ನಾನು ಇರೋದೇ ಹೀಗೆ…


Team Udayavani, May 23, 2017, 11:42 AM IST

sqanjana.jpg

“ಬಿಗ್‌ ಬಾಸ್‌’ ಮನೆಯಿಂದ ಆಚೆ ಬಂದ ಮೇಲೆ ಸಂಜನಾಗೆ ಹಲವು ಆಫ‌ರ್‌ಗಳು ಬಂದು, ಆ ಪೈಕಿ ಅವರು “ಕಿರಿಕ್‌ ಕೀರ್ತಿ’ ಎಂಬ ಚಿತ್ರದಲ್ಲಿ ನಾಯಕಿಯಾಗಿ ಒಪ್ಪಿಕೊಂಡಿದ್ದೂ ಆಯ್ತು. ಈಗ ಸಂಜನಾ, ಆ ಚಿತ್ರದಿಂದ ಹೊರಕ್ಕೆ ಬಂದಿದ್ದಾರೆ. ಆ ಚಿತ್ರದ ಬದಲು ಇನ್ನೂ ಎರಡು ಚಿತ್ರಗಳಲ್ಲಿ ನಟಿಸುವುದಕ್ಕೆ ಸಜ್ಜಾಗಿದ್ದಾರೆ.

“ಆ ಚಿತ್ರದ ಕಥೆಯನ್ನೇ ಹೇಳಿರಲಿಲ್ಲ. ಪರಿಚಯದವರಲ್ಲವಾ ಎಂದು ನಾನೂ ಒಪ್ಪಿದ್ದೆ. ಆದರೆ, ಕೊನೆಗೆ ಯಾಕೋ ಸರಿ ಹೋಗಲಿಲ್ಲ. ಚಿತ್ರದಲ್ಲಿ ನಟಿಸುವುದಿಲ್ಲ ಎಂದೆ. ಕೊನೆಗೆ ಚಿತ್ರತಂಡದವರು ನನ್ನನ್ನು ಚಿತ್ರತಂಡದಿಂದ ಕಿತ್ತು ಹಾಕಲಾಗಿದೆ ಎಂದೆಲ್ಲ ಸುದ್ದಿಯಾಯಿತು. ನಿಜ ಏನೆಂದರೆ, ಆ ಚಿತ್ರದಿಂದ ನಾನೇ ಹೊರ ಬಂದೆ. ಅದರ ಬದಲು, ಈಗ ಎರಡು ಚಿತ್ರ ಒಪ್ಪಿಕೊಂಡಿದ್ದೇನೆ. ಒಂದರ ಹೆಸರು “ಉಡುಂಬ’.

ಚಿತ್ರದೊಳಗೊಂದು ಚಿತ್ರವಿರುತ್ತದೆ. ಆ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದೇನೆ. ಒಂದು ಡ್ರೀಮ್‌ ಸಾಂಗ್‌ ಸಹ ಇದೆ. ಇನ್ನೊಂದು ಚಿತ್ರದಲ್ಲಿ ನಿರಂಜನ್‌ ದೇಶಪಾಂಡೆ ಜೊತೆಗೆ ನಟಿಸುತ್ತಿದ್ದೀನಿ. ಫೋಟೋಶೂಟ್‌ ಸಹ ಆಗಿದೆ. ಸದ್ಯದಲ್ಲೇ ಸಿನಿಮಾ ಶುರುವಾಗಲಿದೆ’ ಎನ್ನುತ್ತಾರೆ ಅವರು.  ಕಲರ್ಸ್‌ ಕನ್ನಡದಲ್ಲಿ “ಸಂಜು ಮತ್ತು ನಾನು’ ಧಾರಾವಾಹಿಯಲ್ಲೂ ಕಾಣಿಸಿಕೊಳ್ಳುತ್ತಿದ್ದೇನೆ’  ಎಂದು ವಿವರ ಕೊಡುತ್ತಾರೆ ಸಂಜನಾ.

ಈ ಮಧ್ಯೆ ಸಂಜನಾಗೆ ಬಹಳ ಆಫ‌ರ್‌ಗಳಿವೆಯಂತೆ. ಆದರೆ, ಇದು ಮುಗಿಯುವವರೆಗೂ ನಟಿಸಬಾರದು ಎಂದು ಚಾನಲ್‌ ಜೊತೆಗೆ ಒಪ್ಪಂದವಾಗಿರುವುದರಿಂದ ಯಾವುದೇ ಚಿತ್ರವನ್ನೂ ಒಪ್ಪಿಲ್ಲವಂತೆ ಸಂಜನಾ. ನಿಜ ಹೇಳಬೇಕೆಂದರೆ, ಅವರಿಗೆ ಇದೆಲ್ಲಾ ಇಷ್ಟವೇ ಇಲ್ಲವಂತೆ. “ನನಗೆ ಇವೆಲ್ಲಾ ಇಷ್ಟ ಇಲ್ಲ. ಡೇಟ್‌ ನೋಡ್ಕೊಳ್ಳೋದು ಎಲ್ಲಾ ಕಿರಿಕಿರಿ ನನಗೆ. ಹಾಗಾಗಿ ಒಪ್ಪಿರೋದನ್ನೆಲ್ಲಾ ಮುಗಿಸಿ, ಆ ನಂತರ ಇಂಟೀರಿಯರ್‌ ಡಿಸೈನಿಂಗ್‌ ಕಡೆಗೆ ಹೋಗುವ ಯೋಚನೆ ಇದೆ’ ಎನ್ನುತ್ತಾರೆ ಸಂಜನಾ.

ಇದೆಲ್ಲದರ ಮಧ್ಯೆ ಸಂಜನಾಗೆ ಬಹಳ ಖುಷಿ ಇದೆ. “ನಾನು ಧಾರಾವಾಹಿಗಳಲ್ಲಿ ನಟಿಸುವಾಗ ಬರೀ ಆಂಟಿಗಳು ನನ್ನನ್ನ ಗುರುತು ಹಿಡಿಯೋರು. “ಬಿಗ್‌ ಬಾಸ್‌’ ಮನೆಗೆ ಹೋಗಿ ಬಂದ ನಂತರ ಮಕ್ಕಳು, ವಯಸ್ಸಾದವರು ಎಲ್ಲರೂ ನನ್ನನ್ನ ಗುರುತು ಹಿಡಿಯುತ್ತಾರೆ, ಎಲ್ಲಾ ಮಾತಾಡಿಸುತ್ತಾರೆ’ ಎನ್ನುತ್ತಾರೆ ಸಂಜನಾ. ಸಂಜನಾಗೆ ವಿವಾದಿತ ನಟಿ ಎಂಬ ಬಿರುದಿದೆಯಲ್ಲಾ ಎಂದರೆ, ಆ ಬಗ್ಗೆ ಅವರು ತಲೆ ಕೆಡಿಸಿಕೊಳ್ಳುವುದಿಲ್ಲ ಎನ್ನುತ್ತಾರೆ.

“ಇತ್ತೀಚೆಗೆ “ತಾತನ ತಿಥಿ ಮೊಮ್ಮಗನ ಪ್ರಸ್ತ’ ಎಂಬ ಚಿತ್ರದಲ್ಲಿ ನನ್ನ ಹೆಸರು ಬಳಸಿಕೊಂಡಿದ್ದಾರೆ. ಈ ಮೂಲಕ ನನ್ನ ಹೆಸರಲ್ಲಿ ಪುಕ್ಕಟ್ಟೆ ಪ್ರಚಾರ ಪಡೆಯುತ್ತಿದ್ದಾರೆ. ನಾನು ಈ ಕುರಿತು ಚಿತ್ರತಂಡದವರಿಗೆ ಫೋನ್‌ ಮಾಡಿ ಹೇಳಿದೆ. ಆದರೆ, ಅವರು ತೆಗೀತಿಲ್ಲ. ಕೇಳಿದರೆ ಕಾಂಟ್ರೋವರ್ಸಿ ಮಾಡುತ್ತೀನಿ ಎನ್ನುತ್ತಾರೆ. ನನಗೆ ವಿವಾದ ಮಾಡಿಕೊಳ್ಳೋಕೆ ಇಷ್ಟವಿಲ್ಲ. ನಾನು ಇರೋದೇ ಹೀಗೇ. ಅದು ಮನೆಯವರಿಗೂ ಗೊತ್ತು.

ಅದೇ ಕಾರಣಕ್ಕೆ, ಅವರೆಲ್ಲಾ ನನಗೆ ತಲೆ ಕೆಡಿಸಿಕೊಳ್ಳಬೇಡ ಅಂತಾರೆ. ಮನೆಯವರೇ ಹೇಳುವಾಗ, ನಾನ್ಯಾಕೆ ತಲೆ ಕೆಡಿಸಿಕೊಳ್ಳಲಿ. ಹಾಗಾಗಿ ಈ ತರಹದ ವಿಷಯಗಳನ್ನು ಯೋಚಿಸೋಕೆ ಹೋಗುವುದಿಲ್ಲ. ನಾನು ತಲೆ ಕೆಡಿಸಿಕೊಳ್ಳುವುದಿಲ್ಲ, ಇಷ್ಟವಿಲ್ಲದ್ದು ಮಾಡುವುದಿಲ್ಲ’ ಎನ್ನುತ್ತಾರೆ ಸಂಜನಾ. ಇನ್ನು ಸಂಜನಾಗೆ ಹೋಂಡಾ ಸಿಟಿ ಕಾರು ತಗೋಬೇಕು ಎಂಬ ಆಸೆ ಇತ್ತಂತೆ. “ಬಿಗ್‌ ಬಾಸ್‌’ನಿಂದ ಬಂದ ಹಣದಲ್ಲಿ ಅವರು ತಮ್ಮ ಆಸೆಯನ್ನು ಪೂರೈಸಿಕೊಂಡಿದ್ದಾರೆ.

ಟಾಪ್ ನ್ಯೂಸ್

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bhuvanam gaganam Teaser: ಭುವನಂ ಗಗನಂ ಟೀಸರ್‌ ಬಂತು

Bhuvanam gaganam Teaser: ಭುವನಂ ಗಗನಂ ಟೀಸರ್‌ ಬಂತು

Bharjari Gandu: ಟ್ರೇಲರ್‌ನಲ್ಲಿ ಭರ್ಜರಿ ಗಂಡು

Bharjari Gandu: ಟ್ರೇಲರ್‌ನಲ್ಲಿ ಭರ್ಜರಿ ಗಂಡು

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಇದು ಮರ್ಯಾದೆ ಪ್ರಶ್ನೆ!

Sandalwood: ಇದು ಮರ್ಯಾದೆ ಪ್ರಶ್ನೆ!

15

Pawan Wadeyar: ವೆಂಕ್ಯಾನ ಹಿಂದೆ ಸಾಗರ್‌-ಪವನ್‌

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.