ಅಮ್ಮನೆಂದರೆ- ಮಕ್ಕಳ ಪಾಲಿನ ಮಧುರಗೀತೆ


Team Udayavani, May 13, 2017, 4:25 PM IST

6.jpg

ನಾಳೆ ವಿಶ್ವ ಅಮ್ಮಂದಿರ ದಿನ. ಅಮ್ಮನೆಂದರೆ ಮಮತೆಯ ಮಡಿಲು- ಕರುಣೆಯ ಕಡಲು. ಅಮ್ಮಾ… ಎಂಬುದು ಪ್ರತಿ ಮಗುವಿನ ಮೊದಲ ಹಾಡು. ತ್ಯಾಗ, ಪ್ರೀತಿ, ಕರುಣೆ ಮತ್ತು ಕ್ಷಮೆ ಎಂಬ ಪದಗಳ ಇನ್ನೊಂದು ರೂಪಿನಂತಿರುವ ಅಮ್ಮಂದಿರಿಗೆ ನಮಿಸೋಣ ಬನ್ನಿ…

ಎದುರಿಗೆ ಒಂದು ಮಗುವಿರುತ್ತದೆ.ಅದರ ಮುಂದೆ ಅವಳು ನಗುತ್ತಾಳೆ. ಅಳುತ್ತಾಳೆ. ಆಡುತ್ತಾಳೆ. ಹಾಡುತ್ತಾಳೆ. ಹಾಗೆ ಹಾಡುತ್ತಲೇ ಡ್ಯಾನ್ಸು ಮಾಡುತ್ತಾಳೆ. ಕಷ್ಟ ಹೇಳಿಕೊಂಡು ಹಗುರಾಗುತ್ತಾಳೆ. ಮರುಕ್ಷಣವೇ ಕೈ ಮುಗಿಯುತ್ತಾಳೆ. ಆನಂತರದಲ್ಲಿ, ಆ ಮಗುವಿನ ಜಿಬಜಿಬ ಅನ್ನುವಂಥ ಕಾಲುಗಳನ್ನು ಹಿಡಿದು ಕಣ್ಣಿಗೆ ಒತ್ತಿಕೊಂಡು “ನೀನು ನನ್ನ ಪಾಲಿನ ದೇವರು ಕಣಪ್ಪಾ…’ ಎನ್ನುತ್ತಾ ಸಂತೃಪ್ತಿಯ ನಿಟ್ಟುಸಿರು ಬಿಡುತ್ತಾಳೆ.

ಅವಳ ಹೆಸರು- “ಅಮ್ಮ!
ತ್ಯಾಗ, ಪ್ರೀತಿ, ಕರುಣೆ ಮತ್ತು ಕ್ಷಮೆ- ಈ ನಾಲ್ಕು ಪದಗಳಿಗೆ ಇರುವ ಸಮನಾರ್ಥಕ ಪದವೇ ಅಮ್ಮ. ಅದೇಕೆ ಹಾಗಿರುತ್ತಾರೆ ಎಂಬ ಪ್ರಶ್ನೆಗೆ ಯಾರೂ ಉತ್ತರಿಸುವುದಿಲ್ಲ. ಆದರೆ, ಪ್ರತಿಯೊಬ್ಬ ತಾಯಿಯೂ ಮಮತಾಮಯಿ ಮತ್ತು ಕರುಣಾಮಯಿ ಆಗಿರುತ್ತಾಳೆ. ಸದಾ ತನಗಾಗಿ ಅಲ್ಲ, ಮಕ್ಕಳಿಗಾಗಿ ಜೀವ ತೇಯುತ್ತಾಳೆ. ಸಣ್ಣದೊಂದು ಜ್ವರ ಬಂದರೂ, ನಾಳೆ ನನಗೇನಾದ್ರೂ ಆಗಿಬಿಟ್ರೆ ನನ್ನ ಮಕ್ಕಳಿಗೆ ಯಾರು ಗತಿ ಎಂದು ಯೋಚಿಸುತ್ತಾಳೆ. ಅಕಸ್ಮಾತ್‌ ಮಕ್ಕಳೇ ಅನಾರೋಗ್ಯಕ್ಕೆ ಈಡಾದರೆ ಹತ್ತು ಮಂದಿಯ ಕಾಲು ಹಿಡಿದರೂ ಸರಿ; ಮಗುವಿಗೆ ಚಿಕಿತ್ಸೆ ಕೊಡಿಸುತ್ತಾಳೆ. ಮಕ್ಕಳು ತನಗೇ ಅನ್ಯಾಯ ಮಾಡಿಬಿಟ್ಟರೆ ಆಗ ಕೂಡ ಅದೇನೂ ಗೊತ್ತೇ ಇಲ್ಲ ಎಂಬಂತೆ ಸುಮ್ಮನಿದ್ದು ಬಿಡುತ್ತಾಳೆ. ಆಗ ಕೂಡ ಅವಳ ಪ್ರಾರ್ಥನೆ- ಮಕ್ಕಳಿಗೆ ಏನೂ ಕೇಡಾಗದಿರಲಿ ದೇವರೇ ಎಂಬುದೇ ಆಗಿರುತ್ತದೆ. ಮಕ್ಕಳು ಅನ್ನಿಸಿಕೊಂಡವರು ಕೊಲೆ- ಅತ್ಯಾಚಾರದಂಥ ಪಾತಕವೆಸಗಿ ಇಡೀ ಸಮಾಜದಿಂದ ಛೀಮಾರಿಗೆ ಒಳಗಾಗಿದ್ದಾಗ ಕೂಡ, ಅವರನ್ನು ಕ್ಷಮಿಸಲು ತಾಯಿ ಮನಸ್ಸು ಸಿದ್ಧವಾಗಿ ನಿಂತಿರುತ್ತದೆ. ಏಕೆಂದರೆ, ಅವಳು ಅಮ್ಮ!

ಮಕ್ಕಳಿಗೆ ಪ್ರಾರ್ಥಿಸುವುದು, ಮಕ್ಕಳಿಗಾಗಿ ಬದುಕುವುದು, ಮಕ್ಕಳ ಕಾರಣದಿಂದಲೇ ಬಗೆಬಗೆಯ ಸಂಕಟಗಳಿಗೆ ಸಿಕ್ಕಿಕೊಳ್ಳುವವಳು ಅಮ್ಮ. “ಜಗತ್ತಿನಲ್ಲಿ ಕೆಟ್ಟ ಮಕ್ಕಳು ಇರುತ್ತಾರೆಯೇ ಹೊರತು, ಕೆಟ್ಟ ತಾಯಂದಿರು ಇರುವುದಿಲ್ಲ’ ಎಂಬ ಒಂದೇ ಮಾತು ಸಾಕು, ಅಮ್ಮಂದಿರ ಮಹತ್ವ ಸಾರಲು. ವಿಶ್ವ ಅಮ್ಮಂದಿರ ದಿನದ ಈ ಸಂದರ್ಭದಲ್ಲಿ, ಅಮ್ಮಂದಿರನ್ನು ಪೂಜಿಸೋಣ. ಅಮ್ಮನನ್ನು ಗೌರವಿಸೋಣ.

ಟಾಪ್ ನ್ಯೂಸ್

Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ‌ ಕಂದಕೂರು

Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ‌ ಕಂದಕೂರು

OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?‌

OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?‌

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

17

ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್‌ ರೋಲ್ ನಲ್ಲಿ ಫಾಫಾ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

Apex

CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ‌ ಕಂದಕೂರು

Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ‌ ಕಂದಕೂರು

ಇಂಡಿಯನ್ ಆಯಿಲ್ ಕಂಪನಿಗೆ ನಿರ್ದೇಶಕರಾಗಿ (ಎಚ್‌ಆರ್) ರಶ್ಮಿ ಗೋವಿಲ್ ಅಧಿಕಾರ ಸ್ವೀಕಾರ

ಇಂಡಿಯನ್ ಆಯಿಲ್ ಕಂಪನಿಗೆ ನಿರ್ದೇಶಕರಾಗಿ (ಎಚ್‌ಆರ್) ರಶ್ಮಿ ಗೋವಿಲ್ ಅಧಿಕಾರ ಸ್ವೀಕಾರ

OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?‌

OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?‌

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

17

ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್‌ ರೋಲ್ ನಲ್ಲಿ ಫಾಫಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.