ಸೈನಿಕರ ಸಂಭಾಷಣೆ ಕದ್ದಾಲಿಸಲಾಗದ ರೇಡಿಯೋ ಅನ್ವೇಷಣೆ
Team Udayavani, Feb 17, 2017, 11:53 AM IST
ಬೆಂಗಳೂರು: ಭಾರತೀಯ ಸೈನಿಕರು ರೇಡಿಯೋ ಮೂಲಕ ನಡೆಸುವ ಸಂವಹನವನ್ನು ಶತ್ರುಗಳು ಹ್ಯಾಕ್ ಮಾಡಲು ಸಾಧ್ಯವಾಗದಂತಹ ಅತ್ಯಾಧುನಿಕ ರೇಡಿಯೋವನ್ನು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಅಭಿವೃದ್ಧಿ ಪಡಿಸಿದೆ.
“ಸ್ಟಾರ್-ವಿ-ಎಮ್ ಕೆ-3 ರೇಡಿಯೋ’ವನ್ನು ಸದ್ಯದಲ್ಲೇ ಭಾರತೀಯ ಸೇನೆಗೆ ಹಸ್ತಾಂತರಿಸಲು ಬಿಇಎಲ್ ಸಿದ್ಧತೆ ನಡೆಸಿದೆ. ಅನಾಲಾಗ್ ಮಾದರಿಯಲ್ಲಿದ್ದ ರೇಡಿಯೋವನ್ನು ಡಿಜಿಟಲ್ ಮಾದರಿಗೆ ಉನ್ನತೀಕರಿಸಲಾಗಿದೆ. ಬಿಇಎಲ್ ಅಂತಾರಾಷ್ಟ್ರೀಯ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಕಿರಣ್.ವಿ., ಏರ್ ಇಂಡಿಯಾ ಪ್ರದರ್ಶನದಲ್ಲಿ ಗುರುವಾರ ಇದನ್ನು ಅನಾವರಣಗೊಳಿಸಿದರು.
ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, “ಗಡಿಯಲ್ಲಿ ಕಾರ್ಯ ನಿರ್ವಹಿಸುವ ಸೈನಿಕರ ಸಂವಹನದ ಬಗ್ಗೆ ಗೌಪ್ಯತೆ ಕಾಪಾಡಿಕೊಳ್ಳಬೇಕಾಗುತ್ತದೆ. ಪ್ರಸ್ತುತ ಇರುವ ರೇಡಿಯೋ ಮೂಲಕ ನಡೆಸುವ ಸಂವಹನವನ್ನು ಶತ್ರುಗಳು ಹ್ಯಾಕ್ ಮಾಡುವ ಸಾಧ್ಯತೆ ಇದೆ. ಹೀಗಾಗಿ ಶತ್ರುಗಳು ಹ್ಯಾಕ್ ಮಾಡುವುದನ್ನು ತಡೆಯುವ ದೃಷ್ಟಿಯಿಂದ ಹೊಸ ರೇಡಿಯೋವನ್ನು ಆವಿಷ್ಕರಿಸಲಾಗಿದೆ ಎಂದು ಹೇಳಿದರು.
ಈಗಿರುವ ರೇಡಿಯೋದಿಂದ 7-8 ಕಿ.ಮೀ.ನಷ್ಟು ದೂರ ಮಾತ್ರ ಸಂವಹನ ನಡೆಸಬಹುದಾಗಿದ್ದು, ಹೊಸದಾಗಿ ಸಿದ್ಧಪಡಿಸಿರುವ ರೇಡಿಯೋದಿಂದ 15 ಕಿ.ಮೀ.ಅಂತರದವರೆಗೆ ಸಂಪರ್ಕಿಸಬಹುದು. ಈ ತಂತ್ರಜ್ಞಾನವು ದೇಶದ ಸೈನಿಕ ವಲಯಕ್ಕೆ ಸಹಕಾರಿಯಾಗುತ್ತದೆ. ಇದು ಡಿಜಿಟಲ್ ತಂತ್ರಜಾnನವನ್ನು ಒಳಗೊಂಡಿದೆ. ಇದರ ಆವಿಷ್ಕಾರಕ್ಕೆ ಬಿಇಎಲ್ ಸಂಸ್ಥೆಯ ಸಿಬ್ಬಂದಿ 18 ತಿಂಗಳು ದುಡಿದಿದ್ದಾರೆ ಎಂದು ತಿಳಿಸಿದರು.
ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಈ ಮಾದರಿಯ ರೇಡಿಯೋವನ್ನು ಅಭಿವೃದ್ಧಿಪಡಿಸಲಾಗಿದೆ. ವಿದೇಶಗಳಲ್ಲಿರುವ ರೇಡಿಯೋಗಳಿಗೆ ಸರಿಸಾಟಿಯಾಗಿ ಇದು ನಿಲ್ಲಲಿದೆ. ಹೊಸ ಮಾದರಿಯ ರೇಡಿಯೋಗೆ ಶ್ರೀಲಂಕಾ, ಆಫ್ರಿಕಾ, ವಿಯೆಟ್ನಾಂ, ಥಾಯ್ಲೆಂಡ್, ಚೀನಾ, ನೈಜೀರಿಯಾ, ದಕ್ಷಿಣ ಆಫ್ರಿಕಾ, ಗಲ್ಫ್ ರಾಷ್ಟ್ರಗಳಿಂದ ಬೇಡಿಕೆ ಬಂದಿದೆ. ಭಾರತೀಯ ಸೇನೆಗೆ ಸರಬರಾಜು ಮಾಡುವುದರ ಜತೆಗೆ ಮುಂದಿನ ದಿನದಲ್ಲಿ ವಿದೇಶಗಳಿಗೆ ರಫ್ತು ಮಾಡುವ ಉದ್ದೇಶವಿದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ
MUST WATCH
ಹೊಸ ಸೇರ್ಪಡೆ
Davanagere; ಗಾಯಿತ್ರಿ ಸಿದ್ದೇಶ್ವರ್ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ