ಸತೀಶ್ ನೀನಾಸಂಗೆ ಬೇಸರ!
Team Udayavani, Jan 17, 2017, 11:14 AM IST
ಸತೀಶ್ ನೀನಾಸಂ ಸಖತ್ ಬೇಜಾರಾಗಿದ್ದಾರೆ. ಅವರ ಬೇಸರಕ್ಕೆ ಕಾರಣ “ಬ್ಯೂಟಿಫುಲ್ ಮನಸುಗಳು’ ಚಿತ್ರಕ್ಕೆ ಚಿತ್ರಮಂದಿರಗಳು ಸಿಗದಿರುವುದು. ಚಿತ್ರಮಂದಿರಗಳ ಸಮಸ್ಯೆಯಿಂದಾಗಿಯೇ ಚಿತ್ರದ ಜಾಹೀರಾತುಗಳಲ್ಲೆಲ್ಲೂ, ಚಿತ್ರ ಎಲ್ಲೆಲ್ಲಿ ಬಿಡುಗಡೆಯಾಗುತ್ತಿದೆ ಎಂಬುದನ್ನು ಪ್ರಕಟಿಸಿಲ್ಲ ಎಂದನಿಸುತ್ತದೆ.
ಕಾರಣ ಏನೇ ಇರಲಿ, ಸತೀಶ್ ಮಾತ್ರ ತಮ್ಮ ಚಿತ್ರಕ್ಕೆ ಚಿತ್ರಮಂದಿರಗಳು ಸಿಗದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಈ ಕುರಿತು ಅವರು ತಮ್ಮ ಫೇಸ್ಬುಕ್ನಲ್ಲಿ ಇಷ್ಟುದ್ದ ಮೆಸೇಜ್ ಹಾಕಿದ್ದಾರೆ. ಕರ್ನಾಟಕದಲ್ಲಿ ಕನ್ನಡದ ಚಿತ್ರಗಳಿಗೆ ಅದೆಂತಹ ಸ್ಥಿತಿ ಇದೆ ಎಂಬುದನ್ನು ಅವರು ಹೇಳುವ ಪ್ರಯತ್ನವನ್ನು ಮಾಡಿದ್ದಾರೆ. ಸತೀಶ್ ಪತ್ರದ ಸಾಲುಗಳು ಹೀಗಿವೆ:
20ನೇ ತಾರೀಖು ನಮ್ಮ ಸಿನಿಮಾ ಬಿಡುಗಡೆ. ಎರಡು ತೆಲುಗು ಸಿನಿಮಾಗಳು ಕರ್ನಾಟಕದಲ್ಲಿರೋ ಅರ್ಧ ಚಿತ್ರಮಂದಿರಗಳನ್ನ ಖರೀದಿ ಮಾಡಿವೆ. 27ಕ್ಕೆ ಎರಡು ಹಿಂದಿ ಸಿನಿಮಾಗಳು ಎಲ್ಲಾ ಮಲ್ಟಿಪ್ಲೆಕ್ಸ್ಗಳನ್ನ ಆಕ್ರಮಣ ಮಾಡುತ್ತೆ. ನಾವು ಒಂದೊಳ್ಳೆ ಸ್ವಮೇಕ್ ಸಿನಿಮಾ ಮಾಡಿ ಬಾಯಿ ಬಡಕೋತ ಇದ್ದೀವಿ. ನಮಗೆ ಥಿಯೇಟರ್ ಇಲ್ಲ.
ಎಲ್ಲಿ ಬಿಡುಗಡೆ ಮಾಡಬೇಕು? ಬಾಂಬೇನ, ಹೈದರಾಬಾದ ಅಥವಾ ಚೆನ್ನೈನಲ್ಲಾ? ಹೊಸಪೇಟೇಲಿ “ಕಿರಿಕ ಪಾರ್ಟಿ’ ತೆಗೆದು, ತೆಲುಗು ಸಿನಿಮಾ ಹಾಕ್ತೀರ. ನಮ್ಮ ಬಯಿಗೆ ಮಣ್ಣು ಹಾಕಿ, ಬೇರೆಯವರ ಬಾಯಿಗೆ ಅಮೃತ ಹಾಕಿ. ಯಾಕೆ, ಯಾರು ಇಲ್ವಾ ಕೇಳ್ಳೋರು? ಅವರ ರಾಜ್ಯದಲ್ಲಿ ನಮ್ಮ ಸಿನಿಮಾನೂ ಹಾಕಿ. ನಮುª ಒಳ್ಳೆ ಸಿನಿಮಾಗಳೇ. ಹೊಸ ನಿರ್ದೇಶಕರು, ಹೊಸ ನಟರು, ಹೊಸ ಪ್ರಯತ್ನ ಮಾಡಿ ಗೆದ್ದು ತೋರಿಸಿದ್ದಾರೆ.
ಕನ್ನಡದಲ್ಲಿ ಹೊಸ ಪ್ರಯತ್ನ ಆಗೋಲ್ಲ ಅಂತ ಇಷ್ಟು ದಿನ ಬೊಬ್ಬೆ ಹೊಡೆಯುವವರೆಲ್ಲಾ ಎಲ್ಲಿದ್ದೀರಾ? ಇಡೀ ಇಂಡಿಯಾದಲ್ಲಿ ನಮ್ಮಷ್ಟು ವಿಶಿಷ್ಟ ಪ್ರಯತ್ನ ಈಗ ಯಾರೂ ಮಾಡ್ತಿಲ್ಲ. ನಾವು ಮಾಡ್ತಾ ಇದ್ದೀವಿ. ತುಳೀರಿ ಎಲ್ಲಾ ಕಡೆ. ನಾವು ಭಿಕ್ಷುಕರು ನಮ್ಮ ಜಾಗದಲ್ಲಿ. ನಮ್ಮ ಥಿಯೇಟರ್ಗೆ ಭಿಕ್ಷೆ ಬೇಡಬೇಕು ಭಿಕ್ಷುಕರು ನಾವು … ಹೀಗೆ ಸತೀಶ್ ನೀನಾಸಂ ತಮ್ಮ ಬೇಸರವನ್ನು ಹೊರಹಾಕಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್