ನಿಷ್ಪಕ್ಷಪಾತ ತೀರ್ಪು ನೀಡಲು ಹೆದರಬೇಕಿಲ್ಲ
Team Udayavani, Jul 25, 2017, 11:18 AM IST
ಬೆಂಗಳೂರು: ನ್ಯಾಯಪೀಠದಲ್ಲಿ ಕುಳಿತು ಕಾರ್ಯನಿರ್ವಹಿಸುವಾಗ ನಿಷ್ಠೆ, ಶ್ರದ್ಧೆ, ನಿಷ್ಪಕ್ಷಪಾತ ಇದ್ದಾಗ ತೀರ್ಪು ನೀಡಲು ಯಾವ ನ್ಯಾಯಾಧೀಶರೂ ಹೆದರಬೇಕಿಲ್ಲ ಎಂದು ನಿವೃತ್ತ ನ್ಯಾ.ಎ.ಜೆ.ಸದಾಶಿವ ಅಭಿಪ್ರಾಯಪಟ್ಟರು.
ರಂಗಶ್ರೀ ಕಲಾ ಸಂಸ್ಥೆ ಹಾಗೂ ದಯಾನಂದ ಸಾಗರ್ ಪ್ರತಿಷ್ಠಾನ ಸಹಯೋಗದಲ್ಲಿ ಸೋಮವಾರ ರವೀಂದ್ರ ಕಲಾಕ್ಷೇತ್ರದಲ್ಲಿ ದಯಾನಂದ ಸಾಗರ್ ಸ್ಮರಣಾರ್ಥ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾಗರ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ನ್ಯಾಯಾಧೀಶರ ಕೆಲಸ ಬಹಳ ಕಷ್ಟವಾದದ್ದು. ತೀರ್ಪು ಕೊಡುವಾಗ ಎಂಟತ್ತು ಬಾರಿ ಚಿಂತನೆ ಮಾಡಬೇಕು ಎಂದು ಹೇಳಿದರು.
ಯಾವ ನ್ಯಾಯಾಧೀಶರಿಗೂ ನಾನು ಕೊಟ್ಟ ತೀರ್ಪು ಸರಿ ಎಂದು ಹೇಳಲು ಧೈರ್ಯ ಇರುವುದಿಲ್ಲ. ಏಕೆಂದರೆ ಅದರ ಮೇಲೆ ಮೇಲ್ಮನವಿಗಳು ಸಲ್ಲಿಕೆಯಾಗುತ್ತವೆ. ಕಣ್ಣು ಮುಚ್ಚಿಕೊಂಡು ತೀರ್ಪು ನೀಡಲು ಸಾಧ್ಯವಿಲ್ಲ. ವಾದ ಪ್ರತಿವಾದ ಆಲಿಸಿ, ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ಬಳಿಕವೂ ತೀರ್ಪು ನೀಡುವಾಗ ಇಡೀ ಕೋರ್ಟ್ದ್ದವರೆಲ್ಲರ ಕಣ್ಣುಗಳು, ಕಿವಿಗಳನ್ನು ಗಮನಿಸುತ್ತಿರುತ್ತವೆ ಎಂಬ ಎಚ್ಚರಿಕೆ ಕೂಡ ನ್ಯಾಯಾಧೀಶರ ಅಂತರಂಗದಲ್ಲಿ ತೊಳಲಾಟಕ್ಕೆ ಕಾರಣವಾಗಿರುತ್ತದೆ ಎಂದರು.
ಸಮಾರಂಭದಲ್ಲಿ ವಿಧಾನಪರಿಷತ್ ಸದಸ್ಯ ಡಾ.ಟಿ.ಎ.ಶರವಣ, ಮೇಯರ್ ಜಿ.ಪದ್ಮಾವತಿಹಿರಿಯ ಚಲನಚಿತ್ರ ನಟ ಡಾ.ಶ್ರೀನಾಥ್, ಸಾಗರ್ ಆಟೋಮೊಬೈಲ್ ಸಿಇಓ ರೋಹನ್ ಪಿ.ಸಾಗರ್, ರಂಗಶ್ರೀ ರಂಗಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸಾಗರ್ ಪ್ರಶಸ್ತಿ ಪುರಸ್ಕಾರ: ರಾಷ್ಟ್ರಪ್ರಶಸ್ತಿ ಪುರಸ್ಕೃತ ಡಾ.ಸೂಲಗಿತ್ತಿ ನರಸಮ್ಮ, ನಿವೃತ್ತ ನ್ಯಾ.ಎ.ಜೆ.ಸದಾಶಿವ, ಸಂಘಟಕ ಬಿ.ಪಿ.ಮಂಜೇಗೌಡ, ಪೊಲೀಸ್ ಅಧಿಕಾರಿ ಟಿ.ಮಹದೇವ, ವೈದ್ಯೆ ಡಾ.ಲತಾ ವೆಂಕಟರಾಮ್, ಎನ್.ಚೇತನ್ ಆನಂದ್, ಚಲನಚಿತ್ರ ನಿರ್ದೇಶಕ ಸಾಯಿ ಪ್ರಕಾಶ್, ವಿಜಯಕುಮಾರ್ ಅವರಿಗೆ ಸಾಗರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್
Crime: ಅನೈತಿಕ ಸಂಬಂಧ; ವ್ಯಕ್ತಿ ಕೊಲೆಗೆ ಸುಪಾರಿ!
CCB Raid: ಲೋಕ ಚುನಾವಣೆ ಹಿನ್ನೆಲೆ; ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ
Motivational: ಪಿಯುನಲ್ಲಿ 2 ಬಾರಿ ಫೇಲ್, ಯುಪಿಎಸ್ಸಿ ಪಾಸ್
Bike Theft: ಹಗಲಲ್ಲಿ ಫುಡ್ಡೆಲಿವರಿ ಕೆಲಸ, ರಾತ್ರಿ ಬೈಕ್ಗಳ ಕಳವು: ಆರೋಪಿ ಬಂಧನ
MUST WATCH
ಹೊಸ ಸೇರ್ಪಡೆ
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
Election Campaign: ಕಾಂಗ್ರೆಸ್ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
UV Fusion: ಇಂಡಿ ಪಂಪ್ ಮಟ..