ಪ್ಯಾರಿಸ್‌ಗೆ ಹೊರಟರು ರಮೇಶ್‌!


Team Udayavani, Sep 25, 2017, 11:20 AM IST

Butterfly-(4)000.jpg

ಕೆಲವು ತಿಂಗಳುಗಳ ಹಿಂದೆ ಪಾರುಲ್‌ ಯಾದವ್‌ ಅಭಿನಯದ “ಬಟರ್‌ಫ್ಲೈ’ ಚಿತ್ರ ಶುರು ಮಾಡಿದ್ದರು ನಟ-ನಿರ್ದೇಶಕ ರಮೇಶ್‌ ಅರವಿಂದ್‌. ಆ ಸಂದರ್ಭದಲ್ಲಿ, ಆ ಚಿತ್ರವನ್ನು ತಮಿಳಿನಲ್ಲೂ ಮಾಡುವುದಾಗಿ ಹೇಳಿದ್ದರು. ಈಗ ಅದಕ್ಕೆ ಕೊನೆಗೂ ಕಾಲ ಕೂಡಿ ಬಂದಿದೆ. “ಬಟರ್‌ಫ್ಲೈ’ನ ತಮಿಳು ಅವತರಣಿಕೆಯಾದ “ಪ್ಯಾರಿಸ್‌ ಪ್ಯಾರಿಸ್‌’ ನಿನ್ನೆ ಚೆನ್ನೈನಲ್ಲಿ ಪ್ರಾರಂಭವಾಗಿದೆ.

ಕನ್ನಡದ ಚಿತ್ರದಲ್ಲಿ ಪಾರುಲ್‌ ಯಾದವ್‌ ನಾಯಕಿಯಾದರೆ, ತಮಿಳಿನಲ್ಲಿ ಕಾಜಲ್‌ ಅಗರವಾಲ್‌ ಮಾಡುತ್ತಿದ್ದಾರೆ ಮತ್ತು ಈ ಎರಡೂ ಚಿತ್ರಗಳನ್ನು ರಮೇಶ್‌ ಅರವಿಂದ್‌ ನಟಿಸುತ್ತಿದ್ದಾರೆ. ಅಂದ ಹಾಗೆ, “ಬಟರ್‌ಫ್ಲೈ’ ಮತ್ತು “ಪ್ಯಾರಿಸ್‌ ಪ್ಯಾರಿಸ್‌’ ಎರಡೂ ಹಿಂದಿಯ “ಕ್ವೀನ್‌’ ಚಿತ್ರದ ರೀಮೇಕ್‌. ಕಂಗನಾ ರಣೌತ್‌ ಅಭಿನಯದ ಈ ಚಿತ್ರವನ್ನು ಎರಡೂ ಭಾಷೆಗಳ ನೇಟಿವಿಟಿಗೆ ತಕ್ಕ ಹಾಗೆ ಮಾಡಲಾಗುತ್ತಿದೆ ಎನ್ನುತ್ತಾರೆ ರಮೇಶ್‌ ಅರವಿಂದ್‌.

“ನಾವು ರೀಮೇಕ್‌ ಮಾಡುತ್ತಿಲ್ಲ. ಆ ಸಿನಿಮಾದ ಮೂಲ ಆತ್ಮವನ್ನು ಇಟ್ಟುಕೊಂಡು, ಎರಡೂ ಭಾಷೆಗಳ ನೇಟಿವಿಟಿಗೆ ತಕ್ಕ ಹಾಗೆ ಮಾಡುತ್ತಿದ್ದೇವೆ. ಇದೊಂದು ಮಹಿಳಾ ಪ್ರಧಾನ ಚಿತ್ರವಾದ್ದರಿಂದ, ಮಹಿಳೆಯರೇ ಮತ್ತು ಅದರಲ್ಲೂ ಬರಹಗಾರ್ತಿಯರೇ ಚಿತ್ರಕಥೆ ಹಾಗೂ ಸಂಭಾಷಣೆ ಬರೆದರೆ ಚೆನ್ನ ಎಂಬುದು ನನ್ನ ಉದ್ದೇಶವಾಗಿತ್ತು. ಅದರಂತೆ ಕನ್ನಡದಲ್ಲಿ ಮಮತಾ ಸಾಗರ್‌ ಹಾಗೂ ತಮಿಳಿನಲ್ಲಿ ತಮಿಳಚ್ಚಿ ತಂಗಪಾಂಡಿಯನ್‌ ಚಿತ್ರಕಥೆ ಮತ್ತು ಸಂಭಾಷಣೆಗಳನ್ನು ಬರೆದಿದ್ದಾರೆ’ ಎನ್ನುತ್ತಾರೆ ರಮೇಶ್‌ ಅರವಿಂದ್‌.

ಈ ಎರಡೂ ಚಿತ್ರಗಳ ಚಿತ್ರೀಕರಣ ಜೊತೆಜೊತೆಯಾಗಿ ನಡೆಯಲಿದ್ದು, ಅಕ್ಟೋಬರ್‌ ನಾಲ್ಕರಿಂದ ಕನ್ನಡ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ. ಈಗಾಗಲೇ ಒಂದು ಹಂತದ ಚಿತ್ರೀಕರಣ ಆಗಿದ್ದು, ಅಕ್ಟೋಬರ್‌ 4ರಿಂದ ಗೋಕರ್ಣದಲ್ಲಿ ಪ್ರಾರಂಭವಾಗಿ, ಅಲ್ಲಿಂದ ಪ್ಯಾರಿಸ್‌, ಆ್ಯಮ್‌ಸ್ಟರ್‌ಡ್ಯಾಮ್‌, ಲಂಡನ್‌, ಬಾರ್ಸಿಲೋನ ಮುಂತಾದ ಕಡೆ ನಡೆಯಲಿದೆ.

ಈ ಎರಡೂ ಚಿತ್ರಗಳಲ್ಲಿ ಕನ್ನಡದ ಹುಡುಗ ಶಶಿ ವರುಣ್‌ ನಾಯಕನಾಗಿ ನಟಿಸುತ್ತಿದ್ದಾರೆ. ಮಿಕ್ಕಂತೆ ಕನ್ನಡ ಅವತರಣಿಕೆಯಲ್ಲಿ ಸುಧಾ ಬೆಳವಾಡಿ, ಭಾರ್ಗವಿ ನಾರಾಯಣ್‌ ಮುಂತಾದವರು ನಟಿಸುತ್ತಿದ್ದಾರೆ. “ಕ್ವೀನ್‌’ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದ ಅಮಿತ್‌ ತ್ರಿವೇದಿ, ಈ ಎರಡೂ ಭಾಷೆಯ ಚಿತ್ರಗಳಿಗೆ ಹೊಸ ಹಾಡುಗಳನ್ನು ಕಂಪೋಸ್‌ ಮಾಡಲಿದ್ದಾರೆ.

ಟಾಪ್ ನ್ಯೂಸ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood: ಇದು ಮರ್ಯಾದೆ ಪ್ರಶ್ನೆ!

Sandalwood: ಇದು ಮರ್ಯಾದೆ ಪ್ರಶ್ನೆ!

15

Pawan Wadeyar: ವೆಂಕ್ಯಾನ ಹಿಂದೆ ಸಾಗರ್‌-ಪವನ್‌

14

Sandalwood: ರಿಷಬ್‌ ಶೆಟ್ಟಿ ʼಕಾಂತಾರ-1ʼ ʼಸಪ್ತ ಸಾಗರದಾಚೆʼಯ ಬೆಡಗಿ ರುಕ್ಮಿಣಿ ನಾಯಕಿ?

KTM Movie: ಸಕ್ಸಸ್‌ ರೈಡ್‌ನ‌ಲ್ಲಿ ಕೆಟಿಎಂ

KTM Movie: ಸಕ್ಸಸ್‌ ರೈಡ್‌ನ‌ಲ್ಲಿ ಕೆಟಿಎಂ

Sandalwood: ಏಪ್ರಿಲ್‌ 5ರಿಂದ ಮ್ಯಾಟ್ನಿ ಶೋ  

Sandalwood: ಏಪ್ರಿಲ್‌ 5ರಿಂದ ಮ್ಯಾಟ್ನಿ ಶೋ  

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.