ಭಾನುವಾರ ಇಂದಿರಾ ಕ್ಯಾಂಟೀನ್ಗೆ ಬಂದವರೇ ಕಡಿಮೆ
Team Udayavani, Aug 21, 2017, 11:27 AM IST
ಬೆಂಗಳೂರು: ಇತರ ದಿನಗಳಿಗೆ ಹೋಲಿಸಿದರೆ ಭಾನುವಾರ ಇಂದಿರಾ ಕ್ಯಾಂಟೀನ್ನಲ್ಲಿ ಜನಸಂಧಣಿ ಕಡಿಮೆಯಾಗಿತ್ತು. ಕೇಂದ್ರ ಭಾಗದ ಕೆಲ ಕ್ಯಾಂಟೀನ್ಗಳ ಹೊರತು, ಉಳಿದೆಡೆ ಜನರ ಸಾಲು ಕಾಣಲಿಲ್ಲ. ಇಂದಿರಾ ಕ್ಯಾಂಟೀನ್ ಆರಂಭವಾದ ದಿನದಿಂದಲೂ ಕ್ಯಾಂಟೀನ್ಗಳ ಬಳಿ ಭಾರಿ ಜನಜಂಗುಳಿ ಇದ್ದ ಕಾರಣ ಕೆಲವರು ಆಹಾರ ದೊರೆಯದೆ ಬೇಸರದಿಂದ ಹಿಂದಿರುಗಿದ್ದರು. ಆದರೆ, ಭಾನುವಾರ ಆ ಸ್ಥಿತಿ ಕಾಣಲಿಲ್ಲ.
ಇಂದಿರಾ ಕ್ಯಾಂಟೀನ್ ಯೋಜನೆಗೆ ನಗರದ ಕೇಂದ್ರ ಭಾಗದಲ್ಲಿನ ವಾರ್ಡ್ಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅತಿ ಹೆಚ್ಚು ಜನರು ಭೇಟಿ ನೀಡುವ ಕ್ಯಾಂಟೀನ್ಗಳ ಮಾಹಿತಿಯನ್ನು ವಲಯ ಜಂಟಿ ಆಯುಕ್ತರಿಂದ ಪಡೆದು ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಜನರ ಅಸಮಾಧಾನ: ಇಂದಿರಾ ಕ್ಯಾಂಟೀನ್ಗಳಲ್ಲಿ ಆಹಾರ ಕೊರತೆಯಾಗುತ್ತಿರುವ ಕುರಿತು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ಗಂಟೆಗಟ್ಟಲೇ ಕಾಯುವುದರ ಕುರಿತೂ ದೂರಿದ್ದಾರೆ. ಪ್ರತಿ ಕ್ಯಾಂಟೀನ್ನಲ್ಲಿ ಒಂದು ಹೊತ್ತಿಗೆ 500 ಜನರಿಗೆ ಆಹಾರ ವಿತರಿಸಲಾಗುತ್ತಿದೆ. ಆದರೆ, ಪ್ರತಿ ಕ್ಯಾಂಟೀನ್ಗಳಿಗೆ 200 ಊಟದ ತಟ್ಟೆಗಳನ್ನು ಮಾತ್ರ ನೀಡಿರುವುದರಿಂದ ಶೀಘ್ರ ಸಾರ್ವಜನಿಕರಿಗೆ ಆಹಾರ ಪೂರೈಕೆ ಮಾಡಲಾಗುತ್ತಿಲ್ಲ. ತಟ್ಟೆಗಳನ್ನು ಸ್ವತ್ಛಗೊಳಿಸಿ ತರುವುದರಲ್ಲಿ ಸಾರ್ವಜನಿಕರು ಗಲಾಟೆಗೆ ಮುಂದಾಗುತ್ತಿದ್ದಾರೆ ಎಂಬುದು ಕ್ಯಾಂಟೀನ್ ಸಿಬ್ಬಂದಿಯ ಅಭಿಪ್ರಾಯ.
ಉಪಹಾರ ಸವಿದ ಜಮೀರ್
ನಗರದ ಗುಡ್ಡದಹಳ್ಳಿಯಲ್ಲಿರುವ ಇಂದಿರಾ ಕ್ಯಾಂಟೀನ್ಗೆ ಭಾನುವಾರ ಬೆಳಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕ ಜಮೀರ್ ಅಹಮದ್ ಖಾನ್, ಅಲ್ಲಿಯೇ ಬೆಂಬಲಿಗರೊಂದಿಗೆ ಉಪ್ಪಿಟ್ಟು ಹಾಗೂ ಪಲಾವ್ ಸೇವಿಸಿದರು.
ಇದೇ ವೇಳೆ ಕ್ಯಾಂಟೀನ್ನಲ್ಲಿ ದೊರೆಯುವ ಆಹಾರದ ಗುಣಮಟ್ಟ ಹಾಗೂ ಸ್ವತ್ಛತೆ ಕುರಿತು ಸಾರ್ವಜನಿಕರಿಂದ ಮಾಹಿತಿ ಪಡೆದುಕೊಂಡರು. ನಂತರ ಮಾತನಾಡಿದ ಅವರು, ಬಹುತೇಕರು ಕರೆ ಮಾಡಿ ಕ್ಯಾಂಟೀನ್ ನಿರ್ಮಿಸಿ ಉತ್ತಮ ಕೆಲಸ ಮಾಡಿದ್ದೀರಾ ಎಂದು ಅಭಿನಂದಿಸಿದ್ದಾರೆ ಇದನ್ನು ಸರ್ಕಾರ ಮಾಡಿದ್ದು ಎಂಬುದು ಅವರಿಗೆ ಗೊತ್ತಿಲ್ಲ. ಶಾಸಕರೇ ಮಾಡಿದ್ದಾರೆ ಎಂದು ಅವರು ಭಾವಿಸಿದ್ದಾರೆ.ಇದು ಸರ್ಕಾರದ ಕೆಲಸ ಎಂಬುದನ್ನು ತಿಳಿಸಿದ್ದೇನೆ ಎಂದರು.
ಬಡವರಿಗೆ ಆಹಾರ ನೀಡಲು ಯೋಜನೆ ಜಾರಿಗೊಳಿಸಿರುವುದು ಉತ್ತಮ ಕಾರ್ಯ. 5 ರೂ.ಗಳಿಗೆ ತಿಂಡಿ ಕೊಡುತ್ತಿದ್ದು, ಅದರ ರುಚಿ ಹೇಗಿದೆ ಎಂಬುದನ್ನು ನೋಡಲು ಕ್ಯಾಂಟೀನ್ಗೆ ಭೇಟಿ ನೀಡಿದ್ದೇನೆ. ಕ್ಯಾಂಟೀನ್ಗೆ ಪ್ರತಿಕ್ರಿಯೆ ಹೇಗಿದೆ ಎಂದರೆ ಸ್ಪಾರ್ ಹೋಟೆಲ್ಗಳಲ್ಲಿ ಟೇಬಲ್ ಬುಕ್ ಮಾಡುವ ರೀತಿ ಇಲ್ಲಿ ಮೊದಲೇ ಟೋಕನ್ ಪಡೆಯಬೇಕಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ವೀಕ್ಷಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಸೆರೆ
Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ
ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್
Crime: ಅನೈತಿಕ ಸಂಬಂಧ; ವ್ಯಕ್ತಿ ಕೊಲೆಗೆ ಸುಪಾರಿ!
CCB Raid: ಲೋಕ ಚುನಾವಣೆ ಹಿನ್ನೆಲೆ; ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ
MUST WATCH
ಹೊಸ ಸೇರ್ಪಡೆ
Bengaluru: ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ವೀಕ್ಷಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಸೆರೆ
B Y Vijayendra: ಕಾಂಗ್ರೆಸ್ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ?
Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ
Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ
Video Viral: ಕಚ್ಚಿದ ಹಾವನ್ನೇ ಕೊಂದು ಆಸ್ಪತ್ರೆಗೆ ತಂದ ಮಹಿಳೆ… ಕಂಗಾಲಾದ ವೈದ್ಯರು