ಅಡವಿ ಗಿರಿಗೆ ಬಣ್ಣದ ಗರಿ


Team Udayavani, Jul 21, 2017, 3:21 PM IST

21-KALA-6.1.gif

ವಿಶಾಲವಾಗಿ ಹರಡಿರುವ ಗಿರಿಗಳ ಸಾಲು, ಅವುಗಳ ಕೊರಳಿಗೆ ಹಾಸಿರುವ ಹಸಿರು ರುಮಾಲು. ಗಿರಿಕಣಿವೆಗಳಲ್ಲಿ ಕಾನನದ ಮೌನ ಧ್ಯಾನ, ಭೂತಾಯಿಯ ಹಸಿರು ಸೆರಗು ಬಾನಿಗೂ ಭೂಮಿಗೂ ತೋರಣ ಬೆಸೆಯುವ ರೀತಿಯಲ್ಲಿ ಒಂದಕ್ಕೊಂದು ಸಮ್ಮೊಹನ. ಇದು ಪಶ್ಚಿಮ ಘಟ್ಟ. ಕಾನನ ಮತ್ತು ಆಗಸದ ಒಡನಾಟದ ಬೆಡಗು. ಅನಂತದವರೆಗೂ ನೀಲಾಗಸದೊಂದಿಗೆ ಗಿರಿಗಳ ಹಸಿರು ಒಡಲು ಬೆರೆತ ಸಹಜ ಸುಂದರ ದೃಶ್ಯಗಳ ಕಡಲನ್ನು ಕಂಡರೆ ನಿಸರ್ಗವೆಂಬುದು ಒಂದು ಬೃಹತ್‌ ಕಲಾಗ್ಯಾಲರಿ ಎಂಬ ವಿಸ್ಮಯವನ್ನು ಒಪ್ಪಿಕೊಳ್ಳಲೇಬೇಕು. ನೋಡುವ ಕಣ್ಣು -ಗ್ರಹಿಸುವ ಮನಸ್ಸು ಇದ್ದರೆ ಪಶ್ಚಿಮ ಘಟ್ಟದ ಪ್ರತಿ ದೃಶ್ಯಕ್ಕೂ ಒಂದು ಕಲಾ ಚೌಕಟ್ಟು ಇದ್ದೇ ಇದೆ. ಮಳೆಗಾಲದಲ್ಲಿ ಪಶ್ಚಿಮಘಟ್ಟದ ಯಾವುದೇ ಗಿರಿ ಕಣಿವೆ ಪ್ರದೇಶಕ್ಕೆ ಹೋದರೂ ಕ್ಷಣಕ್ಷಣಕ್ಕೂ ರಮಣೀಯ ದೃಶ್ಯಗಳು ತಮ್ಮ ಚೆಲುವಿನ ಅಗಾಧತೆಯಿಂದ ಮೋಡಿ ಮಾಡಬಲ್ಲವು. 

ಮಳೆಗಾಲದ ಒಂದು ದಿನದ ಮಧುರ ಕ್ಷಣಗಳನ್ನು ಸವಿಯಲು ಹಾಗೂ ಸವಿದ ದೃಶ್ಯಗಳನ್ನು ಕುಂಚದಲ್ಲಿ ಸೆರೆಹಿಡಿಯಲು ಮಂಗಳೂರಿನ ಕರಾವಳಿ ಚಿತ್ರಕಲಾ ಚಾವಡಿಯ ಕಲಾವಿದರು ಹೊರಟದ್ದು ಸಕಲೇಶಪುರದ ಪಶ್ಚಿಮ ಘಟ್ಟದಂಚಿನ  ಅಚ್ಚನಹಳ್ಳಿ ಎಂಬ ಪ್ರಕೃತಿಯ ಸುಂದರ ಮಡಿಲಿಗೆ. ಅಚ್ಚನಹಳ್ಳಿ  ಸುಂದರವಾದ ಗಿರಿ- ಕಣಿವೆಗಳ ತಾಣ. ನಾವು ಅಚ್ಚನಹಳ್ಳಿ ತಲುಪುವ ಹೊತ್ತಿಗೆ ಹನಿಹನಿ ಮಳೆಯೊಂದಿಗೆ ಇಬ್ಬನಿ ದಿಬ್ಬಣವು ಗಿರಿಗಳಿಂದ ನಿಧಾನಕ್ಕೆ ಹೊರಡಲನುವಾಗಿತ್ತು. ಮಂಜು ಸಿಂಚನದೊಂದಿಗೆ ಸುತ್ತಮುತ್ತಲಿನ ಪ್ರದೇಶವೆಲ್ಲ ಮಸುಕಾಗಿ ಪುಳಕಿತಗೊಂಡಿರುವಂತಿತ್ತು. ಅಚ್ಚನಹಳ್ಳಿಯಲ್ಲಿರುವ ಗೆಳೆಯರಾದ ಅವಿನಂದ್‌ ಅವರ ಸುಂದರವಾದ ಮನೆ ಎತ್ತರದಲ್ಲಿದೆ, ಸುತ್ತಲಿನ ನಿಸರ್ಗ ದೃಶ್ಯವು ಈ ಮನೆಯಿಂದ ರಮಣೀಯವಾಗಿ ಕಾಣುತ್ತದೆ. ಮನೆಯ ಯಜಮಾನರಾದ ವಿಜಯ ವಿವೇಕಾನಂದ್‌ ಹಾಗೂ ರೂಪಾ ಕಲಾವಿದರನ್ನು ಆತ್ಮೀಯವಾಗಿ ಸ್ವಾಗತಿಸಿ, ಸತ್ಕರಿಸಿದ ರೀತಿಯೂ ಮಲೆನಾಡಿನ ಸೌಂದರ್ಯದ ಪ್ರತೀಕವಾಗಿತ್ತು. ನಮ್ಮ ತಂಡದ‌ ಒಂದಷ್ಟು ಚಾರ‌ಣಿಗರು ಸಮೀಪದ ಅಗ್ನಿಬೆಟ್ಟವನ್ನೇರಿದರೆ ಇನ್ನೊಂದಿಷ್ಟು ಕಲಾವಿದರು ಕ್ಯಾನ್ವಾಸ್‌ನಲ್ಲಿ ಅಚ್ಚನಹಳ್ಳಿಯ ಸುತ್ತಲಿನ ಇಬ್ಬನಿ ಹೊದಿಕೆಯ ಹಬ್ಬದ ವಾತಾವರಣವನ್ನು ಚಿತ್ರಿಸಿದರು. ಕಲಾವಿದರಾದ ಗಣೇಶ್‌ ಸೋಮಯಾಜಿ ಗಿರಿ ಕಂದರಗಳ ಹಸಿರು ಬೆಡಗನ್ನು ಚಿತ್ರಿಸಿದರೆ ತಾರನಾಥ್‌ ಕೈರಂಗಳ ಮರಗಿಡಗಳ ಮೇಲೆ ಇದ್ದ ಮಂಜಿನ ಹೊದಿಕೆಯನ್ನು, ತಿಳಿಕಡು ಬಣ್ಣಗಳ ಸಂಯಮ ದೊಂದಿಗೆ ರಚಿಸಿದರು. ಹಸಿರು ಹಾಡಿಯ ಮೌನನಿನಾದವನ್ನು ವರ್ಣಾಭಿವ್ಯಕ್ತಿಗೊಳಿಸಿದ್ದು ಸುಧೀರ್‌ ಕಾವೂರು. ಬಾಲಕೃಷ್ಣ ಶೆಟ್ಟಿಯವರು ಬಾನಿಗೆ ಮರದ ಚುಂಬನವನ್ನು ಚಿತ್ರಿಸಿದರು. ಪೂರ್ಣೇಶ್‌ ಅವರು ಮರಗಿಡ ಬಳ್ಳಿಗಳ ಹಸಿರು ಉತ್ಸವವನ್ನು ಕ್ಯಾನ್ವಾಸಿಗಿಳಿಸಿದರು. ಕಲಾವಿದರು ತಮ್ಮ ಕಲಾಕೃತಿಗಳನ್ನು ರಚಿಸುತ್ತಿರುವಾಗ ನಿಸರ್ಗ ಕ್ಷಣ ಕ್ಷಣವೂ ಬದಲಾಗುತ್ತ ಕಲಾವಿದರಿಗೆ ಸ್ಫೂರ್ತಿ ನೀಡುತ್ತಿತ್ತು. ನಿಸರ್ಗ ಸಹಜ ವರ್ಣ ಸಂಯೋಜನೆ ಗಳ ಆಗಮನ ಮತ್ತು ನಿರ್ಗಮನಗಳು ಅರಿವಿಲ್ಲದಂತೆ ಕಲಾಕೃತಿಗಳಾಗಿ ಕ್ಯಾನ್ವಾಸ್‌ಗೆ ಇಳಿಯುತ್ತಲೇ ಇದ್ದವು. 

ದಿನೇಶ್‌ ಹೊಳ್ಳ

ಟಾಪ್ ನ್ಯೂಸ್

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.