ಹರೀಶ್‌ ರಾಜ್‌ಗೆ ಲಿಮ್ಕಾ ರೆಕಾರ್ಡ್‌


Team Udayavani, Jul 25, 2017, 10:30 AM IST

harish-raj.jpg

ಆಗಾಗ ಕನ್ನಡದಲ್ಲಿ ದಾಖಲೆಗಳಾಗುತ್ತಲೇ ಇರುತ್ತವೆ. ಈಗ ಮತ್ತೂಂದು ಕನ್ನಡ ಚಿತ್ರ ದಾಖಲೆಗೆ ಸೇರ್ಪಡೆಯಾಗಿದೆ. ಹೌದು, ಹರೀಶ್‌ ರಾಜ್‌ ನಿರ್ದೇಶಿಸಿ, ನಿರ್ಮಿಸಿ ಹಾಗು ನಟಿಸಿರುವ “ಶ್ರೀ ಸತ್ಯನಾರಾಯಣ’ ಚಿತ್ರ ಇದೀಗ “ಲಿಮ್ಕಾ’ ದಾಖಲೆ ಸೇರಿದೆ. ಇಷ್ಟಕ್ಕೂ “ಶ್ರೀ ಸತ್ಯನಾರಾಯಣ’ ಚಿತ್ರ “ಲಿಮ್ಕಾ’ ದಾಖಲೆಗೆ ಕಾರಣ, ಹರೀಶ್‌ ರಾಜ್‌ ಕಾಣಿಸಿಕೊಂಡಿರುವ ಹದಿನಾರು ವಿಭಿನ್ನ ಗೆಟಪ್‌ಗ್ಳು.

ಹರೀಶ್‌ ರಾಜ್‌ ಈ ಚಿತ್ರದಲ್ಲಿ ಬರೋಬ್ಬರಿ ಹದಿನಾರು ಪಾತ್ರಗಳಲ್ಲಿ ನಟಿಸಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಇದುವರೆಗೂ ಯಾವ ನಟ ಕೂಡ ಇಷ್ಟೊಂದು ಪಾತ್ರಗಳಲ್ಲಿ ಕಾಣಿಸಿಕೊಂಡಿಲ್ಲ. ಹಾಗಾಗಿಯೇ “ಶ್ರೀ ಸತ್ಯನಾರಾಯಣ’ ಚಿತ್ರದೊಳಗಿನ ಹರೀಶ್‌ರಾಜ್‌ ಅವರ ಪಾತ್ರಗಳನ್ನು ಗುರುತಿಸಿ, ಚಿತ್ರವನ್ನು “ಲಿಮ್ಕಾ ಬುಕ್‌ ಆಫ್ ರೆಕಾರ್ಡ್‌’ಗೆ ಪರಿಗಣಿಸಿ, ದಾಖಲೆ ಪತ್ರ ನೀಡಲಾಗಿದೆ.

ಈಗಾಗಲೇ ಹಿರಿಯ ನಟ ಬಾಲಿವುಡ್‌ನ‌ ಸಂಜೀವ್‌ಕುಮಾರ್‌ ಅವರು 1974 ರಲ್ಲಿ ಬಿಡುಗಡೆಯಾಗಿದ್ದ “ನಯಾ ದಿನ್‌ ನಯೀ ರಾತ್‌’ ಚಿತ್ರದಲ್ಲಿ 9 ಪಾತ್ರಗಳಲ್ಲಿ ನಟಿಸಿದ್ದರು. ಅದಾದ ಬಳಿಕ ತಮಿಳಿನ ಖ್ಯಾತ ನಟ ಕಮಲ್‌ಹಾಸನ್‌ ಅವರು 2008 ರಲ್ಲಿ ಬಿಡುಗಡೆಯಾದ “ದಶಾವತಾರಂ’ ಚಿತ್ರದಲ್ಲಿ 10 ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಇನ್ನು, 2009 ರಲ್ಲಿ ಮೂಡಿಬಂದ “ವಾಟ್ಸ್‌ ಯುವರ್‌ ರಾಶಿ’ ಚಿತ್ರದಲ್ಲಿ ನಟಿ ಪ್ರಿಯಾಂಕ ಚೋಪ್ರಾ ಕೂಡ 12 ಪಾತ್ರಗಳಲ್ಲಿ ನಟಿಸಿದ್ದರು.

ಅದಾದ ಮೇಲೆ ಯಾವ ಭಾಷೆಯ ಚಿತ್ರಗಳಲ್ಲೂ ಯಾವ ನಟ, ನಟಿಯರೂ ಸಹ ಅಷ್ಟೊಂದು ಪಾತ್ರಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಹರೀಶ್‌ರಾಜ್‌ ನಿರ್ದೇಶಿಸಿ, ನಿರ್ಮಿಸಿ, ನಟಿಸಿರುವ “ಶ್ರೀ ಸತ್ಯನಾರಾಯಣ’ ಚಿತ್ರದಲ್ಲಿ ಅವರು 16 ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಆ ಚಿತ್ರದಲ್ಲಿ ವ್ಯಾಸ ಮಹಾಮುನಿ, ಶೌನಕ ಮಹರ್ಷಿ, ಸತು ಮಹಾಮುನಿ, ನಾರಾಯಣ, ನಾರದ ಮಹರ್ಷಿ, ವ್ಯಾಪಾರಿ, ರಾಜ ಉಲ್ಕಾ ಮುಖ, ಮರ ಕಡಿಯುವವ, ಬಡ ಬ್ರಾಹ್ಮಣ, ಸುಂದರ, ಕಳ್ಳ, ರಾಜ ಚಂದ್ರಕೇತು, ರಾಜ ತುಂಗಧ್ವಜ ಹಾಗು ನಾಯಕರಾಗಿಯೂ ಅವರು ಕಾಣಿಸಿಕೊಂಡಿದ್ದಾರೆ.

ಅಲ್ಲಿಗೆ ಹರೀಶ್‌ ರಾಜ್‌ ಹದಿನಾರು ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಹೊಸದೊಂದು ದಾಖಲೆ ಬರೆದಿದ್ದಾರೆ. ಮೊದಲು ಅವರಿಗೆ ಈ ವಿಷಯ ಗೊತ್ತಿರಲಿಲ್ಲವಂತೆ. ಆದರೆ, ಚಿತ್ರದ ಇಂಗ್ಲೀಷ್‌ ಸಬ್‌ಟೈಟಲ್‌ಗಾಗಿ ಪ್ರಕೃತಿ ಬನವಾಸಿ ಬಳಿ ಹೋದಾಗ, ಅವರು 16 ಪಾತ್ರಗಳಲ್ಲಿರುವುದನ್ನು ನೋಡಿ, “ಲಿಮ್ಕಾ’ ದಾಖಲೆಗೆ ಯಾಕೆ ಕಳುಹಿಸಬಾರದು ಎಂಬ ಸಲಹೆ ಕೊಟ್ಟರಂತೆ.

ತಕ್ಷಣವೇ ಅವರು ಎಲ್ಲವನ್ನೂ ಗಮನಿಸಿ, ಹಿಂದೆ ಮಾಡಿರುವ ನಟ, ನಟಿಯರ ಪಟ್ಟಿ ನೋಡಿ, ಕೊನೆಗೆ ಲಿಮ್ಕಾಗೆ ದಾಖಲೆ ಕಳುಹಿಸಿಕೊಟ್ಟಿದ್ದರಂತೆ. ಈಗ ಅಧಿಕೃತವಾಗಿಯೇ ಲಿಮ್ಕಾ ದಾಖಲೆ ಪತ್ರ ಸಿಕ್ಕಿದೆ. ದೆಹಲಿಯಲ್ಲಿ ಲಿಮ್ಕಾ ಕಚೇರಿ ಇದ್ದು, ಅದರ ಅಧ್ಯಕ್ಷರಾದ ವಿಜಯ್‌ ಗೋಸ್‌ ಅವರು ಚಿತ್ರದ ಪಾತ್ರಗಳನ್ನು ನೋಡಿ, ಲಿಮ್ಕಾ ಪ್ರಮಾಣ ಪತ್ರ ಕೊಟ್ಟಿದ್ದಾರೆ. ಆ ಲಿಮ್ಕಾ ದಾಖಲೆ ಪತ್ರವನ್ನು ಹರೀಶ್‌ ರಾಜ್‌ ಅವರು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಅವರ ಸಮ್ಮುಖದಲ್ಲಿ ಮಂಗಳವಾರ (ಇಂದು) ಪಡೆಯಲು ತೀರ್ಮಾನಿಸಿದ್ದಾರೆ.

ಹರೀಶ್‌ ರಾಜ್‌ ಸಹಜವಾಗಿಯೇ ಖುಷಿಗೊಂಡಿದ್ದಾರೆ. ಸದ್ಯಕ್ಕೆ ಹರೀಶ್‌ ರಾಜ್‌ ಅವರ ಕೈಯಲ್ಲಿ ಮೂರು ಹೊಸ ಸಿನಿಮಾಗಳಿವೆ. ಈ ನಡುವೆ ಅವರು ಮಣಿರತ್ನಂ ನಿರ್ದೇಶನದ ತಮಿಳಿನ “ಕಾಟ್ರವೈಲಿಡೈ’ ಚಿತ್ರದಲ್ಲಿ ನಾಯಕ ಕಾರ್ತಿ ಅವರ ಸಹೋದರನಾಗಿಯೂ ನಟಿಸಿದ್ದಾರೆ.

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.