ಬಾಳಪ್ಪ ನಿಲ್ಲಿಸಿದ ಆಟ ಆಡುವವರಾರು?


Team Udayavani, Aug 20, 2017, 10:29 AM IST

gulbarga.jpg

ಬೆಳಗಾವಿ: ಹಿರಿಯ ರಂಗಜೀವಿ ನಾಡೋಜ ಡಾ| ಏಣಗಿ ಬಾಳಪ್ಪ ನಾಟಕ ನಿಲ್ಲಿಸಿ ನೇಪಥ್ಯಕ್ಕೆ ಸರಿದು ಪಂಚಭೂತಗಳಲ್ಲಿ ಲೀನರಾದರು. ನೂರಕ್ಕೂ ಹೆಚ್ಚು ಕಾಲ ಬಾಳಿ ಬದುಕಿದ ಬಾಳಪ್ಪ ಅವರ ನೆನಪುಗಳು ಮಾತ್ರ ಜನರ ಮನದಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ. ರಂಗಭೂಮಿ ಪರಂಪರೆ ಉಳಿಸುವ ನಿಟ್ಟಿನಲ್ಲಿ ರಂಗ ಸಂಗೀತಕ್ಕೆ ಆದ್ಯತೆ ಸಿಗಬೇಕೆಂಬ ಕನಸು ಬಾಳಪ್ಪನವರದ್ದಾಗಿತ್ತು. ರಂಗ ಗೀತೆಗಳನ್ನು ಉಳಿಸಲು ಸರಕಾರ ಕ್ರಮ ಕೈಗೊಳ್ಳಬೇಕು.
ಶಾಸ್ತ್ರೀಯ ಸಂಗೀತಕ್ಕೂ ರಂಗ ಸಂಗೀತಕ್ಕೂ ವ್ಯತ್ಯಾಸ ಇದೆ. ಆದರೆ ರಂಗ ಗೀತೆಗಳ ಧ್ವನಿ ಮುದ್ರಣ ಮಾಡಿ ಮುಂದಿನ ಪೀಳಿಗೆಗೆ ಉಳಿಸಲು ಸರಕಾರ ಮುಂದಾಗಬೇಕು ಎಂಬ ಕನಸು ಕಂಡಿದ್ದರು. ಹೀಗಾಗಿಯೇ ಬಾಳಪ್ಪ ಆಗಾಗ ಆಕಾಶವಾಣಿ ಕಾರ್ಯಕ್ರಮ ನಡೆಸಿ ರಂಗಗೀತೆ ಹಾಡುತ್ತಿದ್ದರು. ಮುಂದಿನ ಪೀಳಿಗೆಗೆ ರಂಗಗೀತೆಗಳನ್ನು ಕಲಿಸುವ ಇರಾದೆ ಬಾಳಪ್ಪನವರದ್ದಾಗಿತ್ತು. ಈ ಹಿನ್ನೆಲೆಯಲ್ಲಿ ಸಾವಿರಾರು ಜನರಿಗೆ ರಂಗ ಗೀತೆಗಳನ್ನು ಕಲಿಸಿದ್ದರು. ಇದು ಮುಂದುವರಿದು ಸರಕಾರ ರಂಗ ಸಂಗೀತ ಶಾಲೆ ಆರಂಭಿಸಬೇಕೆಂಬ ಕನಸು ಹೊಂದಿದ್ದರು. ಈ ನಿಟ್ಟಿನಲ್ಲಿ ಜಿಲ್ಲೆಯ ರಂಗಕರ್ಮಿಗಳು ಹಾಗೂ ಸರಕಾರ ಸಂಗೀತ ಶಾಲೆ ಸ್ಥಾಪಿಸುವ ಬಗ್ಗೆ ಮನಸ್ಸು ಮಾಡಬೇಕಿದೆ. ರಂಗ ಭಂಡಾರ ಮ್ಯೂಸಿಯಂ ಆಗಲಿ: ವೃತ್ತಿ ರಂಗಭೂಮಿ ಸಾಹಿತ್ಯ ಇತ್ತೀಚಿನ ದಿನಗಳಲ್ಲಿ ಮರೆಯಾಗುತ್ತಿದೆ. ಇದು ಒಂದೆಡೆ ಸಂಗ್ರಹವಾಗಬೇಕಿದೆ. ಬಾಳಪ್ಪ ಒಂಭತ್ತು ದಶಕಗಳ ಕಾಲ ಮಾಡಿದ ಸಾಧನೆ, ಅಭಿನಯಿಸಿದ ನಾಟಕ, ಕಂಪನಿ ಬೆಳೆಸಿದ ಪರಿ ಒಂದು ಸಂಗ್ರಹಾಲಯವಾಗಿ ಬೆಳೆಯಬೇಕಾಗಿದೆ. ಅದು ಕೂಡ ಬೆಳಗಾವಿ ಜಿಲ್ಲಾ ಕೇಂದ್ರದಲ್ಲಾದರೆ ಒಳಿತು. ಬಾಳಪ್ಪನವರ ಪ್ರಶಸ್ತಿಗಳು, ಫೋಟೋಗಳು, ನಾಟಕದ ಪರಿಕರಗಳು, ನಾಟಕದ ವಸ್ತುಗಳು, ಅವರ ಕುರಿತು ಬರೆದ ಇತರೆ ಪುಸ್ತಕಗಳು ಹೀಗೆ ವಿವಿಧ ವಸ್ತುಗಳ ರಂಗ ಭಂಡಾರ ಸಂಗ್ರಹಾಲಯ ನಿರ್ಮಾಣವಾದರೆ ಮುಂದಿನ ಜನಾಂಗಕ್ಕೆ ಕಂಪನಿ ನಾಟಕದ ಬಗ್ಗೆ ಅರಿವು ಮೂಡಲು ಸಾಧ್ಯವಾಗುತ್ತದೆ ಎನ್ನುತ್ತಾರೆ ರಂಗಕರ್ಮಿ ಡಾ| ರಾಮಕೃಷ್ಣ ಮರಾಠೆ. ಬಾಳಪ್ಪನ ಸಂಪತ್ತು ಉಳಿಸುವುದೆಂದರೆ ರಂಗಭೂಮಿಯ ಸಂಪತ್ತು ಉಳಿಸಿದಂತೆ. ಜಿಲ್ಲೆಯ ಅನೇಕ ಬಹುದೊಡ್ಡ ನಾಟಕ ಕಂಪನಿಗಳು ಇದ್ದರೂ ಆ ಹೆಸರಿನಲ್ಲಿ ಉಳಿದುಕೊಂಡಿಲ್ಲ. ಈಗಲಾದರೂ ಸಿಕ್ಕಷ್ಟು ಮಾಹಿತಿಯನ್ನು ಬಾಳಪ್ಪನ ಹೆಸರಿನ ನೆಪದಲ್ಲಾದರೂ ರಂಗಭೂಮಿಯ ಭಂಡಾರ ಸಂಗ್ರಹಿಸಿದಂತಾಗುತ್ತದೆ. ಕಂಪನಿ ನಾಟಕಗಳ ದಾಖಲೆಗಳು, ವಸ್ತುಗಳು, ಪರಿಕರಗಳು, ವೃತ್ತಿ ನಾಟಕ ಸಾಹಿತ್ಯ ಉಳಿಸುವ ಕೆಲಸ ಮಾಡಬೇಕಿದೆ. ಕಂಪನಿ ನಾಟಕ ಸಾಹಿತ್ಯ ಬಹುದೊಡ್ಡ ಸಾಹಿತ್ಯ. ಅವುಗಳು ಕೇವಲ ಬಸ್‌ ನಿಲ್ದಾಣದಲ್ಲಿ ತೂಗು ಹಾಕುವ ಪ್ರಕಟಣೆಗಳು ಮಾತ್ರ ಆಗಿವೆ. ಕಂಪನಿ ನಾಟಕಗಳ ಸಾಹಿತ್ಯದ ಸಂಗ್ರಹದ ಗ್ರಂಥಾಲಯವಾದರೆ ಬಹುದೊಡ್ಡ ಸಾಹಿತ್ಯ ಪರಂಪರೆ ಉಳಿಸಿದಂತಾಗುತ್ತದೆ. ಕಂಪನಿ ನಾಟಕಗಳ ರಚಿತ ಸಾಹಿತ್ಯಕ್ಕಾಗಿಯೇ ಗ್ರಂಥಾಲಯ ನಿರ್ಮಾಣವಾಗಲಿ. ಅದಕ್ಕೆ ಪೂರಕವಾಗಿ ಬೇಕಾಗುವ ಪುಸ್ತಕಗಳನ್ನು ರಂಗಕರ್ಮಿಗಳು, ನಾಟಕಕಾರರಿಂದ ಸಂಗ್ರಹಿಸುವ ಕೆಲಸ ಆಗಲಿ. ಈ ಯೋಜನೆ ಬಗ್ಗೆ ಅನೇಕ ಸಲ ಕರ್ನಾಟಕ ನಾಟಕ ಅಕಾಡೆಮಿ ಗಮನಕ್ಕೂ ತರಲಾಗಿತ್ತು ಎನ್ನುತ್ತಾರೆ ಮರಾಠೆ.

ಭೈರೋಬಾ ಕಾಂಬಳೆ

ಟಾಪ್ ನ್ಯೂಸ್

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Baragala (2)

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

jagadish shettar

Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.