ಬಗೆ ಬಗೆ ಗಣೇಶ ಮೂರ್ತಿ ಸಂಗ್ರಹವೇ ಇವರ ಹವ್ಯಾಸ


Team Udayavani, Aug 21, 2017, 11:27 AM IST

ganesha-pendal.jpg

ಬೆಂಗಳೂರು: ಒಬ್ಬೊಬ್ಬರಿಗೂ ಒಂದೊಂದು ಹವ್ಯಾಸ. ಕೆಲವರು ವಿವಿಧ ದೇಶಗಳ ಕರೆನ್ಸಿ, ನಾಣ್ಯ ಸಂಗ್ರಹಿಸಿದರೆ, ಹಲವರಿಗೆ ಅಂಚೆ ಚೀಟಿಗಳನ್ನು ಕೂಡಿಡುವ ಹವ್ಯಾಸ. ಸಿಲಿಕಾನ್‌ ಸಿಟಿಯ ತ್ಯಾಗರಾಜನಗರ ನಿವಾಸಿ ವಿಜಯಲಕ್ಷ್ಮಿ ಅವರಿಗೆ ವಿಶಿಷ್ಟ ಗಣೇಶ ವಿಗ್ರಹಗಳನ್ನು ಸಂಗ್ರಹಿಸುವ ಮತ್ತು ಪ್ರತೀ ವರ್ಷವೂ ವಿಭಿನ್ನವಾಗಿ ತಯಾರಿಸಿದ ಗಣೇಶ ವಿಗ್ರಹಗಳನ್ನು ಪೂಜಿಸುವ ಹವ್ಯಾಸಿವಿದೆ.

ಕಳೆದ 30 ವರ್ಷಗಳಿಂದಲೂ ಅದನ್ನು ಪಾಲಿಸಿಕೊಂಡು ಬಂದಿರುವ ಅವರ ಬಳಿ ಸುಮಾರು 47ಕ್ಕೂ ಹೆಚ್ಚು ವಿಭಿನ್ನ ಗಣೇಶ ವಿಗ್ರಹಗಳಿವೆ. ತೆಂಗಿನ ಕಾಯಿ ಬಳಸಿ ಮಾಡಲಾಗಿರುವ ತೆಂಗಿನ ಗಣೇಶ, ಕೊಬ್ಬರಿ ಗಣೇಶ, ಅಡಿಕೆ ಗಣೇಶ, ತಾಮ್ರದ ಗಣೇಶ, ರೇಡಿಯಂ ಗಣೇಶ, ಗಾಂಧಿ ಗಣೇಶ, ಬಾಂಬೆ ಗಣೇಶ, ಆನೆಗುಡ್ಡ ಗಣೇಶ, ಚಕ್ಕೆ ಗಣೇಶ, ಚಿನ್ನದ ಗಣೇಶ, ಬೆಳ್ಳಿ ಗಣೇಶ, ಹರಳು ಗಣೇಶ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. 

ಪವಿತ್ರ ಧಾರ್ಮಿಕ ಕ್ಷೇತ್ರಗಳೂ ಸೇರಿದಂತೆ ಹೋದ ಕಡೆಗಳಲ್ಲೆಲ್ಲ ವಿಶಿಷ್ಠ, ವಿಭಿನ್ನವಾದ ಗಣೇಶ ಕಣ್ಣಿಗೆ ಕಂಡೊಡನೆ ಅದನ್ನು ತಮ್ಮೊಂದಿಗೆ ತೆಗೆದುಕೊಂಡು ಬರುವ ಅವರು, ತಮ್ಮ ಸಂಗ್ರಹದಲ್ಲಿರುವ ಗಣೇಶ ಮೂರ್ತಿಗಳ ಸಂಖ್ಯೆಯನ್ನು ಹೆಚ್ಚುಸುತ್ತಲೇ ಇದ್ದಾರೆ. ಅವರಿಗೆ ಈ ವಿಷಯದಲ್ಲಿ ಹೆಮ್ಮೆ ಇದೆಯೇ ಹೊರತು, ಗಣೇಶ ವಿಗ್ರಹ ಸಂಗ್ರಹಣೆ ಎಂದಿಗೂ ಬೇಸರ ತರಿಸಿಲ್ಲ ಎಂಬುದೇ ವಿಶೇಷ. 

ಬಿದಿರು ಗಣೇಶ
ಕಳೆದ ವರ್ಷ ಪಾತ್ರೆಗಳನ್ನು ಬಳಸಿ ಗಣೇಶ ವಿಗ್ರಹ ಮಾಡಿದ್ದ ವಿಜಯಲಕ್ಷ್ಮಿಅವರು, ಈ ಬಾರಿ ಬಿದಿರಿನಿಂದ ತಯಾರಿಸಿದ ವಸ್ತುಗಳನ್ನು ಉಪಯೋಗಿಸಿಕೊಂಡು ಬಿದಿರು ಗಣೇಶನನ್ನು ಮಾಡಿದ್ದಾರೆ. ಮೊರದಿಂದ ಗಣೇಶನ ಅಗಲವಾದ ಕಿವಿಗಳು, ಸಣ್ಣ ಬುಟ್ಟಿಗಳಿಂದ ಕಿರೀಟ, ದೊಡ್ಡ ಬುಟ್ಟಿಗಳಿಂದ ಮುಖ, ಹೊಟ್ಟೆ ಮಾಡಿದ್ದಾರೆ. ಜತೆಗೆ ಅಡಿಗೆ ಹಾಳೆಗಳ ತಟ್ಟೆಗಳನ್ನು ಇದರಲ್ಲಿ ಬಳಸಿಕೊಂಡಿದ್ದು, ಬಿದಿರು ಗಣೇಶ ಸುಮಾರು 4 ಅಗಲ, 5.5 ಅಡಿ ಎತ್ತರ ಇರುವುದು ವಿಶೇಷ. 

ಬಿದಿರು ಗಣೇಶನ ಸೃಷ್ಟಿಗೆ ಹೊಸ ಬಿದಿರಿನ ಮೊರ, ಬುಟ್ಟಿ (ಕುಕ್ಕೆ), ಅಡಿಕೆ ಹಾಳೆಯಿಂದ ತಯಾರಿಸಿದ ತಟ್ಟೆಗಳು, ಹೂವಿನ ಬುಟ್ಟಿ, ನಾರಿನ ಹಳ್ಳಗಳನ್ನು ಬಳಸಿದ್ದು, ಗಣೇಶ ಹಬ್ಬದ ನಂತರ ಇವೆಲ್ಲವನ್ನೂ ಬಿಚ್ಚಿ ಪುನಃ ಗೃಹೋಪಯೋಗಕ್ಕೆ ಬಳಸುತ್ತೇವೆ. ಮಣ್ಣಿನ ಗಣೇಶ ವಿಗ್ರಹವಾಗಿದ್ದರೆ, ನೀರಿಗೆ ವಿಸರ್ಜನೆ ಮಾಡಬಹುದಿತ್ತು. ಆದರೆ, ಬಿದಿರಿನಿಂದ ಮಾಡಿದ್ದರಿಂದ ಸುಡಬೇಕಾಗುತ್ತದೆ. ಆದ್ದರಿಂದ ಮನೆ ಬಳಕೆಗೆ ಅದನ್ನು ಉಪಯೋಗಿಸಲು ನಿರ್ಧರಿಸಿದ್ದೇವೆ ಎನ್ನುತ್ತಾರೆ ವಿಜಯಲಕ್ಷ್ಮೀ. 

ದೀಪ ಕಂಬದ ಗೌರಿ-ಗಣೇಶ
ದೀಪದ ಕಂಬಗಳನ್ನು ಬಳಸಿ  ಇವರು ಗಣೇಶ ಮತ್ತು ಗೌರಿಯನ್ನು ತಯಾರಿಸಿದ್ದಾರೆ. ದೀಪದ ಕಂಬಗಳಿಗೆ ಗಣೇಶ ಮತ್ತು ಗೌರಿಯ ಮುಖಗಳನ್ನು ಹಾಕಿದ್ದು, ವಿಶೇಷ ಅಲಂಕಾರದಿಂದ ಕಲಾತ್ಮಕವಾಗಿ ಸೃಷ್ಟಿಸಿದ್ದಾರೆ. ಈ ಬಾರಿಯ ಗೌರಿ-ಗಣೇಶ ಹಬ್ಬದಲ್ಲೀ ಈ ಮೂರ್ತಿಗಳಿಗೂ ವಿಶೇಷ ಪೂಜೆ ಸಲ್ಲಲ್ಲಿದೆ. 

ಗಣೇಶ ಹಬ್ಬದಂದು ಮಣ್ಣಿನಿಂದ ತಯಾರಿಸಿದ ಮೂಲ ಗಣೇಶನಿಗೆ ಪೂಜೆ ಸಲ್ಲಿಸಿ ನಂತರ ವಿಸರ್ಜನೆ ಮಾಡುತ್ತೇವೆ. ಮುತ್ತೈದೆಯರು ಪ್ರತಿ ಮನೆಗೆ ಹೋಗಿ 21 ಗಣೇಶ ದರ್ಶನ ಮಾಡುವ ಸಂಪ್ರಾದಾಯವಿದೆ. ಆದರೆ, ನಮ್ಮ ಮನೆಯಲ್ಲಿ 50ಕ್ಕೂ ಹೆಚ್ಚು ಗಣೇಶನ ದರ್ಶನ ಭಾಗ್ಯ ಲಭಿಸಲಿದೆ. ಗಣೇಶ ವಿಗ್ರಹ ಸಂಗ್ರಹ ಮತ್ತು ವಿಶಿಷ್ಟ ಗಣೇಶ ವಿಗ್ರಹಗಳ ಪೂಜೆಗೆ ಪತಿ ರಿಗ್ರೆಟ್‌ ಅಯ್ಯರ್‌ ಅವರ ಸಹಕಾರವಿದೆ.
-ವಿಜಯಲಕ್ಷ್ಮಿ ರಿಗ್ರೆಟ್‌ ಅಯ್ಯರ್‌

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.