ಮನೋಜ್ಞ ನೃತ್ಯಾಭಿವಂದನಾ


Team Udayavani, Oct 6, 2017, 2:33 PM IST

06-SAP-24.jpg

ಮಂಗಳೂರು ಪುರಭವನದಲ್ಲಿ ಇತ್ತೀಚೆಗೆ ನಾಟ್ಯಾರಾಧನಾ ಕಲಾಕೇಂದ್ರ (ರಿ.) ಹಮ್ಮಿಕೊಂಡ ನೇಹಾ ವೈ. ದೇವಾಡಿಗ, ಸ್ಪಂದನಾ ಭಟ್‌, ಧವಳಾ ಮತ್ತು ಅನಘಾ ರಾವ್‌ ಎಂಬ ತನ್ನ ನಾಲ್ವರು ವಿದ್ಯಾರ್ಥಿನಿಯರ “ನೃತ್ಯಾಭಿವಂದನಾ’ ಮನೋಜ್ಞವಾಗಿತ್ತು.

ತಿಲಂಗ್‌ ರಾಗ, ಆದಿತಾಳದ ಪುಷ್ಪಾಂಜಲಿಗೆ ಹೆಜ್ಜೆ ಹಾಕುತ್ತಾ ಕಾರ್ಯಕ್ರಮವನ್ನು ಆರಂಭಿಸಿದ ನೇಹಾ, ಧವಳಾ ಮತ್ತು ಅನಘಾ ಸುಂದರವಾದ ಅಡವುಗಳಿಂದ ಸಂಯೋಜಿಸಲ್ಪಟ್ಟ ನೃತ್ಯ ಪ್ರಸ್ತುತಿಯೊಂದಿಗೆ ಕಾರ್ಯಕ್ರಮಕ್ಕೆ ಶುಭ ನಾಂದಿಯನ್ನು ಹಾಡಿದರು. ವಿ| ಸುಮಂಗಲಾ ರತ್ನಾಕರ್‌ ರಚನೆಯ ಈ ನೃತ್ಯ ಸೃಜನಶೀಲವಾಗಿದ್ದು, ದೇವ-ಗುರು-ಸಭೆಯ ವಂದನೆಯ ಸಂದರ್ಭದಲ್ಲಿ ಬಳಸಿದ ಗದ್ಯಭಾಗ ಆಕರ್ಷಕವಾಗಿತ್ತು. ಬಳಿಕ ಅವರದೇ ರಚನೆಯ ಶ್ರೀದೇವಿ ಮಹಾತ್ಮೆಯ ಕಥೆಯನ್ನಾಧರಿಸಿದ ಭಕ್ತಿರಸ ಪ್ರಧಾನ ಶಬ್ದಂ ರಾಗ ಮಾಲಿಕೆ- ಮಿಶ್ರಛಾಪು ತಾಳದಲ್ಲಿ ನೇಹಾ ಮತ್ತು ಧವಳಾ ಅವರಿಂದ ಸೊಗಸಾಗಿ ಹೊರಹೊಮ್ಮಿತು. ಇಲ್ಲಿ ಪ್ರಸ್ತುತಗೊಂಡ ಮಹಿಷ-ದೇವಿ ಭಾಗದ ವಿಸ್ತೃತ ಅಭಿನಯ ಪರಿಣಾಮಕಾರಿಯಾಗಿತ್ತು.

ಕಾರ್ಯಕ್ರಮದ ಪ್ರಧಾನ ಪ್ರಸ್ತುತಿ ಪದವರ್ಣ. ಇಲ್ಲಿ ವಿರಹೋತ್ಕಂಠಿತಾ ಅವಸ್ಥೆಯ ನಾಯಿಕೆಯ ಅಭಿನಯಕ್ಕೆ ವಿ| ಸುಮಂಗಲಾ ರತ್ನಾಕರ್‌ ರಚನೆಯ ಅಷ್ಟರಾಗ ಮಾಲಿಕೆ -ಆದಿತಾಳದ ಕಾಂತನ ಕರೆ ತಾರೆಯನ್ನು ಆರಿಸಲಾಗಿತ್ತು ನೇಹಾ, ಧವಳಾ ಹಾಗೂ ಅನಘಾ ಪ್ರಸ್ತುತಪಡಿಸಿದ ಈ ನೃತ್ಯದಲ್ಲಿ ತನ್ನ ನಾಯಕನನ್ನು ವರ್ಣಿಸುವ ಭಾಗ, ಕೃಷ್ಣನ ವೇಣುನಾದಕ್ಕೆ ಮನಸೋತೆನೆಂಬ ಮೋಹನ ರಾಗದ ಸಂಚಾರಿ ಭಾವ ಹಾಗೂ ಉತ್ತರಾರ್ಧದಲ್ಲಿ ಅಮೃತವರ್ಷಿಣಿ ರಾಗಕ್ಕೆ ಅಳವಡಿಸಲ್ಪಟ್ಟ ವಿರಹಿಣಿಯ ಭಾವನೆಗಳು ಮನತಟ್ಟಿದವು. ಕನ್ನಡ ಭಾಷೆಯ ಸಾಹಿತ್ಯವಿದ್ದ ಪದವರ್ಣ ಸಭಿಕರಿಗೆ ಆಸ್ವಾದಿಸಲು ಅನುಕೂಲ ಮಾಡಿಕೊಟ್ಟಿತು. ಸಾಹಿತ್ಯವು ರಾಗಮುದ್ರಿಕೆಯಿಂದ ಕೂಡಿ ಅರ್ಥಪೂರ್ಣವಾಗಿತ್ತು. ವಿಶೇಷವಾಗಿ ಅಮೃತವರ್ಷಿಣಿ ರಾಗ ವಿಸ್ತಾರದ ಗಾಯನ ಅದ್ಭುತವಾಗಿತ್ತು.

ಮುಂದೆ ಸೇರಿದಂತೆ ನಾಲ್ವರೂ ಜತೆಯಾಗಿ ಪ್ರಸ್ತುತ ಪಡಿಸಿದ್ದು ತಂಜಾವೂರು ಶಂಕರಯ್ಯ ಅವರ ರೇವತಿ ರಾಗ-ಆದಿತಾಳದ “ಮಹಾದೇವ ಶಿವಶಂಭೋ’ ಕೃತಿ. ಇಲ್ಲಿ ಅಳವಡಿಸಲ್ಪಟ್ಟ ಶಿವನ ಭಂಗಿಗಳು, ಚುರುಕಾದ ಲಯ ದೊಂದಿಗೆ ಅಚ್ಚುಕಟ್ಟಾಗಿ ಪ್ರಸ್ತುತಗೊಂಡ ನೃತ್ಯ ಮಕ್ಕಳ ಭದ್ರ ಅಡಿಪಾಯದ ಅಂಗಶುದ್ಧಿಯನ್ನು ತೆರೆದಿಟ್ಟಿತು.

ಕಾರìಕ್ರಮದ ಉತ್ತರಾರ್ಧದಲ್ಲಿ ಎಸ್‌. ಷಡಕ್ಷರಿ ಅವರ ರಾಗಮಾಲಿಕೆ ಆದಿತಾಳದ ತ್ರಿಮಾತಾ ಕೌತ್ವಂನ್ನು ಚುಟುಕಾಗಿ ನಾಲ್ವರು ಕಲಾವಿದೆಯರು ಪ್ರಸ್ತುತಪಡಿಸಿ ದರು. ಬಳಿಕ ಗುರು ಸುಮಂಗಲಾ ರತ್ನಾಕರ್‌ ರಚನೆಯ ರಾಮನ ಕುರಿತಾದ ರಾಗಮಾಲಿಕೆ- ಆದಿತಾಳದ ದೇವರ ನಾಮವನ್ನು ಸ್ಪಂದನಾ ಹಾಗೂ ಅನಘಾ ಸೊಗಸಾಗಿ ಅಭಿನಯಿಸಿದರು. ಶಬರಿ- ರಾಮನ ಭಾಗದಲ್ಲಿನ ಅಭಿನಯ ಮಕ್ಕಳ ಪಾತ್ರ ತಲ್ಲೀನತೆಗೆ ಸಾಕ್ಷಿಯಾಯಿತು. ಮುಂದೆ ಸ್ಪಂದನಾ ತನಿಯಾಗಿ ಪ್ರದರ್ಶಿಸಿದ ವಿ| ಸುಮಂಗಲಾ ರತ್ನಾಕರ್‌ ರಚನೆಯ ಪ್ರೋಷಿತ ಭತೃìಕಾ ಅವಸ್ಥೆಯ ಎನ್ನ ಮರೆತನೊ ಜಾವಳಿ ಕಲಾವಿದೆಯ ಅಭಿನಯ ಫೌಡಿಮೆಗೆ ಕನ್ನಡಿಯಾಯಿತು.

ಚುರುಕಾದ ಲಯಪಕ್ವತೆಯಿಂದ ಕೂಡಿದ ದ್ವಾರಕೀಕೃಷ್ಣಸ್ವಾಮಿ ರಚಿಸಿದ ವಲಚಿ ರಾಗ -ಆದಿತಾಳದ ತಿಲ್ಲಾನ, ಮಂಗಲಂ ನೃತ್ಯದೊಂದಿಗೆ ಕಾರ್ಯಕ್ರಮ ಬಹುಕಾಲ ನೆನಪಿನಲ್ಲಿ ಉಳಿಯುವಂತೆ ಕೊನೆಗೊಂಡಿತು. 
ಪ್ರತಿಭಾನ್ವಿತೆಯರಾದ ನಾಲ್ವರೂ ಸತತ ಅಭ್ಯಾಸವನ್ನು ಮುಂದುವರಿಸಿದಲ್ಲಿ ಪರಿಪಕ್ವ ಕಲಾವಿದೆಯರಾಗಿ ಬೆಳಗುವು ದರಲ್ಲಿ ಸಂದೇಹವಿಲ್ಲ. ನೃತ್ಯಕ್ಕೆ ಬಳಸಿದ ಸಾಹಿತ್ಯವೆಲ್ಲವೂ ಕನ್ನಡ ಹಾಗೂ ಕನ್ನಡದಲ್ಲಿಯೂ ಕನ್ನಡವಾಗಿ ಬಳಸುವ ಸಂಸ್ಕೃತ ಮೂಲ ಶಬ್ದಗಳಿಂದ ಕೂಡಿದ್ದು ವಿಶೇಷವಾಗಿತ್ತು.

ನಟುವಾಂಗ ಮತ್ತು ನೃತ್ಯ ನಿರ್ದೇಶನದ ಜತೆಗೆ ಸಾಹಿತ್ಯ ರಚನೆಯ ಮೂಲಕ ಗುರು ವಿ| ಸುಮಂಗಲಾ ರತ್ನಾಕರ್‌ ತಮ್ಮ ಸಾಮರ್ಥ್ಯವನ್ನು ಪ್ರಚುರ ಪಡಿಸಿದರು. ಹಾಡುಗಾರಿಕೆಯಲ್ಲಿ ವಿ| ಶೀಲಾ ದಿವಾಕರ್‌ ತಮ್ಮ ಸುಶ್ರಾವ್ಯ ಕಂಠ ಮತ್ತು ಭಾವಪೂರ್ಣ ಗಾಯನದೊಂದಿಗೆ ಪ್ರೇಕ್ಷಕ ರನ್ನು ಸೆರೆಹಿಡಿದರು. ಮೃದಂಗದಲ್ಲಿ ವಿ| ಪಯ್ಯನ್ನೂರು ರಾಜನ್‌, ಕೊಳಲಿನಲ್ಲಿ ವಿ| ಮುರಳೀಧರ ಆಚಾರ್ಯ, ಉಡುಪಿ, ಖಂಜಿರ ಹಾಗೂ ಮೋರ್ಸಿಂಗ್‌ನಲ್ಲಿ ಕೃಷ್ಣ ಗೋಪಾಲ್‌ ಪುಂಜಾಲಕಟ್ಟೆ ಭಾವಕ್ಕನುಗುಣವಾದ ನುಡಿತ ದೊಂದಿಗೆ ತಮ್ಮ ಕಲಾಕೌಶಲವನ್ನು ಪ್ರತಿಬಿಂಬಿಸಿದರು.

ಕಾರ್ಯಕ್ರಮ ಸಂಘಟಿಸಿದ ನಾಟ್ಯಾರಾಧನಾ ಕಲಾಕೇಂದ್ರ ಹಾಗೂ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸುತ್ತಿರುವ ವಿದ್ಯಾರ್ಥಿನಿಯರ ಹೆತ್ತವರ ಶ್ರಮ ಪ್ರಶಂಸನೀಯ. ಮಿತ ವ್ಯಯದ ದೃಷ್ಟಿಯಲ್ಲಿ ಹೀಗೆ ಕೆಲವು ಮಕ್ಕಳು ಸೇರಿ ರಂಗ ಪ್ರವೇಶದಂಥ ಕಾರ್ಯಕ್ರಮ ನೀಡುವುದು ಅನುಸರಣೀಯ.

ವಿ| ವಿದ್ಯಾ ಮನೋಜ್‌

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.