ಕೃಷ್ಣಕುಮಾರ್ ಪೂಂಜಾ ಅವರಿಗೆ ತುಳುನಾಡ ಬೊಲ್ಪು ಪ್ರಶಸ್ತಿ
Team Udayavani, May 9, 2017, 11:36 AM IST
ಬಂಟ್ವಾಳ: ಕತಾರ್ ತುಳುಕೂಟ ಸಮಾಜ ಸೇವೆಗಾಗಿ ಕೊಡಮಾಡುವ ತುಳುನಾಡ ಬೊಲ್ಪು ಪ್ರಶಸ್ತಿಗೆ ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾ ನದ ಆಡಳಿತ ಟ್ರಸ್ಟಿ ಸೇವಾರತ್ನ ಕೃಷ್ಣಕುಮಾರ್ ಪೂಂಜಾ ಆಯ್ಕೆಯಾಗಿದ್ದಾರೆ.
ಮೇ 19ರಂದು ದೋಹಾ ಕತಾರ್ನಲ್ಲಿ ನಡೆ ಯುವ ತುಳುಕೂಟ ವಾರ್ಷಿಕೋತ್ಸವದಲ್ಲಿ ಪೂಂಜಾ ಈ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಇದೇ ಸಂದರ್ಭ ಹರೇಕಳ ಹಾಜಬ್ಬ, ಸುನೀಲ್ ಡಿ’ಸೋಜಾ ಅವರು ಕೂಡ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಕತಾರಿನಲ್ಲಿ ಭಾರತದ ರಾಯಭಾರಿ ಪಿ. ಕುಮಾರನ್, ಮಣಿಪಾಲ ವಿ.ವಿ. ಸಹಕುಲಪತಿ ಡಾ| ಎಚ್.ಎಸ್. ಬಲ್ಲಾಳ್, ದೋಹಾ ಬ್ಯಾಂಕ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ಆರ್. ಸೀತಾರಾಮನ್, ದೋಹಾ ಕತಾರ್ನ ಇಂಡಿ
ಯನ್ ಕಲ್ಚರಲ್ ಸೆಂಟರ್ನ ಅಧ್ಯಕ್ಷೆ ಮಿಲನ್ ಅರುಣ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕೃಷ್ಣಕುಮಾರ್ ಪೂಂಜಾ ಅವರು ಸೇವಾಂಜಲಿ ಪ್ರತಿಷ್ಠಾನದ ಮೂಲಕ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರಂತರ ನಡೆಸಿಕೊಂಡು ಬರುತ್ತಿದ್ದಾರೆ. ಉಚಿತ ವೈದ್ಯಕೀಯ ಶಿಬಿರ, ರಕ್ತದಾನ ಶಿಬಿರ, ನೇತ್ರ, ದಂತ ಚಿಕಿತ್ಸಾ ಶಿಬಿರವನ್ನು ದಾಖಲೆ ಸಂಖ್ಯೆಯಲ್ಲಿ ಸಂಘಟಿಸಿದ್ದಾರೆ. ಇವರ ಸಾಧನೆಗೆ ಈಗಾಗಲೇ ಸೇವಾರತ್ನ ಪ್ರಶಸ್ತಿ, ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ವಿಶ್ವೇಶ್ವರಯ್ಯ ದಶಮಾನೋತ್ಸವ ಪ್ರಶಸ್ತಿ, ಇಂದಿರಾ ಗಾಂಧಿ ಸದ್ಭಾವನ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ, ಸಮ್ಮಾನಗಳು ದೊರಕಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ