ಅಭಿಜಾತ ಪ್ರತಿಭೆಯ ನೃತ್ಯ ಪ್ರವೀಣೆ ಅನುಪಮಾ ಶೆಣೈ ಭಟ್‌


Team Udayavani, Apr 14, 2017, 3:50 AM IST

14-KALA-3.jpg

ಒಲಿದ ಕಲೆಯನ್ನು ಉಳಿಸಿ- ಬೆಳೆಸುವುದೊಂದು ಕಲೆಯೇ ಸರಿ. ಅದರಲ್ಲೂ ಕಲೆಯನ್ನು ನೌಕರಿ ಮತ್ತು ಸಂಸಾರದೊಂದಿಗೆ ಸಮತೋಲನಗೊಳಿಸಿ, ನಿಭಾಯಿಸುವುದು ಸುಲಭ ವಲ್ಲ. ಇದಕ್ಕೆ ಕಠಿನ ಪರಿಶ್ರಮ, ಏಕಾಗ್ರತೆ, ತಪಸ್ಸಿನಂತೆ ದುಡಿಮೆ ಇವೆಲ್ಲವೂ ಮುಖ್ಯ. ಅನುಪಮಾ ಶೆಣೈ ಭಟ್‌ ಕಲೆಯನ್ನು ನೌಕರಿ ಮತ್ತು ಸಂಸಾರದೊಂದಿಗೆ ಸಮನ್ವಯಗೊಳಿಸಿ ಯಶ ಕಂಡಿದ್ದಾರೆ.

ಉಡುಪಿ ಮೂಲದ ಕಲಾಪ್ರೇಮಿ ತೋನ್ಸೆ ವೆಂಕಟೇಶ ಶೆಣೈ ಮತ್ತು ಪದ್ಮಿನಿ ವಿ. ಶೆಣೈ ದಂಪತಿಯ ಸುಪುತ್ರಿ ಅನುಪಮಾ ದೂರದರ್ಶನದಿಂದ ಪ್ರಭಾವಿತರಾಗಿ ಆರನೇ ವಯಸ್ಸಿನಿಂದ ಭರತನಾಟ್ಯ ಕಲಿಯಲಾರಂಭಿಸಿದರು. ಹೆತ್ತವರ ಹುರಿದುಂಬಿಸು ವಿಕೆಯಿಂದ ಮುಂಬೈಯ ಮಲಯಾಳಂ ಸಮಾಜದಲ್ಲಿ ಭರತನಾಟ್ಯ ಕಲಿಕೆ ಮುಂದುವರಿಸಿದರು. ತದನಂತರ ಒಡಿಸ್ಸಿ ನೃತ್ಯಾಭ್ಯಾಸದಲ್ಲಿ ತೊಡಗಿ, ತನ್ನ ಅಭಿಜಾತ ಪ್ರತಿಭೆಯನ್ನು ಅನಾವರಣಗೊಳಿಸಲಾರಂಭಿಸಿದರು. ಭರತನಾಟ್ಯ, ಜಾನಪದ, ಒಡಿಸ್ಸಿ ನೃತ್ಯಕಲೆಗಳು ಇವರಲ್ಲಿ ಸಂಗಮಿಸಿವೆ. ಬಿ.ಎಚ್‌.ಎಂ.ಎಸ್ಸಿ ಪದವೀಧರೆಯಾಗಿದ್ದು, ಮುಂಬೈಯ ಪ್ರತಿಷ್ಠಿತ ಕೇಂಬ್ರಿಡ್ಜ್ ಶಾಲೆಯಲ್ಲಿ ಅಧ್ಯಾಪಕಿಯಾಗಿದ್ದಾರೆ.

30 ವರ್ಷ ವಯಸ್ಸಿನ ಇವರು ಪದವಿ ಓದುತ್ತಿರುವಾಗ ಮುಂಬೈ ವಿ.ವಿ.ಯನ್ನು ಪ್ರತಿನಿಧಿಸಿ ಪಡೆದ ಬಹುಮಾನಗಳು ಈ ರಂಗವನ್ನು ಅಪ್ಪಿಕೊಳ್ಳಲು ತಿರುವು ಎನ್ನುತ್ತಾರೆ ಅನುಪಮಾ. ಇಂದುಮತಿ ಲೆಲೆ, ಕೇಟಕಿ ತಂಬಿ ಮತ್ತು ದಿಲೀಪ್‌ ತಂಬಿ ಅನುಪಮಾರ ಗುರುಗಳು. ಏಕಪಾತ್ರಾಭಿನಯಕ್ಕೆ ಪ್ರಾಧಾನ್ಯ ಅವರ ಹೆಚ್ಚುಗಾರಿಕೆ.

ಮಹಾರಾಷ್ಟ್ರ ಮತ್ತು ಕರ್ನಾಟಕದ ಹಲವೆಡೆ ಈ ತನಕ ನೀಡಿದ ನೂರಾರು ಕಾರ್ಯಕ್ರಮಗಳು, ಈಚೆಗೆ ಪ್ರತಿಷ್ಠಿತ ಸ್ವರ-ಸಾಧನಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಮಾನ, ಮುಂಬೈಯ ಖ್ಯಾತ ಕೊಂಕಣಿ ಕಲಾಸಂಘದಲ್ಲಿ ಕೆಲಕಾಲ ಸಕ್ರಿಯ ಸೇವೆ, ಸಂಘದ ಲಿಮ್ಕಾ ಬುಕ್‌ನಲ್ಲಿ ದಾಖಲಾದ ನಾಟಕ “ನಂದಾದೀಪ’ದಲ್ಲಿ ಪಾತ್ರ ನಿರ್ವಹಣೆ, ಕವಳೆಶ್ರೀ, ನಾಗಾಲ್ಯಾಂಡ್‌ ರಾಜ್ಯಪಾಲ ಪದ್ಮನಾಭ ಆಚಾರ್ಯ ಸಹಿತ ಹಲವಾರು ಗಣ್ಯರಿಂದ ಗೌರವ-ಪ್ರಶಂಸೆ ಅನುಪಮಾರ ನೃತ್ಯಕಲೆಯ ಕ್ರಿಯಾಶೀಲತೆ-ಸೃಜನಶೀಲತೆ ಮತ್ತು ಸಾಧನೆಗಳಿಗೆ ಪ್ರಮಾಣಗಳು.  ಪ್ರಯೋಗ ಶೀಲೆಯೂ ಅಧ್ಯಯನಶೀಲೆಯೂ ಆಗಿರುವ ಅನುಪಮಾ ತನ್ನ ಸಾಧನೆಗೆ ತನ್ನ ಪತಿ ಮತ್ತು ಕುಟುಂಬಿಕರ ಉತ್ತೇಜನವನ್ನೂ ಸ್ಮರಿಸುತ್ತಾರೆ.

ಸಂದೀಪ್‌ ನಾಯಕ್‌ ಸುಜೀರ್‌

ಟಾಪ್ ನ್ಯೂಸ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.