ಸಿರಿಧಾನ್ಯಉಪಯೋಗ ತಿಳಿಸಿದ ಗೌಡರು


Team Udayavani, May 27, 2017, 12:47 PM IST

devegowda.jpg

ಬೆಂಗಳೂರು: ಕಾಯಿಲೆಗಳಿಂದ ಮುಕ್ತವಾಗಲು ಬಯಸುವವರು ಸಿರಿಧಾನ್ಯಗಳನ್ನು ಸೇವಿಸಬೇಕು. ಎಲ್ಲ ರೋಗಗಳಿಗೂ ಸಿರಿಧಾನ್ಯಗಳಲ್ಲಿ ಔಷಧವಿದೆ ಎಂದು ಮಾಜಿ ಪ್ರಧಾನಮಂತ್ರಿ ಎಚ್‌.ಡಿ.ದೇವೇಗೌಡ ತಿಳಿಸಿದರು. ಲಾಲ್‌ ಬಾಗ್‌ನಲ್ಲಿ “ಗ್ರಾಮೀಣ ಕುಟುಂಬ’ ಸಂಸ್ಥೆ ಶುಕ್ರವಾರ ಹಮ್ಮಿಕೊಂಡಿದ್ದ “ಸಿರಿಧಾನ್ಯ ಉತ್ಸವ’ ಉದ್ಘಾಟಿಸಿ ಅವರು ಮಾತನಾಡಿದರು.

“ಪ್ರಸ್ತುತ ರಾಗಿ ಕೇವಲ ಹಳ್ಳಿಗರ ಆಹಾರ ಪದಾರ್ಥವಾಗಿ ಉಳಿದಿಲ್ಲ. ನಗರವಾಸಿಗಳು ಕೂಡ ರಾಗಿಯೆಡೆಗೆ ಮುಖ ಮಾಡಿದ್ದಾರೆ. ನಾನು ಪ್ರಧಾನಮಂತ್ರಿ ಆಗಿದ್ದ ಸಂದರ್ಭದಲ್ಲಿ ಇಡೀ ದೇಶಕ್ಕೆ ಸಿರಿಧಾನ್ಯಗಳ ಬಳಕೆಗೆ ಉತ್ತೇಜನ ನೀಡಿದ್ದೆ” ಎಂದರು. 

“ಸಿರಿಧಾನ್ಯ ಸೇವನೆಯಿಂದ ಆರೋಗ್ಯಕ್ಕೆ ಪ್ರಯೋಜನಕಾರಿ. ರಾಗಿ ಮುದ್ದೆ, ರಾಗಿ ರೊಟ್ಟಿ ತಿನ್ನುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ ಎನ್ನುವುದಕ್ಕೆ ನಾನೇ ಮಾದರಿ. ಸಿರಿಧಾನ್ಯಗಳನ್ನು ನಮ್ಮ ರೈತರಿಂದ ಬೆಳೆಸಲು ಸಾಧ್ಯವೇ ಎಂಬುದರ ಬಗ್ಗೆ ಯೋಚಿಸಬೇಕಿದೆ. ಈ ಕುರಿತು ರೈತರಲ್ಲಿ ಜಾಗೃತಿ ಮೂಡಿಸಬೇಕು,’ ಎಂದು ಹೇಳಿದರು. 

“ಗ್ರಾಮೀಣ ಕುಟುಂಬ’ ಸಂಸ್ಥೆಯ ಅಧ್ಯಕ್ಷ ಎಂ.ಎಚ್‌ ಶ್ರೀಧರಮೂರ್ತಿ ಮಾತನಾಡಿ, “ಮಧ್ಯಮ ವರ್ಗದವರಿಗೆ, ಬಡವರಿಗೆ ಕೈಗೆಟಕುವ ದರದಲ್ಲಿ ಸಿರಿಧಾನ್ಯಗಳು ದೊರೆಯ ಬೇಕು ಎಂಬ ಉದ್ದೇಶದಿಂದ ಈ ಮೇಳ ಆಯೋಜಿಸಲಾಗಿದೆ. ರಾಜ್ಯದಲ್ಲಿ ಬೇಡಿಕೆಗನುಗುಣವಾಗಿ ಸಿರಿಧಾನ್ಯ ಪೂರೈಕೆಯಾಗುತ್ತಿಲ್ಲ. ಹಾಗಾಗಿ ತಮಿಳುನಾಡು, ಆಂಧ್ರ, ಮಹಾರಾಷ್ಟ್ರದಿಂದ ಸಿರಿಧಾನ್ಯಗಳನ್ನು ತರಿಸಿಕೊಳ್ಳಲಾಗುತ್ತಿದೆ. ಈ ಬಾರಿ 100 ಟನ್‌ ಸಿರಿಧಾನ್ಯಗಳನ್ನು ಮಾರಾಟ ಮಾಡುವ ಗುರಿ ಹೊಂದಲಾಗಿದೆ. ಕಾರ್ಯಕ್ರಮ ಆರಂಭಕ್ಕೂ ಮುನ್ನವೆ 10 ಟನ್‌ ಸಿರಿಧಾನ್ಯ ಮಾರಾಟವಾಗಿದೆ,’ ಎಂದರು. 

ಕಾರ್ಯಕ್ರಮದಲ್ಲಿ ಪರಿಸರವಾದಿ ಡಾ.ಯಲ್ಲಪ್ಪರೆಡ್ಡಿ , ತೋಟಗಾರಿಕೆ ಆಯುಕ್ತ ಪ್ರಭಾಸ್‌ಚಂದ್ರ ರೇ, ಹೈದರಾಬಾದ್‌ನ ಐಐಎಂಆರ್‌ ನಿರ್ದೇಶಕ ಡಾ.ವಿಲಾಸ್‌ ಎ.ಥೋಣಪಿ, ಪತ್ರಕರ್ತ ಬಿ.ಎಂ.ಹನೀಫ್, ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ತೋಟಗಾರಿಕೆ ಇಲಾಖೆ ಜಂಟಿ ಆಯುಕ್ತ ಡಾ.ಜಗದೀಶ್‌ ಮತ್ತಿತರರು ಉಪಸ್ಥಿತರಿದ್ದರು.

ಮೇಳದಲ್ಲಿ ಲಭ್ಯವಿರುವ ಪದಾರ್ಥ
1 ಕೆಜಿ ಮತ್ತು ಅರ್ಧ ಕೆಜಿ ಕಾಂಬೋ ಪ್ಯಾಕ್‌ (ಸಿರಿಧಾನ್ಯ ಅಕ್ಕಿ, ರವೆ ಹಾಗೂ ಹಿಟ್ಟು)ನಲ್ಲಿ ನವಣೆ, ಸಾಮೆ, ಆರ್ಕಾ, ಊದಲು, ಬರಗು ಧನ್ಯಗಳು ಪ್ರತ್ಯೇಕ ಪ್ಯಾಕಿಟ್‌ನಲ್ಲಿ ಸಿಗಲಿವೆ. ಜತೆಗೆ ಸಿರಿಧಾನ್ಯ ಅಡುಗೆ ಪುಸ್ತಕ ಹಾಗೂ ಕಾಟನ್‌ ಬ್ಯಾಗ್‌ ಉಚಿತವಾಗಿ ಸಿಗಲಿದೆ. 1 ಕೆಜಿ ಕಾಂಬೊ ಪ್ಯಾಕ್‌ಗೆ 410 ರೂ.ಗಳು ಹಾಗೂ ಅರ್ಧ ಕೆಜಿ ಕಾಂಬೋ ಪ್ಯಾಕ್‌ಗೆ 210 ರೂ. ನಿಗದಿಪಡಿಸಲಾಗಿದೆ.

ಅಲ್ಲದೇ 10 ಕೆಜಿ, 25 ಕೆಜಿ, 50 ಕೆಜಿ, 100 ಕೆಜಿಗೂ ಮೇಲ್ಪಟ್ಟು ಸಿರಿಧಾನ್ಯ ಸಗಟು ಮಾರಾಟವು ಇದೆ. ರೈತರಿಗಾಗಿ 5 ಟನ್‌ ಸಿರಿಧಾನ್ಯ ಬಿತ್ತನೆ ಬಿಜ ಹಾಗೂ ಎಲ್ಲ ಬಗೆಯ ನಾಟಿ ಬಿತ್ತನೆ ಬೀಜಗಳ ಮಾರಾಟ ವ್ಯವಸ್ಥೆ ಮಾಡಲಾಗಿದೆ. ಸಿಹಿತಿಂಡಿಗಳು, ಕಾಡು ಜೇನು ತುಪ್ಪ, ಎಣ್ಣೆ, ಕಾಳುಗಳು, ಸಾವಯವ ಬೆಲ್ಲ, ಸಕ್ಕರೆ, ತಾಳೆ ಸಕ್ಕರೆ, ಮಸಾಲೆ ಪದಾರ್ಥಗಳು, ಟೀ, ಕಾಫಿ, ಪಾನಿಗಳು, ನೈಸರ್ಗಿಕ ಸಾವಯವ ತಾಜಾ ಕೃಷಿ ಉತ್ಪನ್ನಗಳು, ದಿನಸಿ, ಡೈರಿ ಉತ್ಪನ್ನಗಳು ಈ ಮೇಳದಲ್ಲಿ ಲಭ್ಯವಿದೆ. 

ಪ್ರಶಸ್ತಿ ಪುರಸ್ಕೃತರು
ಸಿರಿಧಾನ್ಯ ಬೆಳಗಾರರಾದ ಶಿವಳ್ಳಿ ಬೋರೆಗೌಡ, ಬಿ.ನಾಗರಾಜು, ತುಮಕೂರಿನ ರಘು, ಹಾವೇರಿ ಜಿಲ್ಲೆಯ ಚಂದ್ರಕಾಂತ ಸಂಗೂರು, ಧಾರವಾಡದ ಎಲ್ಲಪ್ಪ ರಾಮೋಜಿ, ತಮಿಳುನಾಡಿನ ದೀಪನ್‌, ಶಿವಗಂಗಾ ಸಾವಯವ ತರಕಾರಿ ಬೆಳೆಗಾರರ ಸಂಘದ ಅಧ್ಯಕ್ಷ ಟಿ.ಜಿ.ಹನುಮಂತರಾಜು, ಬೆಂಗಳೂರಿನ ಸಿರಿಧಾನ್ಯ ಆಹಾರ ತಯಾರಕ ಸಂಪತ್‌ ಕುಮಾರ್‌ ಭಟ್‌, ಬೆಂಗಳೂರಿನ ಸಿರಿಧಾನ್ಯ ಪ್ರಚಾರಕಿ ಎಂ.ಬಿ ನಂದಿನಿ ಅವರಿಗೆ 2017ನೇ ಸಾಲಿನ “ಗ್ರಾಮೀಣ ಕುಟುಂಬ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ಲಾಸ್ಟಿಕ್‌ ಕವರ್‌ಗೆ ಪ್ರವೇಶವಿಲ್ಲ 
ಲಾಲ್‌ಬಾಗ್‌ನ ಡಾ.ಮರಿಗೌಡ ಸ್ಮಾರಕ ಭವನದಲ್ಲಿ  ಮೇ 26ರಿಂದ 29ರವರೆಗೆ ಪ್ರತಿದಿನ ಬೆಳಗ್ಗೆ 7ರಿಂದ ರಾತ್ರಿ 7ರವರೆಗೆ ಸಿರಿಧಾನ್ಯ ಮೇಳ ನಡೆಯಲಿದೆ. ಮೇಳದಲ್ಲಿ ಪ್ಲಾಸ್ಟಿಕ್‌ ಕ್ಯಾರಿಕವರ್‌ಗಳನ್ನು ನಿಷೇಧಿಸಲಾಗಿದೆ. ಹೀಗಾಗಿ ಗ್ರಾಹಕರು ಕೈಚೀಲದೊಂದಿಗೆ ಬರುವಂತೆ “ಗ್ರಾಮೀಣ ಕುಟುಂಬ’ ಅಧ್ಯಕ್ಷ ಶ್ರೀಧರ್‌ ಮನವಿ ಮಾಡಿದ್ದಾರೆ.

ಟಾಪ್ ನ್ಯೂಸ್

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

18-

Book Brahma ಸ್ವಾತಂತ್ರ‍್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

partner kannada movie

Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್‌’: ಟ್ರೇಲರ್‌, ಆಡಿಯೋದಲ್ಲಿ ಹೊಸಬರ ಚಿತ್ರ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೆಟಿಯಾದ ಜಗದೀಶ್ ಶೆಟ್ಟರ್

Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೇಟಿಯಾದ ಜಗದೀಶ್ ಶೆಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.