ಯಕ್ಷಮಂಡಲದ ವಿಜಯನಾಥ


Team Udayavani, Mar 24, 2017, 3:50 AM IST

24-KALA-8.jpg

ಮಣಿಪಾಲದ ಪಾರಂಪರಿಕ ಗ್ರಾಮ ನಿರ್ಮಾಣ, ಅದಕ್ಕೂ ಮೊದಲು ಹಸ್ತಶಿಲ್ಪ ವಸ್ತುಸಂಗ್ರಹ ಸಂಪದ – ಇವುಗಳ ಮೂಲಕ ಸಂಸ್ಕೃತಿ ಸೇವೆಯಲ್ಲಿ ಮಾದರಿ ಕೆಲಸವನ್ನು ಮಾಡಿ ರಾಷ್ಟ್ರೀಯ- ಅಂತಾರಾಷ್ಟ್ರೀಯ ಮನ್ನಣೆ ಹೊಂದಿದ್ದವರು ವಿಜಯನಾಥ ಶೆಣೈ. ಅವರ ಅಷ್ಟೊಂದು ಪರಿಚಯವಿಲ್ಲದ ಇನ್ನೊಂದು ಮುಖ ಅವರ ತೀವ್ರವಾದ ಯಕ್ಷಗಾನ ಅಭಿಮಾನ. ಮನಸ್ಸಿಗೆ ಒಪ್ಪಿದ ಯಾವುದನ್ನೇ ಆದರೂ ತೀರ ಹಚ್ಚಿಕೊಂಡು ಕೆಲಸ ಮಾಡುವುದು ಅವರ ಸ್ವಭಾವ. ಸಂಗೀತ, ಸಾಹಿತ್ಯ, ವಾಸ್ತುಶಿಲ್ಪ, ಸಾಧಕರ ಬಗೆಗಿನ ಕೆಲಸ – ಎಲ್ಲದರಲ್ಲೂ ಶೆಣೈ ಚಿಂತಕ – ಭಾವುಕ ರಸಿಕ, ಅವಧೂತ.

1970-1990 ದಶಕಗಳಲ್ಲಿ ಸಕ್ರಿಯವಾಗಿದ್ದ ಅವರ ನೇತೃತ್ವದ ಯಕ್ಷಮಂಡಲ ಮಣಿಪಾಲ- ಒಂದು ಧ್ಯೇಯಬದ್ಧ ಸಂಘಟನ ಸಂಸ್ಥೆ. ಅದು ಸಂಘಟಿಸಿದ ಹತ್ತಾರು ಕಾರ್ಯಕ್ರಮಗಳು ವಿಶಿಷ್ಟ. ಆ ಸಮಯದಲ್ಲಿ ಅವರೊಂದಿಗೆ ಸಹಕರಿಸಿದ ಅನುಭವಗಳು ಆಪ್ಯಾಯಮಾನ.

ಮಂಗಳೂರು ಪುರಭವನದಲ್ಲಿ ಅವರು ನಿರೂಪಿಸಿದ್ದ ಹಿರಿಯ ಕಲಾವಿದರ ತಾಳಮದ್ದಲೆ ಕೂಟ ಅಂತಹ ಒಂದು ವಿಶಿಷ್ಟ ಪ್ರಯತ್ನ. ಅಗರಿ ಶ್ರೀನಿವಾಸ ಭಾಗವತರು (ದಿವಾಣ, ಪಾಂಗಣ್ಣಾಯರ ಹಿಮ್ಮೇಳ), ಕೀರಿಕ್ಕಾಡು ಮಾಸ್ತರರು, ಪೊಲ್ಯ ದೇಜಪ್ಪ ಶೆಟ್ಟಿ, ಮಟ್ಟಿ ಸುಬ್ಬರಾವ್‌, ದೇರಾಜೆ ಸೀತಾರಾಮಯ್ಯ, ಪುಂಡೂರು ಗೋಪಾಲಕೃಷ್ಣ ಪುಣಿಂಚತ್ತಾಯರು, ಕೊರಕ್ಕೋಡು ಭವಾನಿಶಂಕರ ರಾವ್‌, ಕೋಟಿಕುಂಜ ನಾರಾಯಣ ಶೆಟ್ಟರು ಮತ್ತು ಶೇಣಿಯವರು (ಅವರೇ ಆ ತಂಡದ ಕಿರಿಯ ಅರ್ಥಧಾರಿ ಕಲಾವಿದ!-70 ವರ್ಷಕ್ಕೆ ಸಮೀಪ) ಇವರನ್ನು ಸೇರಿಸಿದ ನಮ್ಮ ಅಂದಿನ ಸಾಹಸ, ಸಾರ್ಥಕ್ಯ – ನೆನಪಿನ ಸಿಹಿಬುತ್ತಿ.

ಉದಯವಾಣಿ ಪತ್ರಿಕೆ ತನ್ನ ವಿಂಶತಿ ಆಚರಣೆಯ ಅಂಗವಾಗಿ ಏರ್ಪಡಿಸಿದ್ದ ಬಯಲಾಟಗಳ ಸಂಯೋಜನೆಯಲ್ಲೂ ಶೆಣೈ ಮುಖ್ಯರಾಗಿದ್ದರು. ಕಲಾ ಸನ್ನಿವೇಶಗಳ ಕುರಿತು, ಕಲಾವಿದರ ಕುರಿತು ಮಾತಾಡು ವಾಗ ವಿಜಯನಾಥರ ಭಾವ, ಭಂಗಿ ರೀತಿ – ಅದೇ ಒಂದು ಕಲಾನುಭವ. ಕಣ್ಣುಮುಚ್ಚಿ ಮೇಲೆ ನೋಡಿ, ವರ್ಣಿಸುತ್ತ “”ವೈರೇ, …… ಕಸ್‌ನೆÅà, ತೇಂ – ಮಳಾರಿ- ಅದ್ಭುತರೇ.., ಕಳ್ವೆàಂ” (ನೋಡು… ಆಹಾ ಎಂಥದದು… ಅಂದ್ರೆ… ಅದ್ಭುತ ಗೊತ್ತಾಯ್ತಾ!) ಎನ್ನುತ್ತ, ವೀಳ್ಯದ ರಸದೊಟ್ಟಿಗೆ ಕಲಾರಸಾಸ್ವಾದನೆ ಮಾಡುತ್ತಿದ್ದ ಶೆಣೈ ಓರ್ವ ಲೀನ ರಸಿಕ.

ಶೆಣೈ ಅವರ ಮಾತಿನ ರೀತಿ ವಿಚಿತ್ರ, ತುಂಡು ತುಂಡು… ಬಿಟ್ಟ ಪದ ನಾವು ತುಂಬಿಸಬೇಕು. ಆದರೆ ಅವರ ಪತ್ರಗಳು ಅತ್ಯಂತ ವ್ಯವಸ್ಥಿತ ವಿವರ ವಿವರ. ಚಿತ್ತಿಲ್ಲದ ಬರಹ, ಆಲಸ್ಯವಿಲ್ಲದ ಬರವಣಿಗೆ. ನಾನು ಅವರ ಪತ್ರಗಳನ್ನು ಕಾಯ್ದುಕೊಂಡಿಲ್ಲ ಎಂಬುದು ಬೇಸರದ ವಿಚಾರ. ದೇವಾಲಯದ ಶಿಲ್ಪ ಶೈಲಿ ಇತ್ಯಾದಿಗಳ ಕುರಿತು ಅವರು, ಸಂಶೋಧಕ ಮಂಜೇಶ್ವರ ಮುಕುಂದ ಪ್ರಭುಗಳೊಂದಿಗೆ ನಡೆಸಿದ ಪತ್ರ ವ್ಯವಹಾರ ಪ್ರಕಟವಾಗಿದ್ದು, ವಿಚಾರದ ನಿಧಿಯಂತಿದೆ.

ಹಸ್ತಶಿಲ್ಪ ಸಂಗ್ರಹದಲ್ಲಿ, ಪಾರಂಪರಿಕ ಗ್ರಾಮದಲ್ಲಿ, ಪತ್ರ, ಮಿತ್ರ ಹೃದಯಗಳಲ್ಲಿ ಶೆಣೈ ವಿಜಯಿ, ಜೀವಂತ, ಪ್ರೇರಕ.

ಡಾ| ಎಂ. ಪ್ರಭಾಕರ ಜೋಶಿ

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.