ಬಾಗಲಕೋಟೆ; ಗಂಡನ ಶವ ಬಿಟ್ಟು ಹಣದೊಂದಿಗೆ ಹೆಂಡತಿ ಎಸ್ಕೇಪ್!
Team Udayavani, Apr 18, 2017, 6:25 PM IST
ಬಾಗಲಕೋಟೆ:ಅನಾರೋಗ್ಯದಿಂದ ಸಾವಿಗೀಡಾಗಿದ್ದ ಪತಿಯ ಶವವನ್ನು ಬಿಟ್ಟು ಹಣದೊಂದಿಗೆ ಪತ್ನಿ ಪರಾರಿಯಾಗಿರುವ ಘಟನೆ ಬಾಗಲಕೋಟೆಯ ಹೊನ್ನಾಕಟ್ಟಿ ಗ್ರಾಮದಲ್ಲಿ ನಡೆದಿದೆ.
ಹೊನ್ನಾಕಟ್ಟಿ ಗ್ರಾಮದಲ್ಲಿ ಸೋಮವಾರ ರಾತ್ರಿ ರೇಣುಕಾ ಪತಿ ಶಿವಲಿಂಗಪ್ಪ ಬೇವಿನಮಟ್ಟಿ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಏತನ್ಮಧ್ಯೆ ಪತ್ನಿ ರೇಣುಕಾಗೆ ಪತಿಯ ಶವಸಂಸ್ಕಾರಕ್ಕಿಂತ ಹಣವೇ ಹೆಚ್ಚಾಗಿತ್ತು.
ಯಾಕೆಂದರೆ 4 ವರ್ಷದ ಹಿಂದೆ ಶಿವಲಿಂಗಪ್ಪ ಸುಮಾರು 13 ಎಕರೆ ಜಮೀನನ್ನು 80 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದರು. ಪತಿಯ ಹಣದ ಮೇಲೆ ಕಣ್ಣಿಟ್ಟಿದ್ದ ಪತ್ನಿ ರೇಣುಕ ಗಂಡನ ಅಂತ್ಯ ಸಂಸ್ಕಾರ ಮಾಡದೇ ಹಣದೊಂದಿಗೆ ಮಗನ ಜೊತೆ ಪರಾರಿಯಾಗಿದ್ದಳು.
ಅಂತ್ಯ ಸಂಸ್ಕಾರ ಮಾಡದೇ ಹೊರಟಿದ್ದ ಪತ್ನಿ ರೇಣುಕಾಳಿಗೆ ಗ್ರಾಮಸ್ಥರು ಛೀಮಾರಿ ಹಾಕಿದ್ದರು. ಆದರೆ ರೇಣುಕಾ ಗ್ರಾಮಸ್ಥರ ವಿರುದ್ಧವೇ ದೂರು ನೀಡುವ ಬೆದರಿಕೆ ಹಾಕಿ ತೆರಳಿದ್ದಳು ಎಂದು ಮಾಧ್ಯಮದ ವರದಿ ತಿಳಿಸಿದೆ.
ಬಳಿಕ ಗ್ರಾಮಸ್ಥರೇ ಶಿವಲಿಂಗಪ್ಪ ಅವರ ಅಂತ್ಯಸಂಸ್ಕಾರ ನಡೆಸಿದ್ದರು. ಬಾಗಲಕೋಟೆ ಠಾಣೆಯಲ್ಲಿ ರೇಣುಕಾ ವಿರುದ್ಧ ಗ್ರಾಮಸ್ಥರು ದೂರು ದಾಖಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು
I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ