ಕಿರಿಕ್‌ ಕೀರ್ತಿ ಜತೆ ಸಂಜನಾ ಡಿಂಗು ಡಾಂಗು!


Team Udayavani, Feb 18, 2017, 11:49 AM IST

Sanjana-1.jpg

“ಬಿಗ್‌ ಬಾಸ್‌’ ಮನೆಗೆ ಹೋಗಿ ಒಂದಷ್ಟು ಸುದ್ದಿಯಾಗಿ ಹೊರಬಂದ ನಿರ್ದೇಶಕ ಓಂಪ್ರಕಾಶ್‌ ರಾವ್‌, ಒಂದು ಸಿನಿಮಾ ಅನೌನ್ಸ್‌ ಮಾಡಿಬಿಟ್ಟರು. ಅವರು ನಿರ್ದೇಶಿಸಲಿರುವ ಸಿನಿಮಾಗೆ “ಕಿರಿಕ್‌ ಕೀರ್ತಿ’ ಎಂದು ನಾಮಕರಣವನ್ನೂ ಮಾಡಿಬಿಟ್ಟರು! ಈ “ಕಿರಿಕ್‌ ಕೀರ್ತಿ’ ಹೆಸರು ಕೇಳಿದೊಡನೆ, ನೆನಪಾಗೋದು ಮತ್ತದೇ “ಬಿಗ್‌ ಬಾಸ್‌’ ಮನೆಯ ಮತ್ತೂಬ್ಬ ಸ್ಪರ್ಧಿ ಕಿರಿಕ್‌ ಕೀರ್ತಿ. ಹೌದು. ಕಿರಿಕ್‌ ಕೀರ್ತಿ ಅವರಿಗಾಗಿ, ಓಂ ಪ್ರಕಾಶ್‌ರಾವ್‌ ಅವರು ಸಿನಿಮಾವೊಂದನ್ನು ನಿರ್ದೇಶಿಸಲು ಅಣಿಯಾಗಿದ್ದಾರೆ.

ಈಗಾಗಲೇ ಅವರು ಅದಕ್ಕೆ ತಕ್ಕಂತೆ ತಯಾರೂ ಮಾಡಿಕೊಂಡಿದ್ದಾಗಿದೆ. ಅಂದಹಾಗೆ, ಈ ಸಿನಿಮಾಗೆ ಕಿರಿಕ್‌ ಕೀರ್ತಿ ಹೀರೋ. ಈ ಸುದ್ದಿ ಈ ಹಿಂದೆಯೇ ಹೊರಬಿದ್ದಿತ್ತು. ಆದರೆ, ನಿರ್ದೇಶಕ ಓಂಪ್ರಕಾಶ್‌ರಾವ್‌ ಅವರು ಮಾತ್ರ ಯಾರನ್ನು ನಾಯಕಿಯನ್ನಾಗಿಸುತ್ತಾರೆ ಎಂಬುದು ಮಾತ್ರ ಇನ್ನು, ಗೌಪ್ಯವಾಗಿತ್ತು. ಈಗ ಓಂಪ್ರಕಾಶ್‌ರಾವ್‌, ಕಿರಿಕ್‌ ಕೀರ್ತಿಗೆ ನಾಯಕಿಯನ್ನು ಹುಡುಕಿದ್ದಾಗಿದೆ. ಅವರು ಕೂಡ ಬಿಗ್‌ಬಾಸ್‌ ಸ್ಪರ್ಧಿ ಅನ್ನೋದು ವಿಶೇಷ. ಅವರು ಬೇರಾರೂ ಅಲ್ಲ, ಸಂಜನಾ.

ಹೌದು, ಸಂಜನಾ “ಕಿರಿಕ್‌ ಕೀರ್ತಿ’ ಚಿತ್ರಕ್ಕೆ ನಾಯಕಿಯಾಗಿದ್ದಾರೆ. ಓಂಪ್ರಕಾಶ್‌ರಾವ್‌, ಬಿಗ್‌ಬಾಸ್‌ ಮನೆಯಲ್ಲಿದ್ದಾಗಲೇ, ಕಿರಿಕ್‌ ಕೀರ್ತಿ ಹಾಗೂ ಸಂಜನಾ ಇವರಿಬ್ಬರನ್ನೂ ಹತ್ತಿರದಿಂದಲೇ ನೋಡಿದ್ದರು. ಅವರ ಮ್ಯಾನರಿಸಂ ಬಗ್ಗೆಯೂ ತಿಳಿದುಕೊಂಡಿದ್ದರು. ಅಲ್ಲೇ ಒಂದು ಸ್ಕೆಚ್‌ ಹಾಕಿದ್ದ ಓಂ, ಹೊರ ಬರುತ್ತಿದ್ದಂತೆಯೇ, ಇಬ್ಬರನ್ನೂ ಇಟ್ಟುಕೊಂಡು ಕ್ಯಾಮೆರಾ ಮುಂದೆ ನಿಲ್ಲಿಸಲು ರೆಡಿಯಾಗಿದ್ದಾರೆ. ಕಿರಿಕ್‌ ಕೀರ್ತಿ ಈಗಾಗಲೇ ಗುರುಪ್ರಸಾದ್‌ ನಿರ್ದೇಶನದ “ಎರಡನೇ ಸಲ’ ಚಿತ್ರದಲ್ಲಿ ಒಂದು ಪಾತ್ರ ನಿರ್ವಹಿಸಿದ್ದಾರೆ.

ಹಾಗಾಗಿ, ಕಿರಿಕ್‌ ಕೀರ್ತಿಗೆ ಸಿನಿಮಾ ಹೊಸದೇನೂ ಅಲ್ಲದಿದ್ದರೂ, ಹೀರೋ ಆಗಿ ಇದು ಮೊದಲ ಹೆಜ್ಜೆ. ಇನ್ನು, ಸಂಜನಾ ಕೂಡ “ಬಿಗ್‌ ಬಾಸ್‌’ ಮನೆಯಿಂದ ಹೊರಬಂದಿದ್ದೇ ತಡ, ಒಂದಷ್ಟು ಸಿನಿಮಾ ಮಂದಿ ಸಂಜನಾಳರನ್ನು ಹುಡುಕಿ ಹೋಗಿದ್ದು ನಿಜ. ಎಷ್ಟೋ ನಿರ್ದೇಶಕರು, ತಮ್ಮ ಚಿತ್ರದ ಹಾಡೊಂದಕ್ಕೆ ಹೆಜ್ಜೆ ಹಾಕಿ ಬನ್ನಿ ಅಂತ ಆಹ್ವಾನಿಸಿದ್ದುಂಟು. ಆದರೆ, ಸಂಜನಾ ಮಾತ್ರ ಎಲ್ಲವನ್ನೂ ಬದಿಗೊತ್ತಿ, “ಮೊಂಬತ್ತಿ’ ಎಂಬ ಚಿತ್ರದ ಹಾಡೊಂದರಲ್ಲಿ ಕಾಣಿಸಿಕೊಂಡರು. ಅದೊಂದು ಸ್ಪೆಷಲ್‌ ಸಾಂಗ್‌ ಆಗಿತ್ತು.

ಅದಾದ ಬಳಿಕ ಒಂದಷ್ಟು ನಿರ್ದೇಶಕರುಗಳು, ತಮ್ಮ ಚಿತ್ರದಲ್ಲೂ ಒಂದು ಐಟಂ ಸಾಂಗ್‌ ಇದೆ. ಆ ಸಾಂಗ್‌ಗೆ ಸ್ಟೆಪ್‌ ಹಾಕ್ತೀರಾ ಅಂತಾನೂ ಕೇಳಿದ್ದುಂಟು. ಆದರೆ, ಸಂಜನಾ, ಡ್ಯಾನ್ಸ್‌ ಮಾಡಬೇಕಾ, ಬಿಡಬೇಕಾ ಎಂಬ ಗೊಂದಲದಲ್ಲಿರುವಾಗಲೇ, ಓಂಪ್ರಕಾಶ್‌ರಾವ್‌ ಅವರು ಸಂಜನಾರನ್ನು ನಾಯಕಿಯನ್ನಾಗಿ ಮಾಡಿದ್ದಾರೆ. ರಮೇಶ್‌ ಯಾದವ್‌ ಹಾಗೂ ಸುಧೀಂದ್ರ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಎಂ.ಎಸ್‌.ರಮೇಶ್‌ ಅವರು “ಕಿರಿಕ್‌ ಕೀರ್ತಿ ಚಿತ್ರಕ್ಕೆ ಮಾತುಗಳನ್ನು ಪೋಣಿಸಿದ್ದಾರೆ. ಚಂದನ್‌ ಶೆಟ್ಟಿ ಸಂಗೀತ ನೀಡುತ್ತಿದ್ದಾರೆ. 

ಟಾಪ್ ನ್ಯೂಸ್

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

ramarasa kannada movie

Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್‌ ಟೀಂ

ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ

ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ; ಆಸ್ಪತ್ರೆಗೆ ದಾಖಲು

sanju weds geetha 2 song shooting

Sanju Weds Geetha 2; ಕಲರ್’ಫುಟ್ ಸೆಟ್ ನಲ್ಲಿ ಸಂಜು ಹಾಡು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!

Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.