ಅಂಜನಿಪುತ್ರನ ಜೊತೆ ಬಾಲಕೃಷ್ಣ
Team Udayavani, Jun 28, 2017, 10:53 AM IST
ಮಂಗಳವಾರ ಪುನೀತ್ರಾಜಕುಮಾರ್ ಅವರ “ಅಂಜನಿಪುತ್ರ’ ಸೆಟ್ನಲ್ಲಿದ್ದ ಎಲ್ಲರಿಗೂ ಅಚ್ಚರಿ. ಅದಕ್ಕೆ ಕಾರಣ ತೆಲುಗು ನಟ ಬಾಲಕೃಷ್ಣ. ಬಾಲಕೃಷ್ಣ ಅವರು “ಅಂಜನಿಪುತ್ರ’ ಸೆಟ್ಗೆ ಭೇಟಿಕೊಟ್ಟಾಗ ಅನೇಕರಿಗೆ ಒಂದು ಸಂದೇಹ ಬಂದಿತ್ತು. ಅದು ಇವರೇನಾದರೂ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಾ ಎಂದು.
ಏಕೆಂದರೆ ಈ ಹಿಂದೆ ಹರ್ಷ “ವಜ್ರಕಾಯ’ ಚಿತ್ರದಲ್ಲಿ ತೆಲುಗಿನ ರವಿತೇಜ ಸೇರಿದಂತೆ ಒಂದಷ್ಟು ನಟರು ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಹಾಗಾಗಿ, ಬಾಲಕೃಷ್ಣ ಅವರನ್ನು ನೋಡಿದಾಗಲೂ ಅದೇ ಸಂದೇಹ ಬಂದಿತ್ತು. ಆದರೆ ಬಾಲಕೃಷ್ಣ ಅವರು ಪುನೀತ್ರಾಜಕುಮಾರ್ ಅವರನ್ನು ಭೇಟಿಯಾಗಲು ಬಂದಿದ್ದರು.
ಸೋಮವಾರ ಬೆಂಗಳೂರಿಗೆ ಬಂದಿದ್ದ ಬಾಲಕೃಷ್ಣ ಅವರು ಶಿವರಾಜಕುಮಾರ್ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಅದರಂತೆ ಮಂಗಳವಾರ ಪುನೀತ್ ಅವರನ್ನು ಭೇಟಿಯಾಗಿ ಕೆಲ ಹೊತ್ತು ಮಾತುಕತೆ ನಡೆಸಿದರು. ರಾಜ್ಕುಟುಂಬ ಹಾಗೂ ಬಾಲಕೃಷ್ಣ ಅವರ ನಡುವೆ ಉತ್ತಮ ಬಾಂಧವ್ಯವಿದೆ.
ಬೆಂಗಳೂರಿಗೆ ಬಂದಾಗ ರಾಜ್ ಕುಟುಂಬವನ್ನು ಭೇಟಿಯಾಗುವ ಹೋಗುವ ಬಾಲಕೃಷ್ಣ ಈ ಬಾರಿಯೂ ಅದರಂತೆ ಭೇಟಿ ಮಾಡಿದ್ದಾರೆ. ಅಂದಹಾಗೆ, ಬಾಲಕೃಷ್ಣ ಅವರ “ಗೌತಮಿಪುತ್ರ ಶಾತಕರ್ಣಿ’ ಚಿತ್ರದಲ್ಲಿ ಶಿವರಾಜಕುಮಾರ್ ನಟಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…