ಹೀಗೊಬ್ಬ ಉಪ್ಪಿ ಅಭಿಮಾನಿ!
Team Udayavani, Jul 27, 2017, 1:28 PM IST
ಅಭಿಮಾನಿಗಳು ತಾವು ಆರಾಧಿಸುವ ನಟ-ನಟಿಯರನ್ನು ಒಮ್ಮೆ ನೋಡಬೇಕೆಂದು ಕನಸು ಕಾಣುತ್ತಾರೆ. ಆ ಕನಸು
ನನಸು ಆದಾಗ ಅವರಿಗೆ ಆಕಾಶ ಮೂರೇ ಗೇಣು. ವಾಸ್ತವ ಹೀಗಿರುವಾಗ ತಾವು ಆರಾಧಿಸುವ ನಟ-ನಟಿಯರನ್ನು ಮಾತಾಡಿಸುವ ಅವಕಾಶ ಸಿಕ್ಕರೆ ಮುಗಿದೇ ಹೋಯಿತು. ಅವರೇನಾದರೂ ಕೈಕುಲುಕಿದರೆ ಅಷ್ಟೇ. ಮೈಕಲ್
ಜಾಕ್ಸನ್ ಭಾರತಕ್ಕೆ ಬಂದಾಗ ತಮ್ಮ ಅಭಿಮಾನಿಯ ಕೈಕುಲುಕಿದ್ದರು. ಆ ಸ್ಪರ್ಶ ಹಾಗೇ ಇರಬೇಕೆಂದು ಆ ಅಭಿಮಾನಿ ತಿಂಗಳಾನುಗಟ್ಟಲೇ ಕೈಯೇ ತೊಳೆದಿರಲಿಲ್ಲವಂತೆ.
ಇತ್ತೀಚಿಗೆ ಉಪ್ಪಿ ಅಭಿಮಾನಿಯೊಬ್ಬ ಹೀಗೆ ವಿಚಿತ್ರವಾಗಿ ವರ್ತಿಸಿದ್ದಾನೆ. ಇದರಿಂದ ಸ್ವತಃ ಉಪ್ಪಿಗೂ ಶಾಕ್ ಆಗಿದೆ. ಆ ಅಭಿಮಾನಿಯ ಹೆಸರು ಲೋಹಿತ್ ನಾಯ್ಡು. ಇತ್ತೀಚೆಗೆ ಒಮ್ಮೆ ಉಪೇಂದ್ರ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಲೋಹಿತ್ ತನ್ನ ಮೆಚ್ಚಿನ ನಟನ ಬಳಿ ಆಟೋಗ್ರಾಫ್ ಕೇಳಿದ. ಪೇಪರ್ನಲ್ಲಿ ಕೊಡಲು ಉಪ್ಪಿ ಮುಂದಾದಾಗ ಅವನು ಕೈ ಮೇಲೆ ಆಟೋಗ್ರಾಫ್ ಹಾಕುವಂತೆ ಕೇಳಿದ. ಅದು ಅಳಿಸಿಹೋಗುತ್ತೆ ಅಂತ ಉಪ್ಪಿ ಏಷ್ಟೇ ಹೇಳಿದರೂ ಅವನು ಕೇಳಲಿಲ್ಲ. “ನಾನು ಸತ್ತರೂ ಅದು ಅಳಿಸುವುದಿಲ್ಲ ಸಾರ್, ನಾನು ನಿಮ್ಮ ಅಭಿಮಾನಿ’ ಎಂದ. ಉಪ್ಪಿಗೆ ಏನು ಹೇಳಬೇಕು ಎಂದು ತಿಳಿಯದೆ ಕೊನೆಗೆ ಆಟೋಗ್ರಾಫ್ ಹಾಕಿದರು. ಉಪ್ಪಿಯ ಆ ಹುಚ್ಚು ಅಭಿಮಾನಿ, ಉಪ್ಪಿ
ಹಾಕಿದ ಆಟೋಗ್ರಾಫ್ ಅನ್ನೇ ಹಚ್ಚೆ ಹಾಕಿಸಿಕೊಂಡಿದ್ದಾನೆ!
ಈ ಅಭಿಮಾನಿಯ ಹುಚ್ಚು ಎಷ್ಟಿದೆಯೆಂದರೆ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ಇವನಿಗೆ ಡಾಕ್ಟರ ಬೇಡವೆಂದರೂ ಉಪ್ಪಿಯ ಚಿತ್ರವನ್ನು ಎದೆಮೇಲೆ ಹಚ್ಚೆ ಹಾಕಿಸಿಕೊಂಡಿಸಿದ್ದಾನೆ. ತನ್ನ ಕಾರಿನ ಮೇಲೆ ಅಂಟಿಸಿದ್ದ ಉಪ್ಪಿಯ ಚಿತ್ರವನ್ನು ತೆಗೆಯುವುದಕ್ಕೆ ಕಂಪನಿಯವರು ಒತ್ತಾಯ ಮಾಡಿದಾಗ ಅದನ್ನು ನಿರಾಕರಿಸಿದ ಈತ ಕೆಲಸವನ್ನೇ ಬಿಟ್ಟಿದ್ದಾನೆ.
ಲೋಹಿತ್ ತನ್ನ ಹುಟ್ಟುಹಬ್ಬದಂದು ಉಪ್ಪಿಯನ್ನು ಒಮ್ಮೆ ಭೇಟಿ ಮಾಡಿಸಿ ಅಂತ ಎಲ್ಲರ ಮುಂದೆ ಗೋಗರೆದ. ಆದರೆ, ಸಾಧ್ಯವಾಗಲಿಲ್ಲ. ಅದಕ್ಕಾಗಿ ಅವನು ಹುಟ್ಟುಹಬ್ಬವನ್ನೇ ಆಚರಿಸಿಕೋಳ್ಳಲಿಲ್ಲ. “ನನ್ನ ಹುಟ್ಟುಹಬ್ಬದಂದು ನಮ್ಮ ಬಾಸ್ನ ಭೇಟಿ ಆಗಬೇಕು ಅಂತ ಆಸೆ ಇತ್ತು. ಆದರೆ ಸಾಧ್ಯವಾಗಲಿಲ್ಲ. ಅದೇ ಕಾರಣಕ್ಕೆ ನಾನು ಹುಟ್ಟುಹಬ್ಬ ಆಚರಿಸಿಕೊಳ್ಳಲಿಲ್ಲ. ನಾನು ಸತ್ತರೆ ನಮ್ಮ ಬಾಸ್ ಉಪ್ಪಿ ಸಾರ್ ಅವರನ್ನು ಕರೆಸಿ’ ಎನ್ನುತ್ತಾನೆ ಲೋಹಿತ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್
ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್ ಟೀಂ
ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ; ಆಸ್ಪತ್ರೆಗೆ ದಾಖಲು
MUST WATCH
ಹೊಸ ಸೇರ್ಪಡೆ
Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!
DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?
Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ
Dakshina Kannada: 5 ಸಿಎಪಿಎಫ್/ಕೆಎಸ್ಆರ್ಪಿ ತುಕಡಿ, 3,100 ಸಿಬಂದಿ ನಿಯೋಜನೆ
Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು