆಲೆ 30 ಲಕ್ಷ ರೂ. 136.36ರಷ್ಟು ಸೆಟ್ರೈಕ್‌ರೇಟ್‌ ಹೊಂದಿರುವ ಗ್ರ್ಯಾಂಡ್‌ಹೋಮ್‌ 38 ವಿಕೆಟ್‌ಗಳನ್ನೂ ಉರುಳಿಸಿದ್ದಾರೆ. ಅಫ್ಘಾನಿಸ್ಥಾನದ ಆಲ್‌ರೌಂಡರ್‌ ಮೊಹಮ್ಮದ್‌ ನಬಿ ಕೂಡ 30 ಲಕ್ಷ ರೂ. ಮೂಲ ಬೆಲೆ ಹೊಂದಿದ್ದಾರೆ. 2016ರ ಟಿ-20 ವಿಶ್ವಕಪ್‌ನಲ್ಲಿ ಅತ್ಯಧಿಕ ವಿಕೆಟ್‌ ಕಿತ್ತ ಹೆಗ್ಗಳಿಕೆ ನಬಿ ಅವರದು.

ಪವರ್‌-ಪ್ಲೇ ಹಂತದಲ್ಲಿ ಹೆಚ್ಚು ಅಪಾಯಕಾರಿಯಾಗಿ ಗೋಚರಿಸಬಲ್ಲ ವಿಂಡೀಸ್‌ ವೇಗಿ ಕೆಸ್ರಿಕ್‌ ವಿಲಿಯಮ್ಸ್‌ 30 ಲಕ್ಷ ರೂ. ಮೂಲಬೆಲೆ ನಿಗದಿಗೊಳಿಸಲಾಗಿದೆ. ಕೆರಿಬಿಯನ್‌ ನಾಡಿನ ವಿಕೆಟ್‌ ಕೀಪರ್‌ ನಿಕೋಲಸ್‌ ಪೂರಣ್‌ (30 ಲ.ರೂ.), ಆರಂಭಕಾರ ವಿನ್‌ ಲೂಯಿಸ್‌ (50 ಲ.ರೂ.) ಕೂಡ ಕಣದಲ್ಲಿದ್ದಾರೆ.

ಎ. 5ರಿಂದ ಐಪಿಎಲ್‌
10ನೇ ಐಪಿಎಲ್‌ ಪಂದ್ಯಾವಳಿ ಎ. 5ರಿಂದ ಮೇ 21ರ ತನಕ ಒಟ್ಟು 47 ದಿನಗಳ ಕಾಲ ಸಾಗಲಿದೆ. 8 ತಂಡಗಳು ಪಾಲ್ಗೊಳ್ಳಲಿದ್ದು, 10 ಸ್ಥಳಗಳಲ್ಲಿ ಪಂದ್ಯಗಳು ನಡೆಯುತ್ತವೆ.

ಉದ್ಘಾಟನಾ ಮತ್ತು ಫೈನಲ್‌ ಪಂದ್ಯಗಳೆರಡರ ಆತಿಥ್ಯವೂ ಹೈದರಾಬಾದ್‌ ಪಾಲಾಗಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಸನ್‌ರೈಸರ್ ಹೈದರಾಬಾದ್‌ ತಂಡ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡವನ್ನು ಎದುರಿಸಲಿದೆ.

ಪಂಜಾಬ್‌ ತಂಡ ಮೊಹಾಲಿ ಮತ್ತು ಇಂದೋರನ್ನು “ಹೋಮ್‌ ಗ್ರೌಂಡ್‌’ ಆಗಿ ಆರಿಸಿಕೊಂಡಿದೆ. ಗುಜರಾತ್‌ ಲಯನ್ಸ್‌ ತಂಡದ ತವರಿನ ಅಂಗಳಗಳೆಂದರೆ ರಾಜ್‌ಕೋಟ್‌ ಮತ್ತು ಕಾನ್ಪುರ.

ಟಾಪ್ ನ್ಯೂಸ್

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.