ಜೂನ್‌ನಲ್ಲಿ ಸಿನಿಮಾ ಮಳೆ


Team Udayavani, May 29, 2017, 12:03 PM IST

film-rain.jpg

ಮೇ ತಿಂಗಳು ಮುಗಿಯುತ್ತಾ ಬಂದಿದೆ. ಒಂದು ಹಂತಕ್ಕೆ ಸ್ಟಾರ್‌ಗಳ ಸಿನಿಮಾಗಳು ಕೂಡಾ ರಿಲೀಸ್‌ ಆಗಿವೆ. ಜೂನ್‌ ತಿಂಗಳಲ್ಲಿ ಯಾವುದೇ ಸ್ಟಾರ್‌ಗಳ‌ ಸಿನಿಮಾ ಬಿಡುಗಡೆ ಇಲ್ಲ. ಹಾಗಾಗಿ, ತೀರಾ ಹೊಸಬರ ಹಾಗೂ ಬಿಗ್‌ ಬಜೆಟ್‌ ಅಲ್ಲದ ಚಿತ್ರಗಳು ಜೂನ್‌ ತಿಂಗಳಲ್ಲಿ ಬಿಡುಗಡೆಯಾಗಲಿವೆ. ಈಗಾಗಲೇ ಸಾಕಷ್ಟು ಚಿತ್ರಗಳು ಜೂನ್‌ ತಿಂಗಳಲ್ಲಿ ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ ಜೂನ್‌ನಲ್ಲಿ 20ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆಯಾಗಲಿವೆ.

ಹಾಗಂತ ಘೋಷಿಸಿಕೊಂಡ ಚಿತ್ರಗಳೆಲ್ಲವು ಜೂನ್‌ನಲ್ಲೇ ಬಿಡುಗಡೆಯಾಗುತ್ತವೆ ಎಂದು ನಿಖರವಾಗಿ ಹೇಳುವಂತಿಲ್ಲ. ಏಕೆಂದರೆ ಥಿಯೇಟರ್‌ ಸಮಸ್ಯೆ ಎದುರಾದರೆ ಬಿಡುಗಡೆ ಮುಂದಕ್ಕೆ ಹೋಗಬಹುದು. ಈ ಜೂನ್‌ ತಿಂಗಳ ವಿಶೇಷವೆಂದರೆ ದೊಡ್ಡ ಸ್ಟಾರ್‌ಗಳ ಚಿತ್ರಗಳನ್ನು ಹೊರತುಪಡಿಸಿ, ಉಳಿದಂತೆ ಹೊಸಬರ ಹಾಗೂ ಈಗಾಗಲೇ ಅನೇಕ ಸಿನಿಮಾ ಮಾಡಿರುವ ನಟರುಗಳು ಚಿತ್ರಗಳು ಬಿಡುಗಡೆಯಾಗುತ್ತಿವೆ. ಜಾನರ್‌ ವಿಷಯದಲ್ಲೂ ಲವ್‌, ಕಾಮಿಡಿ, ಹಾರರ್‌, ಆ್ಯಕ್ಷನ್‌, ಥ್ರಿಲ್ಲರ್‌ ಸೇರಿದಂತೆ ಎಲ್ಲಾ ಜಾನರ್‌ನ ಸಿನಿಮಾಗಳು ಜೂನ್‌ನಲ್ಲಿ ಪ್ರೇಕ್ಷಕರ ಮುಂದೆ ಬರಲಿವೆ.  

“ಸಾಹೇಬ’, “ಯುಗಪುರುಷ’, “ರಾಜ್‌ವಿಷ್ಣು’, “ದಾದಾ ಇಸ್‌ ಬ್ಯಾಕ್‌’, ದಂಡುಪಾಳ್ಯದ ಮುಂದುವರಿದ ಭಾಗ “2′, “ಸ್ಟೂಡೆಂಟ್ಸ್‌’, “ಆಪರೇಷನ್‌ ಅಲಮೇಲಮ್ಮ’, “ಜಿಂದಾ’, “ಗಡ್ಡಪ್ಪ ಸರ್ಕಲ್‌’, “ಜಾನಿ’, “ಧೈರ್ಯಂ’, “ಆಕೆ’, “ಸರ್ಕಾರಿ ಕೆಲಸ ದೇವರ ಕೆಲಸ’, “ಮೀನಾಕ್ಷಿ’, “ಬ್ರಾಂಡ್‌’, “ನಾನೊಬ್ನೆ ಒಳ್ಳೆಯವ್ನು’,  “ಈ ಕಲರವ’,  “ಲೈಫ್ -360′, “ಎಳೆಯರು ನಾವು ಗೆಳೆಯರು’, “ಬೈಸಿಕಲ್‌’,” ಸ್ವರ್ಗ’, “ಸಿಲಿಕಾನ್‌ ಸಿಟಿ’ ಸೇರಿದಂತೆ ಅನೇಕ ಚಿತ್ರಗಳು ಜೂನ್‌ನಲ್ಲಿ ತೆರೆಕಾಣಲಿವೆ. ಇಷ್ಟೇ ಅಲ್ಲದೇ, ಕೊನೆ ಗಳಿಗೆಯಲ್ಲಿ ಥಿಯೇಟರ್‌ ಸಿಗುತ್ತದೆ ಎಂಬ ಕಾರಣಕ್ಕೆ ಧುತ್ತನೇ ಕೆಲವು ಸಿನಿಮಾಗಳು ಬಿಡುಗಡೆಯಾದರೂ ಅದರಲ್ಲಿ ಅಚ್ಚರಿಯಿಲ್ಲ.

ರವಿಚಂದ್ರನ್‌ ಅವರ ಪುತ್ರ ಮನೋರಂಜನ್‌ ನಾಯಕರಾಗಿರುವ “ಸಾಹೇಬ’ ಜೂನ್‌ನಲ್ಲಿ ಬಿಡುಗಡೆಯಾಗಲಿದ್ದು, ಈ ಮೂಲಕ ಮನೋರಂಜನ್‌ ಲಾಂಚ್‌ ಆಗಲಿದ್ದಾರೆ. “ಗೊಂಬೆಗಳ ಲವ್‌’ ಚಿತ್ರದ ಮಾಡಿದ ನಿರ್ದೇಶಕ ಸಂತೋಷ್‌ ಅವರ “ದಾದಾ ಇಸ್‌ ಬ್ಯಾಕ್‌’, ರಾಮು ನಿರ್ಮಾಣದ “ರಾಜ್‌ ವಿಷ್ಣು’,  ಸುನಿ ನಿರ್ದೇಶನದ “ಆಪರೇಷನ್‌ ಅಲಮೇಲಮ್ಮ’, “ಜೋಗಿ’ ನಿರ್ಮಾಪಕ ಅಶ್ವಿ‌ನಿ ರಾಂಪ್ರಸಾದ್‌ ನಿರ್ಮಾಣದ “ಸರ್ಕಾರಿ ಕೆಲಸ ದೇವರ ಕೆಲಸ’, ಚೈತನ್ಯ ನಿರ್ದೇಶನದ “ಆಕೆ’ ಸೇರಿದಂತೆ ಒಂದಷ್ಟು ಚಿತ್ರಗಳು ನಿರೀಕ್ಷೆ ಹುಟ್ಟಿಸಿವೆ. ಇನ್ನು, ಜೂನ್‌ನಲ್ಲಿ ತೀರಾ ಹೊಸಬರ ಸಿನಿಮಾವೂ ಬಿಡುಗಡೆಯಾಗಲಿದ್ದು, ಈ ಮೂಲಕ ಅವರ ಅದೃಷ್ಟ ಪರೀಕ್ಷೆಯಾಗಲಿದೆ. 

ಅಷ್ಟಕ್ಕೂ ಜೂನ್‌ ತಿಂಗಳಿನಲ್ಲಿ ಇಷ್ಟೊಂದು ಬಿಡುಗಡೆಯ ಭರಾಟೆ ಯಾಕೆ ಎಂದು ಕೇಳಬಹುದು. ಅದಕ್ಕೆ ಕಾರಣ ಹಿಂದೆ ಮುಂದೆ ಯಾವುದೇ ಸ್ಟಾರ್‌ ಸಿನಿಮಾ ಇಲ್ಲದಿರುವುದು. ಈಗಾಗಲೇ ಒಂದಷ್ಟು ಸ್ಟಾರ್‌ ಸಿನಿಮಾಗಳು ಬಿಡುಗಡೆಯಾಗಿದ್ದು, ಜೂನ್‌-ಜುಲೈನಲ್ಲಿ ಯಾವುದೇ ದೊಡ್ಡ ಸಿನಿಮಾಗಳ ಬಿಡುಗಡೆ ಇಲ್ಲ. ಹಾಗಾಗಿ, ಥಿಯೇಟರ್‌ ಸಮಸ್ಯೆ ಕಾಡುವುದಿಲ್ಲ ಎಂಬ ನಂಬಿಕೆಯೊಂದಿಗೆ ಬಿಡುಗಡೆಗೆ ಚಿತ್ರತಂಡಗಳು ರೆಡಿಯಾಗಿವೆ.

ಸ್ಟಾರ್‌ ಸಿನಿಮಾ ಇಲ್ಲದೇ ಚಿತ್ರಮಂದಿರ ಸಿಗಬಹುದು ಎಂಬ ನಂಬಿಕೆಯೇನೋ ಸರಿ, ಆದರೆ, ಆರಂಭದ ಎರಡು ವಾರಗಳಲ್ಲಿ ಬಿಡುಗಡೆಯಾದ ಎರಡೂ¾ರು ಸಿನಿಮಾಗಳು ಚೆನ್ನಾಗಿ ಓಡಿ, ಥಿಯೇಟರ್‌ನಲ್ಲಿ ಗಟ್ಟಿಸ್ಥಾನ ಪಡೆದರೆ ಮತ್ತೆ ಥಿಯೇಟರ್‌ ಸಮಸ್ಯೆ ತಲೆದೋರಬಹುದು. ಇನ್ನು, ಆಗಸ್ಟ್‌ನಿಂದ ಸ್ಟಾರ್‌ಗಳ ಸಿನಿಮಾ ಬಿಡುಗಡೆ ಶುರುವಾಗಲಿದೆ. ಶಿವರಾಜಕುಮಾರ್‌ ಅವರ “ಲೀಡರ್‌’, ಉಪೇಂದ್ರ ಅವರ “ಉಪೇಂದ್ರ ಮತ್ತೆ ಬಾ’ ಸೇರಿದಂತೆ ಕೆಲವು ಸ್ಟಾರ್‌ ಸಿನಿಮಾಗಳು ಬಿಡುಗಡೆಯಾಗಲಿವೆ. ಈ ಎಲ್ಲಾ ಕಾರಣದಿಂದ ಜೂನ್‌ ತಿಂಗಳಲ್ಲಿ ಬಿಡುಗಡೆ ಭರಾಟೆ ಜೋರಾಗಲಿದೆ.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

nalkane ayama kannada movie

Sandalwood; ‘ನಾಲ್ಕನೇ ಆಯಾಮ’ ಮೇಲೆ ಗೌತಮ್‌ ಕನಸು: ಇಂದು ತೆರೆಗೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.