ದಯವಿಟ್ಟು ಗಮನಿಸಿ: ಭಾವನಾ ರಾವ್‌ ಮತ್ತೆ ಸುದ್ದಿಯಲ್ಲಿದ್ದಾರೆ!


Team Udayavani, Oct 11, 2017, 6:24 PM IST

Bhavana-Rao-(9).jpg

ಕೆಲವೊಮ್ಮೆ ಅದೃಷ್ಟ ಬಂದರೆ ಒಂದೇ ಸಲ ಹುಡುಕ್ಕೊಂಡ್‌ ಬರುತ್ತೆ. ಅದರಲ್ಲೂ ಸಿನಿಮಾ ನಟ, ನಟಿಯರ ವಿಷಯದಲ್ಲಂತೂ ತುಸು ಹೆಚ್ಚು ಅನ್ನಬಹುದು. ಇಲ್ಲೀಗ ಹೇಳಹೊರಟಿರುವ ವಿಷಯ ನಟಿ ಭಾವನಾ ರಾವ್‌ ಅವರದು. ಯಾವ ಭಾವನಾ ರಾವ್‌ ಅಂತ ಕನ್‌ಫ್ಯೂಷನ್‌ ಆಗೋದು ಬೇಡ. “ಗಾಳಿಪಟ’ ಹುಡುಗಿ ವಿಷಯ ಇದು. ಅದೇ ಭಾವನಾ ರಾವ್‌ ಈಗ ಸುದ್ದಿಯಾಗಿದ್ದಾರೆ.

ಎಲ್ಲೋ ಕಳೆದೇ ಹೋದರು ಅಂದುಕೊಳ್ಳುತ್ತಿದ್ದಂತೆ, ಅಲ್ಲೆಲ್ಲೋ “ಬಹುಪರಾಕ್‌’ ಹಾಗೂ ಇನ್ನೆಲ್ಲೋ “ಪರಪಂಚ’ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ, ಭಾವನಾ ಮತ್ತೆ ಸುದ್ದಿಯೇ ಇರಲಿಲ್ಲ. ಹಾಗಂತ ಅವರು ಸಿನಿಮಾ ನಂಟು ಬಿಟ್ಟಿರಲಿಲ್ಲ. ಡಾಲರ್ ಕಾಲೋನಿಯಲ್ಲೊಂದು ತಮ್ಮ ಗೆಳತಿ ಜೊತೆ ಡ್ಯಾನ್ಸ್‌ ಕ್ಲಾಸ್‌ ಶುರುಮಾಡಿ ಅಲ್ಲಿಯೇ ಹೆಚ್ಚು ಗಮನಹರಿಸಿದ್ದರು.

ಒಂದೂವರೆ ವರ್ಷ ಕಾಲ ಡ್ಯಾನ್ಸ್‌ ಕ್ಲಾಸ್‌ನಲ್ಲೇ ಬಿಜಿಯಾಗಿದ್ದ ಭಾವನಾಗೆ ಅವಕಾಶಗಳು ಹುಡುಕಿ ಬಂದರೂ, ಒಪ್ಪಲಿಲ್ಲವಂತೆ. ಕಾರಣ, ಸರಿಯಾದ ಆಯ್ಕೆ. ಹಾಗಾಗಿ ಬಂದ ಅವಕಾಶಗಳನ್ನು ಪಕ್ಕಕ್ಕೆ ಸರಿಸಿದರು. ಆದರೆ, ಒಮ್ಮೆಲೆ ಒಂದಷ್ಟು ಸಿನಿಮಾ ಒಪ್ಪಿಕೊಂಡರು. ಈಗ ಆ ಚಿತ್ರಗಳು ರಿಲೀಸ್‌ಗೆ ರೆಡಿಯಾಗಿವೆ. ಅದೂ ಅಕ್ಟೋಬರ್‌ನಲ್ಲೇ ಬ್ಯಾಕ್‌ ಟು ಬ್ಯಾಕ್‌ ಅನ್ನೋದೇ ಈ ಹೊತ್ತಿನ ಸುದ್ದಿ.

ಹೌದು, ಭಾವನಾ ಅಭಿನಯಿಸಿರುವ “ಸತ್ಯ ಹರಿಶ್ಚಂದ್ರ’, “ದಯವಿಟ್ಟು ಗಮನಿಸಿ’ ಮತ್ತು “ಟೈಗರ್‌ ಗಲ್ಲಿ’ ಚಿತ್ರಗಳು ಅಕ್ಟೋಬರ್‌ನಲ್ಲೇ ತೆರೆಗೆ ಬರುತ್ತಿವೆ. ಅದರಲ್ಲೂ “ಸತ್ಯ ಹರಿಶ್ಚಂದ್ರ’ ಮತ್ತು “ದಯವಿಟ್ಟು ಗಮನಿಸಿ’ ಚಿತ್ರಗಳು ಅಕ್ಟೋಬರ್‌ 20 ರಂದು ತೆರೆಗೆ ಬಂದರೆ, “ಟೈಗರ್‌ ಗಲ್ಲಿ’ ಚಿತ್ರ ಅಕ್ಟೋಬರ್‌ 27 ಕ್ಕೆ ರಿಲೀಸ್‌ ಆಗುತ್ತಿದೆ. ಈ ಮೂರು ಚಿತ್ರಗಳನ್ನು ಅವರು 2016 ರಲ್ಲಿ ಒಪ್ಪಿಕೊಂಡಿದ್ದರು.

ಈಗ ಎರಡು ವಾರಗಳ ಅಂತರದಲ್ಲಿ ಮೂರು ಚಿತ್ರಗಳು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. “ಸತ್ಯ ಹರಿಶ್ಚಂದ್ರ’ ಚಿತ್ರದಲ್ಲಿ ಶರಣ್‌ ಜೊತೆ ನಟಿಸಿದ್ದಾರೆ. ಅದೊಂದು ಹೊಸತನದ ಪಾತ್ರವಿದ್ದು, ನೋಡುಗರ ಗಮನಸೆಳೆಯುವಂತಹ ಪಾತ್ರವಂತೆ. ಯಾವ ಪಾತ್ರ ಅನ್ನುವುದಕ್ಕೆ ಸಿನಿಮಾ ನೋಡಬೇಕೆಂಬುದು ಅವರ ಮಾತು. ಇನ್ನು, “ದಯವಿಟ್ಟು ಗಮನಿಸಿ’ ಚಿತ್ರದಲ್ಲೂ ಭಾವನಾಗೊಂದು ವಿಶೇಷ ಪಾತ್ರವಿದೆಯಂತೆ.

“ಟೈಗರ್‌ ಗಲ್ಲಿ’ ಚಿತ್ರದಲ್ಲೂ ಭಾವನಾ ನಟಿಸಿದ್ದಾರೆ. ನೀನಾಸಂ ಸತೀಶ್‌ ಅವರ ಜೊತೆ ವಿಶೇಷ ಗೆಟಪ್‌ನಲ್ಲಿ ಹಾಡೊಂದಕ್ಕೆ ಸ್ಟೆಪ್‌ ಹಾಕಿದ್ದಾರೆ. ಅದೊಂದು ಪಕ್ಕಾ ಕಮರ್ಷಿಯಲ್‌ ಸಿನಿಮಾ ಆಗಿದ್ದು, ಅವರ ಪಾತ್ರ ಕೂಡ ಬೋಲ್ಡ್‌ ಆಗಿದೆಯಂತೆ. ಅದೇನೆ ಇರಲಿ, ಎಲ್ಲೂ ಸುದ್ದಿಯಾಗದೇ ಇದ್ದ ಭಾವನಾ, ಈಗ ಅಕ್ಟೋಬರ್‌ನ ಎರಡು ವಾರವಂತೂ ಅವರದ್ದೇ ಸುದ್ದಿ. ಇದೇ ಖುಷಿಯಲ್ಲಿ ಭಾವನಾ ಒಂದಷ್ಟು ಸಿನಿಮಾಗಳನ್ನು ಎದುರು ನೋಡುತ್ತಿರುವುದು ಅಷ್ಟೇ ದಿಟ.

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

nalkane ayama kannada movie

Sandalwood; ‘ನಾಲ್ಕನೇ ಆಯಾಮ’ ಮೇಲೆ ಗೌತಮ್‌ ಕನಸು: ಇಂದು ತೆರೆಗೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.