ನಗರದಲ್ಲಿ ಪ್ರಪಂಚದ ವಿಸ್ಮಯಗಳ ಪ್ರದರ್ಶನ


Team Udayavani, Aug 20, 2017, 11:18 AM IST

sadanandagowda.jpg

ಬೆಂಗಳೂರು: ವಿವಿಧ ವಿನ್ಯಾಸದ 8 ಸಾವಿರಕ್ಕೂ ಅಧಿಕ ಲಗ್ನ ಪತ್ರಿಕೆಗಳು, ಮೈಸೂರು ಅರಸರ ವಂಶ ಇತಿಹಾಸ ಹಾಗೂ ದಸರಾ ವೈಶಿಷ್ಟತೆ, ಬ್ರಿಟಿಷ್‌ ಆಳ್ವಿಕೆಯ ಭಾರತದಲ್ಲಿ ಚಲಾವಣೆಯಲ್ಲಿದ್ದ ಕರೆನ್ಸಿ ಸೇರಿದಂತೆ ಹತ್ತಾರು ವಿಸ್ಮಯ ಅಂಶಗಳನ್ನು ಒಳಗೊಂಡಿರುವ “ವಿಸ್ಮಯ ಪ್ರಪಂಚ’ ವಸ್ತು ಪ್ರದರ್ಶನ ರಾಜಧಾನಿಯಲ್ಲಿ ಪ್ರಾರಂಭಗೊಂಡಿದೆ. 

ಜೆ.ದಶರಥ ಸಿಂಗ್‌ ಅವರು ಸಂಗ್ರಹಿಸಿರುವ ವಿನೂತನ ಹಾಗೂ ವೈವಿಧ್ಯಮಯ ವಸ್ತುಗಳ ಪ್ರದರ್ಶನ ಆರ್‌.ಟಿ.ನಗರದ ತರಳಬಾಳು ಕೇಂದ್ರದಲ್ಲಿ  ಆರಂಭಗೊಂಡಿದ್ದು, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಶನಿವಾರ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ವಿಸ್ಮಯ ಪ್ರಪಂಚ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ದೇಶ ಸುತ್ತಿ, ಕೋಶ ಓದುವುದರಿಂದ ಪರಿಪೂರ್ಣತೆ ಪಡೆಯುತ್ತೇವೆ.

ಈ ವಿಸ್ಮಯ ಪ್ರಪಂಚದಲ್ಲಿ ಪ್ರಾಚೀನತೆಯಿಂದ ಹಿಡದು, ಆಧುನಿಕ ಪ್ರಪಂಚದ ವರೆಗೂ ಬಹುತೇಕ ಎಲ್ಲ ಘಟನಾವಳಿಗಳನ್ನು ಸಂಗ್ರಹಿಸಲಾಗಿದೆ. ಧಾನ್ಯ, ಆಧಾತ್ಮಕ ಮಾಡುವುದರಿಂದ ಏಕಾಗ್ರತೆ ಸಿಗುವಂತೆ ಜಗತ್ತಿನ ಹೊಸ ಆವಿಷ್ಕಾರ, ವೈಜ್ಞಾನಿಕ ಬದಲಾವಣೆಗಳನ್ನು ಈ ಪ್ರದರ್ಶನ ಮೂಲಕವೇ ತಿಳಿದುಕೊಳ್ಳಬಹುದು ಎಂದರು.

ವಿಸ್ಮಯ ಪ್ರಪಂಚದಲ್ಲಿ ಏನಿದೆ?: ವಿವಿಧ ಮಾದರಿಯ 8 ಸಾವಿರಕ್ಕೂ ಅಧಿಕ ಲಗ್ನ ಪತ್ರಿಕೆ, ಪ್ರಾಚೀನ ಕಾಲದ ಕತ್ತಿ, ಖಡ್ಗ, ಬ್ರಿಟಿಷರ ಕಾಲದಲ್ಲಿ ಬಳಸುತ್ತಿದ್ದ ವಸ್ತುಗಳು, ಸಿಗರೇಟ್‌ಪೆಟ್ಟಿಗೆ, ಪಿಂಗಾಣಿ ಗೊಂಬೆಗಳು, ಮೊದಲ ಮಹಾಚುನಾವಣೆಯಲ್ಲಿ ಬಳಿಸಿದ ಮತ ಪೆಟ್ಟಿಗೆ, ಪುರಾತನ ಕಾಲದ ಟಾರ್ಚು, ಹಿತ್ತಾಳೆ ತಕ್ಕಡಿ ಮೊದಲಾದ ವಸ್ತುಗಳು ಆಕರ್ಷಣೀಯವಾಗಿದೆ.

ರಾಷ್ಟ್ರಪತಿ, ಉಪರಾಷ್ಟ್ರಪತಿ ಆಯ್ಕೆಯ ಮಾಹಿತಿ, ಇಂದಿರಾಗಾಂಧಿ, ವಾಜಪೇಯಿ, ದೇವೇಗೌಡ, ಲಾಲ ಬಹದ್ಧೂರ್‌ ಶಾಸಿŒ, ರಾಜೀವ್‌ ಗಾಂಧಿ, ಮೊರಾರ್ಜಿ ದೇಸಾಯಿ, ಲಾಲು ಪ್ರಸಾದ್‌ ಯಾದವ್‌, ಸಂಜಯ ಗಾಂಧಿ ಸೇರಿದಂತೆ ಭಾತರದ ನಾಯಕರ ಅಪರೂಪದ ಚಿತ್ರಗಳು, ಕರ್ನಾಟಕದ ಮುಖ್ಯಮಂತ್ರಿಗಳ, ಜ್ಞಾನಪೀಠ ಪ್ರಶಸ್ತಿ ವಿಜೇತರ ಮಾಹಿತಿ ಸಂಗ್ರಹ ಇಲ್ಲಿದೆ.

ಪ್ರಪಂಚದಲ್ಲಿ ಮೊದಲು ಕಂಡು ಹಿಡಿದ ಉಪಕರಣಗಳಾದ ರೇಡಿಯೋ, ಫೋನ್‌, ಕಂಪ್ಯೂಟರ್‌, ಮೋಟರ್‌ ಸೈಕಲ್‌, ಬೈಸೈಕಲ್‌, ಟಿ.ವಿ., ಮೊಬೈಲ್‌ ಜತೆಗೆ  ವಿಶ್ವದ ಮೊದಲ ರಸ್ತೆ ಅಪಘಾತದ ಚಿತ್ರಗಳು,  ಬ್ರಿಟಿಷ್‌ ಆಳ್ವಿಕೆಯ ಭಾರತದಲ್ಲಿ ಚಾಲ್ತಿಯಲ್ಲಿದ್ದ ಕರೆನ್ಸಿಗಳು, ದೇಶ ವಿದೇಶದ ನೋಟು, ನಾಣ್ಯಗಳು,  ವಿವಿಧ ಪತ್ರಿಕೆಯಲ್ಲಿ ಬಂದಿರುವ ವಿಸ್ಮಯಕಾರಿ ಘಟನೆಗಳ ಸಂಗ್ರಹ, ಮಾನವನ ಅಪೂರ್ವ ಸಂತತಿಗಳಾದ ಅಜ್ಜನಂತಿರುವ ನವಜಾತ ಶಿಶು,

ಅಲ್ಪಾಯುಷಿ ಮತ್ಸ್ಯ ಶಿಶು, ನಾನಾ ಪ್ರಭೇದದ ಪ್ರಾಣಿ, ಪಕ್ಷಿಗಳು, ಸಸ್ತನಿ, ಪ್ರಾಣಿಗಳ ವೈವಿದ್ಯತೆ, ವಿವಿಧ ಹಣ್ಣುಗಳ ಸಮಗ್ರ ಚಿತ್ರಣ ಸೇರಿದಂತೆ ಪತ್ರಿಕೆಯಲ್ಲಿ ಬಂದಿರುವ ವಿವಿಧ ವಿಸ್ಮಯಕಾರಿ ಮಾಹಿತಿಯನ್ನು ಸಂಗ್ರಹಿಸಿ ಪ್ರದರ್ಶನಕ್ಕೆ ಇಟ್ಟಿದ್ದಾರೆ.ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 10ರಿಂದ ಸಂಜೆ 7ರ ತನಕ ಆಗಸ್ಟ್‌ 21ರವರೆಗೂ ಪ್ರದರ್ಶನ ಇರುತ್ತದೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.