ಹಳ್ಳಾಡಿ ಸುಬ್ರಾಯ ಮಲ್ಯ  ನೆನಪಿಗೊಂದು ಟ್ರಸ್ಟ್‌


Team Udayavani, Jul 21, 2017, 3:16 PM IST

21-KALA-5.gif

ಎಳೆ ವಯಸ್ಸಿನಲ್ಲೇ ಯಕ್ಷಲೋಕದಿಂದ ಆಕರ್ಷಿತರಾಗಿ ಅದನ್ನೇ ಉಸಿರಾಗಿಸಿಕೊಂಡು, ಹವ್ಯಾಸಿ ಯಕ್ಷಗಾನ ರಂಗಭೂಮಿಯ ಅವಿಭಾಜ್ಯ ಅಂಗವಾಗಿ ಕುಂದಾಪುರ -ಉಡುಪಿ ಪರಿಸರದಲ್ಲಿ ಸಾವಿರಾರು ಯಕ್ಷಾಸಕ್ತರನ್ನು ಕಲಾವಿದರನ್ನಾಗಿ ಮಾಡುವಲ್ಲಿ ಶ್ರಮಿಸಿದ ಅನನ್ಯ ಸಾಧಕ ಹಳ್ಳಾಡಿ ಸುಬ್ರಾಯ ಮಲ್ಯರ ನಿಧನದ ನಾಲ್ಕು ವರ್ಷಗಳ ಅನಂತರ ಅವರ ಶಿಷ್ಯರು- ಅಭಿಮಾನಿಗಳು ಕೂಡಿ ದಿ| ಯಕ್ಷಗುರು ಹಳ್ಳಾಡಿ ಸುಬ್ರಾಯ ಮಲ್ಯ ಯಕ್ಷ ಶಿಕ್ಷಣ ಪ್ರತಿಷ್ಠಾನ (ರಿ.) ಸ್ಥಾಪಿಸಿದ್ದು, ನಾಳೆ – ಜುಲೈ 22ರಂದು ಸಾೖಬರಕಟ್ಟೆ ಜಿ.ಎಸ್‌.ಬಿ. ಸಭಾಭವನದಲ್ಲಿ ಅದು ವಿಧ್ಯುಕ್ತವಾಗಿ ಉದ್ಘಾಟನೆಗೊಳ್ಳಲಿದೆ.

ತನ್ನೊಳಗೆ ಸಣ್ಣತನವಿರದೆ, ಮೇಲು ಕೀಳುಗಳೆಂಬ ಭೇದವಿರದೆ, ಆ ಜಾತಿ-ಈ ಜಾತಿ ಅನ್ನುವ ಲೆಕ್ಕಾಚಾರವಿರದೆ ಉಡುಪಿ ಜಿಲ್ಲೆಯ ಸಹಸ್ರಾರು ಕಲಾರಾಧಕ ಶಿಷ್ಯ ವೃಂದದ ಹೃದಯದಲ್ಲಿ ಸ್ಥಾಪಿತರಾದವರು ಗುರು ಹಳ್ಳಾಡಿ ಸುಬ್ರಾಯ ಮಲ್ಯರು. ಪ್ರತಿ ಮೇಳದ ಇಂದಿನ ನೂರಾರು ಕಲಾವಿದರು ಮಲ್ಯರ ಶಿಷ್ಯ ಪರಂಪರೆಯವರು. 

ಕುಂದಾಪುರ ತಾಲೂಕಿನ ಶಿರಿಯಾರ ಸಮೀಪ ಹಳ್ಳಾಡಿ ಎಂಬಲ್ಲಿ 1937ರಲ್ಲಿ ಜನಿಸಿದ ಸುಬ್ರಾಯ ಮಲ್ಯರು 5ನೇ ತರಗತಿ ವಿದ್ಯಾಭ್ಯಾಸ ಮಾಡಿ ಪರಿಸರದಲ್ಲಿ ನಡೆಯುವ ಬಯಲಾಟ ಪ್ರದರ್ಶನಗಳಿಂದ ಯಕ್ಷಗಾನದತ್ತ ಆಕರ್ಷಿತರಾದರು. ಮಂದಾರ್ತಿ ಮೇಳದಲ್ಲಿ ಮದ್ದಳೆಗಾರರಾಗಿದ್ದ ಸುರಗಿಕಟ್ಟೆ ಬಸವ ಗಾಣಿಗರಲ್ಲಿ ಮದ್ದಳೆ ವಾದನದ ಪ್ರಾಥಮಿಕ ಅಭ್ಯಾಸ ನಡೆಸಿದರು. ಬಳಿಕ ಗುರು ನಾರ್ಣಪ್ಪ ಉಪ್ಪೂರರ ಶಿಷ್ಯನಾಗಿ ಭಾಗವತಿಕೆ, ಬೆಳಂಜೆ ತಿಮ್ಮಪ್ಪ ನಾಯಕರಿಂದ ಚೆಂಡೆವಾದನ, ಹೆಜ್ಜೆಗಾರಿಕೆ ಹೀಗೆ ಯಕ್ಷಗಾನದ ಎಲ್ಲ ಅಂಗಗಳನ್ನೂ ಅಭ್ಯಸಿಸಿ ಪರಿಪೂರ್ಣತೆ ಪಡೆದು ಹವ್ಯಾಸಿ ರಂಗಭೂಮಿಯ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡರು.

ಉಪ್ಪಿನಕುದ್ರು ಗಣೇಶ ಯಕ್ಷಗಾನ ಮಂಡಳಿಯ ಮದ್ದಳೆಗಾರರಾಗಿ 30 ವರ್ಷ ತಿರುಗಾಟ ಮಾಡಿದ ಅವರು ಅನೇಕ ವಿದೇಶಗಳಲ್ಲಿ ತನ್ನ ಮದ್ದಳೆಯ ನಿನಾದವನ್ನು ಮೊಳಗಿಸಿದರು. 

ಡಾ| ಶಿವರಾಮ ಕಾರಂತರ ಯಕ್ಷಗಾನ ಬ್ಯಾಲೆಗಳಲ್ಲಿ ಭಾಗವಹಿಸಿ ವಿದೇಶ ಸಂಚಾರವನ್ನು ಅರುವತ್ತರ ದಶಕದಲ್ಲೇ ನಡೆಸಿದವರು. ಸಾಲಿಗ್ರಾಮ ಮಕ್ಕಳ ಮೇಳದಲ್ಲಿ ಕಾರ್ಕಡ ಶ್ರೀನಿವಾಸ ಉಡುಪ ಮತ್ತು ಶ್ರೀಧರ ಹಂದೆಯವರ ಸಹವರ್ತಿಯಾಗಿ ಶಾಲಾ ಮಕ್ಕಳನ್ನು ಆ ಕಾಲದಲ್ಲಿ ಯಕ್ಷಗಾನಕ್ಕೆ ಸೆಳೆದ ಕೀರ್ತಿ ಅವರಿಗೆ ಸಲ್ಲುತ್ತದೆ. ಕುಂದಾಪುರ ತಾಲೂಕಿನಾದ್ಯಂತ ಶಾಲಾ ವಾರ್ಷಿಕೋತ್ಸವಗಳ ಯಕ್ಷಗಾನ ಕಾರ್ಯಕ್ರಮಕ್ಕೆ ಮಲ್ಯರ ಉಪಸ್ಥಿತಿ ಅನಿವಾರ್ಯವಾಗಿತ್ತು. ಮಂದಾರ್ತಿ, ಕಮಲಶಿಲೆ, ಸೌಕೂರು, ಅಮೃತೇಶ್ವರಿ, ಮಾರಣಕಟ್ಟೆ ಮೇಳಗಳಲ್ಲಿ ವೃತ್ತಿ ಕಲಾವಿದರಾಗಿ ಸೇವೆ ಸಲ್ಲಿಸಿದರೂ ಅವರ ಗಣನೀಯ ಕೊಡುಗೆ ಹವ್ಯಾಸಿ ರಂಗಭೂಮಿಗೆ. ಜೀವಿತದ ಕೊನೆಯವರೆಗೂ ಮಂದಾರ್ತಿ ಮತ್ತು ಸೌಕೂರು ಮೇಳಗಳ ಮೊದಲ ಮತ್ತು ಕೊನೆಯ ದೇವರ ಸೇವೆಗಳಲ್ಲಿ ನಿರಂತರ ಚೆಂಡೆ ಮದ್ದಳೆ ವಾದನ ನಡೆಸಿದ್ದು ಅವರ ಕಲಾಪ್ರೀತಿ ಮತ್ತು ಕ್ಷೇತ್ರದ ಬಗ್ಗೆ ಅಭಿಮಾನಗಳನ್ನು ಸೂಚಿಸುತ್ತದೆ. ಈ ಭಾಗದಲ್ಲಿ ಸಮಾಜದ ಮೇಲುವರ್ಗದವರು ಯಕ್ಷಗಾನದಲ್ಲಿ ತೊಡಗಿಸಿಕೊಳ್ಳಲು ಮಲ್ಯರ ಕೊಡುಗೆ ಅಪಾರ ಎನ್ನುವುದು ಅನೇಕ ಯಕ್ಷಗಾನ ಪ್ರಿಯರ ಅಭಿಪ್ರಾಯ.

ಸುಬ್ರಾಯ ಮಲ್ಯರನ್ನು ಗುರುತಿಸಬೇಕಾದದ್ದು ಅವರು ಹವ್ಯಾಸಿ ಯಕ್ಷಗಾನ ಕೇತ್ರಕ್ಕೆ ನೀಡಿದ ಅಸಾಧಾರಣ ಕೊಡುಗೆಯ ಮೂಲಕ. ಯಕ್ಷಗಾನದ ಬಗ್ಗೆ ಕೀಳರಿಮೆ ಇದ್ದ ಆ ಕಾಲದಲ್ಲಿ, ಪ್ರಾಥಮಿಕ ಶಾಲೆಯಿಂದ ಹಿಡಿದು ಕಾಲೇಜು ಮಟ್ಟದವರೆಗೂ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ನೀಡಿ ನಿರಂತರ ಕಾರ್ಯಕ್ರಮ ನೀಡಿಸಿದ ಹಿರಿಮೆ ಸುಮಾರು ಐವತ್ತರ ದಶಕದಿಂದೀಚೆಗೆ ಮಲ್ಯರಿಗೆ ಸಲ್ಲಬೇಕು. ನೂರಕ್ಕೂ ಅಧಿಕ ಯಕ್ಷಗಾನ ಸಂಘಗಳನ್ನು ಹುಟ್ಟು ಹಾಕುವುದರ ಮೂಲಕ ಕಲಾ ಜಗತ್ತಿಗೆ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಯಕ್ಷಗಾನ ವೇಷಭೂಷಣವನ್ನು ತಯಾರಿಸಿ ಸಂಘ ಸಂಸ್ಥೆಗಳಿಗೆ ಪೂರೈಸುವ ಕಾಯಕವನ್ನೂ ಅವರು ನಡೆಸಿದ್ದರು. ಜೀವಿತದ ದಿನ ಕೂಡ ತರಬೇತಿ ಮುಗಿಸಿ ಬಂದು ಮಲಗಿದ್ದರು ಎನ್ನುವುದು ಯಕ್ಷಗಾನ ಅವರ ಉಸಿರಾಗಿತ್ತು ಎಂಬುದಕ್ಕೆ ಸಾಕ್ಷಿ. ಇಬ್ಬರು ಹೆಣ್ಣು ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಒದಗಿಸಿ, ಏಕಮಾತ್ರ ಪುತ್ರ ರಾಕೇಶ ಮಲ್ಯರನ್ನು ಉತ್ತಮ ಚೆಂಡೆವಾದಕನನ್ನಾಗಿ ರೂಪಿಸಿದ್ದಾರೆ.

ಹವ್ಯಾಸಿ ರಂಗಭೂಮಿಯ “ಹಿರಿಯ’ ಸುಬ್ರಾಯ ಮಲ್ಯರ ನೆನಪಿನ ಶಿಕ್ಷಣ ಪ್ರತಿಷ್ಠಾನ ಯಕ್ಷಲೋಕಕ್ಕೆ ಅವರ ಅಭಿಮಾನಿಗಳು ಮತ್ತು ಶಿಷ್ಯರ ಬಹುದೊಡ್ಡ ಕೊಡುಗೆಯಾಗಿದೆ.

ಪ್ರೊ| ಎಸ್‌. ವಿ. ಉದಯ ಕುಮಾರ ಶೆಟ್ಟಿ

ಟಾಪ್ ನ್ಯೂಸ್

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ

Aranthodu ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ

Aranthodu ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ

Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ

Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ

Aranthodu ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ

Aranthodu ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ

Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ

Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.