ಸುಖಧರೆ ಚಿತ್ರದಲ್ಲಿ ವಿಜಯ್‌; ಕನಕ, ಜಾನಿ ನಂತರ ಚಿತ್ರ ಶುರು


Team Udayavani, Aug 10, 2017, 4:14 PM IST

Vijay-(7).jpg

ನಿರ್ದೆಶಕ ಮಹೇಶ್‌ ಸುಖಧರೆ ಅವರು ರಾಜಕಾರಣಿ ಚೆಲುವರಾಯಸ್ವಾಮಿ ಪುತ್ರ ಸಚಿನ್‌ ಗಾಗಿ ದೇಸಿ ಸೊಗಡಿನ ಕಥೆವುಳ್ಳ “ಹ್ಯಾಪಿ ಬರ್ತ್ ಡೇ’ ಚಿತ್ರ ನಿರ್ದೇಶಿಸಿದ್ದು ಎಲ್ಲರಿಗೂ ಗೊತ್ತು. ಆ ಚಿತ್ರದ ನಂತರ ಸುಖಧರೆ ಮತ್ಯಾವ ಚಿತ್ರಕ್ಕೆ ಕೈ ಹಾಕುತ್ತಾರೆ ಎಂಬ ಪ್ರಶ್ನೆ ಗಾಂಧಿನಗರದಲ್ಲಿ ಎಲ್ಲೆಡೆ ಗಿರಕಿ ಹೊಡೆಯುತ್ತಿತ್ತು. “ಹ್ಯಾಪಿ ಬರ್ತ್‌ಡೆ’ ಸಿನಿಮಾ ಬಳಿಕ ಮಹೇಶ್‌ ಸುಖಧರೆ ಎಲ್ಲೂ ಹೆಚ್ಚು ಸುದ್ದಿಯಾಗಲಿಲ್ಲ.

ಹಾಗಂತ ಅವರು ಸಿನಿಮಾ ಚಟುವಟಿಕೆಗಳಿಂದ ದೂರ ಇರಲಿಲ್ಲ. ಯಾಕೆಂದರೆ, ಅವರು ಇಷ್ಟು ದಿನಗಳ ಕಾಲ ಹೊಸ ಚಿತ್ರದ ಕಥೆಯ ಕೆತ್ತನೆಯಲ್ಲೇ ಬಿಜಿಯಾಗಿದ್ದರು. ಅವರೀಗ ಹೊಸತನ ಇರುವ ಚಿತ್ರಕ್ಕೊಂದು ಕಥೆ ಮಾಡಿಕೊಂಡಿದ್ದಾರೆ.

ಈಗ ಮತ್ತೂಂದು ಸಿನಿಮಾ ನಿರ್ದೇಶನಕ್ಕೆ ಅಣಿಯಾಗಿರುವ ಮಹೇಶ್‌ ಸುಖಧರೆ, ಪುನಃ ಯಾವು ದಾದರು ಹೊಸ ಪ್ರತಿಭೆಯನ್ನು ಕರೆದು ತರುತ್ತಾರೆಯೇ ಎಂಬ ಅನುಮಾನ ಬೇಡ. ಹಾಗಂತ ಯಾರೊಬ್ಬರೂ ಭಾವಿಸಬೇಕಿಲ್ಲ. ಯಾಕೆಂದರೆ, ಮಹೇಶ್‌ ಸುಖಧರೆ ಅವರು ಪಕ್ಕಾ
ಕಮರ್ಷಿಯಲ್‌ ಸಿನಿಮಾಗೆ ಕೈ ಹಾಕಿರುವುದರಿಂದ, ಅವರ ಮುಂದಿನ ಚಿತ್ರಕ್ಕೆ ಕಮರ್ಷಿಯಲ್‌ ಹೀರೋನೇ ಇರುತ್ತಾರೆ. ಅದು ಬೇರಾರೂ ಅಲ್ಲ,
“ದುನಿಯಾ’ ವಿಜಯ್‌. ಹೌದು, ಮಹೇಶ್‌ ಸುಖಧರೆ ತಮ್ಮ ಮುಂದಿನ ಚಿತ್ರವನ್ನು “ದುನಿಯಾ’ ವಿಜಯ್‌ ಅವರೊಂದಿಗೆ ಮಾಡುತ್ತಿದ್ದಾರೆ
ಎಂಬುದು ಈ ಹೊತ್ತಿನ ಹೊಸ ಸುದ್ದಿ.

ಸದ್ಯಕ್ಕೆ “ದುನಿಯಾ’ ವಿಜಯ್‌ ಅವರ ಚಿತ್ರವನ್ನು ಮಹೇಶ್‌ ಸುಖಧರೆ ನಿರ್ದೇಶನ ಮಾಡುತ್ತಾರೆ ಮತ್ತು ಅದೊಂದು ಪಕ್ಕಾ ಸ್ವಮೇಕ್‌
ಚಿತ್ರ ಅನ್ನೋದಷ್ಟೇ ಲೇಟೆಸ್ಟ್‌ ನ್ಯೂಸು. ಅದನ್ನು ಹೊರತುಪಡಿಸಿದರೆ, ಕಥೆ ಏನು, ಸಿನಿಮಾದಲ್ಲಿ ಯಾರ್ಯಾರಿರುತ್ತಾರೆ, ತಂತ್ರಜ್ಞರು ಯಾರು,
ಯಾವಾಗ ಚಿತ್ರೀಕರಣ ಶುರುವಾಗಲಿದೆ, ಎಲ್ಲೆಲ್ಲಿ ಶೂಟಿಂಗ್‌ ನಡೆಯುತ್ತೆ ಇತ್ಯಾದಿ ಪ್ರಶ್ನೆಗಳಿಗೆ ಉತ್ತರವಿಲ್ಲ.

ಯಾಕೆಂದರೆ, ಈಗಷ್ಟೇ ಒಂದು ರೌಂಡ್‌ ಸ್ಕ್ರಿಪ್ಟ್ನಲ್ಲಿ ಕುಳಿತಿರುವ ಮಹೇಶ್‌ ಸುಖಧರೆ, ಅದನ್ನು ಇನ್ನಷ್ಟು ಗಟ್ಟಿಗೊಳಿಸುವ ಮೂಡ್‌ನ‌ಲ್ಲಿದ್ದಾರೆ. ಇನ್ನು, ದುನಿಯಾ ವಿಜಯ್‌ ಕೂಡ “ಕನಕ’ ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಆ ಚಿತ್ರ ಮುಗಿದ ಬಳಿಕ ಪ್ರೀತಂ ಗುಬ್ಬಿ ನಿರ್ದೇಶನದ “ಜಾನಿ
ಜಾನಿ ಯೆಸ್‌ ಪಪ್ಪಾ’ ಚಿತ್ರದಲ್ಲಿ ನಟಿಸಲಿದ್ದಾರೆ.

ಈ ಎರಡು ಸಿನಿಮಾ ನಂತರವಷ್ಟೇ ಮಹೇಶ್‌ ಸುಖಧರೆ ಅವರ ಚಿತ್ರದಲ್ಲಿ ದುನಿಯಾ ವಿಜಯ್‌ ನಟಿಸುವ ಸಾಧ್ಯತೆ ಇದೆ. ಅಂದಹಾಗೆ, ದುನಿಯಾ ವಿಜಯ್‌ ಚಿತ್ರಕ್ಕೆ ಮಹೇಶ್‌ ಸುಖಧರೆ ನಿರ್ದೇಶನ ಮಾತ್ರವಲ್ಲ, ನಿರ್ಮಾಣವನ್ನೂ ಮಾಡುತ್ತಿದ್ದಾರೆ. ದಸರಾ ಹಬ್ಬದ ಹೊತ್ತಿಗೆ ಸುಖಧರೆ, ತಮ್ಮ ಹೊಸಚಿತ್ರದ ಸಂಪೂರ್ಣ ಚಿತ್ರಣವನ್ನು ಕೊಡಲಿದ್ದಾರೆ. ಅಲ್ಲಿಯವರೆಗೆ, ಕಥೆಯತ್ತ ತಮ್ಮ ಚಿತ್ತ ಎಂದಷ್ಟೇ
ಹೇಳುತ್ತಾರೆ ಅವರು.

ಟಾಪ್ ನ್ಯೂಸ್

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

nalkane ayama kannada movie

Sandalwood; ‘ನಾಲ್ಕನೇ ಆಯಾಮ’ ಮೇಲೆ ಗೌತಮ್‌ ಕನಸು: ಇಂದು ತೆರೆಗೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ

Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.