ಕಾಪಾಡೋ ಆಂಜನೇಯ ..: ದೇವಸ್ಥಾನದ ಗರ್ಭಗುಡಿಗೆ ನುಗ್ಗಿದ ದೈತ್ಯ ಮೊಸಳೆ
Team Udayavani, May 17, 2017, 2:13 PM IST
ಬಾಗಲಕೋಟೆ: ಇಲ್ಲಿನ ಬೀಳಗಿಯ ಕೃಷ್ಣಾ ನದಿಯ ತೀರದಲ್ಲಿ ಭೀಕರ ಬರ ಆವರಿಸಿದ್ದು ಜಲಚರಗಳಾದ ಮೊಸಳೆಗಳು ಕಂಗಾಲಾಗಿ ಹೋಗಿದ್ದು, ಆಹಾರ ನೀರು ಅರಸಿ ಗ್ರಾಮಗಳತ್ತ ನುಗ್ಗುತ್ತಿದ್ದು , ಜನರು ಭಯಭೀತರಾಗಿದ್ದಾರೆ.
ಬುಧವಾರ ಬೀಳಗಿಯಲ್ಲಿರುವ ಹನುಮಂತ ದೇವಾಲಯಕ್ಕೆ ಪೂಜೆಗೆಂದು ತೆರಳಿದ್ದ ಯುವಕನೊಬ್ಬ ದೈತ್ಯಾಕಾರದ ಮೊಸಳೆ ಕಂಡು ದಿಗಿಲಾಗಿದ್ದಾನೆ. ಕೂಡಲೇ ಸಾರ್ವಜನಿಕರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ಬರೋಬ್ಬರಿ 12 ಅಡಿ ಉದ್ದ 150 ಕೆ.ಜಿ ತೂಕದ ಮೊಸಳೆಯನ್ನು ಅಲಮಟ್ಟಿ ಜಲಾಶಯದ ಸುರಕ್ಷಿತ ಪ್ರದೇಶದಲ್ಲಿ ಬಿಡಲಾಗಿದೆ.
ಇನ್ನೊಂದೆಡೆ ಶೆಂಗಾ ಹೊಲದಲ್ಲಿ 8 ಅಡಿ ಉದ್ದದ ಮೊಸಳೆ ಆಹಾರವನ್ನು ಅರಸುತ್ತಿರುವುದು ಪತ್ತೆಯಾಗಿದ್ದು, ಹತ್ತಿರಕ್ಕೆ ಹೋದ ಗ್ರಾಮಸ್ಥರ ಮೇಲೆ ಎರಗಲು ಮುಂದಾಗಿದೆ. ಅದನ್ನು ರಕ್ಷಿಸಲಾಗಿದೆ.
ಈಗಾಗಲೇ ನೀರು ಆಹಾರ ದೊರಕದೆ ಮೂರು ಮೊಸಳೆಗಳು ಸಾವನ್ನಪ್ಪಿದ್ದು, 8 ಕ್ಕೂ ಹೆಚ್ಚು ಮೊಸಳೆಗಳನ್ನು ರಕ್ಷಿಸಲಾಗಿದೆ.
ಕೃಷ್ಣಾ ತೀರದ ಜನರು ಎಚ್ಚರಿಕೆಯಿಂದರಬೇಕು ಎಂದು ಅರಣ್ಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್
Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ
Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು
ತಾಕತ್ತಿದ್ದರೆ ಯತ್ನಾಳ್ ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಲಿ: ಪಾಟೀಲ್
Bagalkote; ಯತ್ನಾಳ್ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ…: ಶಿವಾನಂದ ಪಾಟೀಲ್ ಸವಾಲು