ಜಲ ಸಂರಕ್ಷಣೆ ಕಾರ್ಯಕ್ಕೆ ನೆರೆ ರಾಜ್ಯ ಜನ ಖುಷ್‌


Team Udayavani, Aug 18, 2017, 4:48 PM IST

Water-1.jpg

ವಿಜಯಪುರ: ನಗರದಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಜಲ ಸಾಕ್ಷರ ಸಮಾವೇಶಕ್ಕೆ ನೆರೆಯ ರಾಜ್ಯಗಳ ಜನರು ಇನ್ನಿಲ್ಲದ ಸಂತಸ ವ್ಯಕ್ತಪಡಿಸಿದ್ದು, ಇಂಥ ಕಾರ್ಯಕ್ರಮಗಳ ಮೂಲಕ ಕರ್ನಾಟಕ ಜಲ ಜಾಗೃತಿಯಲ್ಲಿ ರಾಜ್ಯಕ್ಕೆ ಮಾದರಿ ಎಂದು ಹೊಗಳಿದ್ದಾರೆ. ಭೀಕರ ಬರಕ್ಕೆ ತುತ್ತಾಗುವ ಮಹಾರಾಷ್ಟ್ರದ ಕೊಲ್ಲಾಪುರ, ಇಚಲಕರಂಜಿ ಪ್ರದೇಶದಲ್ಲಿ ನಗರೀಕರಣ ಹಾಗೂ ಕೈಗಾರೀಕರಣದ ಫಲವಾಗಿ ಅಲ್ಲಿನ ಕೃಷ್ಣಾ ನದಿಯ ಪುಟ್ಟ ಉಪನದಿ ಪಂಚಗಂಗಾ ಜೀವ ಕಳೆದುಕೊಂಡಿತ್ತು. ಇದನ್ನರಿತ ರಾಷ್ಟ್ರ ಸೇವಾ ದಳ ಎಂಬ ಸಂಸ್ಥೆಯ ಸಾರಥ್ಯದಲ್ಲಿ ನದಿಯ ಪುನರುಜ್ಜೀವನಕ್ಕೆ ಮುಂದಾದ ಜಲ ಸಂರಕ್ಷಕರ ಪಡೆ ಇದಕ್ಕಾಗಿ ದೊಡ್ಡ ಮಟ್ಟದ ಅಭಿಯಾನವನ್ನೇ ಮಾಡಿ, ತನ್ನ ಉದ್ದೇಶ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಸತತ ನಾಲ್ಕಾರು ವರ್ಷಗಳ ಕಾಲ ಜನರಲ್ಲಿ ಜಾಗೃತಿ ಮೂಡಿಸಿ, ಪಂಚಗಂಗಾ ಎಂಬ ತಮ್ಮ ಜೀವನದಿ ಉಳಿಸುವಲ್ಲಿ ಹಳ್ಳಿಗರ ಪಾತ್ರದ ಕುರಿತು ಮನವರಿಕೆ ಮಾಡಿಕೊಟ್ಟರು. ಪಂಚಗಂಗಾ ನದಿಯ ಜೀವಸೃಷ್ಟಿಯಾಗಿರುವ ಹಳ್ಳಗಳಿಗೆ ಪ್ಲಾಸ್ಟಿಕ್‌ ಸೇರಿದಂತೆ, ನದಿ ತೀರದಲ್ಲಿ ಶವಸುಡುವ, ಸ್ಮಶಾನ ತ್ಯಾಜ್ಯ ಎಸೆಯದಂತೆ, ಗಣೇಶ ಮೂರ್ತಿ ಸೇರಿದಂತೆ ಧಾರ್ಮಿಕ ಮಾಲಿನ್ಯವನ್ನು ನದಿಗೆ ಎಸೆಯುವುದನ್ನು ತಡೆಯಲು ಜನಜಾಗೃತಿ ಮೂಡಿಸಿದೆ. 75 ಕಿ.ಮೀ. ದ್ದ ಹರಿಯುವ ಪಂಚಗಂಗಾನದಿ ತೀರದಲ್ಲಿರುವ ಸುಮಾರು 20 ಹಳ್ಳಿಗಳಲ್ಲಿ ಪ್ರತಿ ಊರಲ್ಲೂ ಕನಿಷ್ಟ 20 ಜಲ ಕಾರ್ಯಕರ್ತರ ತಂಡ ಕಟ್ಟಿದ್ದಾರೆ. ಅಲ್ಲದೇ ನದಿಗಳಲ್ಲಿ ತುಂಬಿಕೊಂಡಿರುವ ತ್ಯಾಜ್ಯ ಮುಕ್ತಿಗೂ ಶ್ರಮದಾನ ಮಾಡಿ, ಜಲ ಸಾಕ್ಷರತೆ ಕಾರ್ಯ ಮಾಡುತ್ತಿದ್ದಾರೆ. ಇದರ ಪರಿಣಾಮ ನದಿಗಳಿಗೆ ಯಾವುದೇ ಧಾರ್ಮಿಕ ತ್ಯಾಜ್ಯವಿದ್ದರೂ ಹಿಡಿಯಷ್ಟನ್ನು ಮಾತ್ರ ಸಾಂಕೇತಿಕವಾಗಿ ನದಿಗೆ ಎಸೆದು ಪರಂಪರೆ ರಕ್ಷಣೆ ಜೊತೆಗೆ ನದಿಯ ರಕ್ಷಣೆ ಮಾಡುತ್ತಿದ್ದಾರೆ. ಹಳ್ಳಿಗರು ಈ ವಿಷಯದಲ್ಲಿ ಬಹುತೇಕ ಜಾಗೃತರಾಗಿದ್ದರೂ, ಕೊಲ್ಲಾಪುರ, ಇಚಲಕರಂಜಿ, ಶಿರೋಡ ಸೇರಿದಂತೆ ಪಟ್ಟಣಗಳ ಜನರು ಮಾತ್ರ ಚರಂಡಿ, ಕೈಗಾರಿಕೆ ತ್ಯಾಜ್ಯವನ್ನೆಲ್ಲ ಪಂಚಗಂಗೆಯ ಒಡಲಿಗೆ ಸುರಿಯುವುದನ್ನು ನಿಲ್ಲಿಸಿಲ್ಲ. ಈ ಕುರಿತು ಶೀಘ್ರವೇ ದೊಡ್ಡಮಟ್ಟದ ಅಭಿಯಾನ ಹಮ್ಮಿಕೊಂಡು ಆಡಳಿತ ವ್ಯವಸ್ಥೆಗೆ
ಚುರುಕು ಮುಟ್ಟಿಸುವ ಗುರಿ ಹಾಕಿಕೊಂಡಿದ್ದಾರೆ. ಪಂಚಗಂಗೆ ಪುನರುಜ್ಜೀವನಕ್ಕೆ ಮುಂದಾಗಿರುವ ಈ ತಂಡ ಕೊಲ್ಲಾಪುರದ
ಬಾಬಾಸಾಹೇಬ ನದಾಫ್‌, ಸಾಂಗ್ಲಿಯ ಸದಾಶಿವ ಮುಗದುಮ, ಭೀಡ ಜಿಲ್ಲೆಯ  ಶ್ರೀಮಂತ ರಾಷ್ಟ್ರಪಾಲ ಅವರ ತಂಡ ವಿಜಯಪುರ ನಗರದಲ್ಲಿ ನಡೆಯುತ್ತಿರುವ ಜಲಜಾಗೃತಿ ಸಮಾವೇಶದಲ್ಲಿ ಜನರಿಗೆ ಎಲ್ಲ ನದಿ ಸಂರಕ್ಷಣೆ ಕುರಿತು ಮನವಿ ಮಾಡಿಕೊಂಡು ಜಾಗೃತಿ ನಡೆಸಿದೆ. ಮತ್ತೂಂದೆಡೆ ಸೀಮಾಂಧ್ರದಿಂದ ಬಂದಿರುವ ರೈತರು ಕರ್ನಾಟಕದಲ್ಲಿ ನಡೆಯುತ್ತಿರುವ ಜಲ ಸಂರಕ್ಷಣೆ ಕಾರ್ಯಕ್ರಮಗಳ ಕುರಿತು ಮುಕ್ತ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಲದ್ದಕ್ಕೆ ತಮ್ಮ ರಾಜ್ಯದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕರ್ನಾಟಕದ ರಾಜ್ಯದಿಂದ ಪಾಠ ಕಲಿಯುವಂತೆ ಕುಟುಕಿದ್ದಾರೆ. ಕೃಷ್ಣಾ ನದಿಯ ಉಗಮದಿಂದ ಸಮುದ್ರಕ್ಕೆ ಸೇರುವ ಕೊನೆಯ ಹಂತದವರೆಗಿನ ಇಡೀ ನದಿ ಪಾತ್ರದ ಜನರು ಒಂದೆಡೆ ಸೇರಿ ಕೃಷ್ಣೆಯ ಮಾಲಿನ್ಯ ತಡೆಗೆ ಚರ್ಚೆ ನಡೆಸುತ್ತಿರುವ ಕ್ರಮ ನಿಜಕ್ಕೂ ಅನುಕರಣೀಯ. ಕೃಷ್ಣಾ ನದಿಯ ತನ್ನ ಪಾಲಿನ ನೀರಿನ ಬಳಕೆಗಾಗಿ ಕರ್ನಾಟಕ ನಡೆಸಿರುವ ಯುದ್ಧೋಪಾದಿಯ ನಡೆ ಅಚ್ಚರಿ ಮೂಡಿಸುತ್ತಿವೆ ಎಂದು ಸೀಮಾಂಧ್ರದ ವಿಜಯವಾಡ ಜಿಲ್ಲೆಯ ನಿಡುಮರಿ ಗ್ರಾಮದ ಉಯ್ನಾರ ಶಿವಾರಡ್ಡಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಇದೇ ನದಿಪಾತ್ರದ ನೀರಿನ ಪಾಲು ಹೊಂದಿರುವ ಸೀಮಾಂಧ್ರದಲ್ಲಿ ಮಾತ್ರ ನೀರಾವರಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ನಮ್ಮ ಸರ್ಕಾರ ಏನನ್ನೂ ಮಾಡುತ್ತಿಲ್ಲ. ಕೇವಲ ಆಕರ್ಷಕ ಮಾತನಾಡುತ್ತಿರುವ ಚಂದ್ರಬಾಬು ನಾಯ್ಡು ಕರ್ನಾಟಕದ ಸರ್ಕಾರದ ಕ್ರಮದಿಂದ ಪಾಠ ಕಲಿಯಬೇಕಿದೆ. ವಿಜಯಪುರ ಜಿಲ್ಲೆಯಲ್ಲೂ ನಡೆದಿರುವ ಜಲ ಮೂಲಗಳ ಪುನಶ್ಚೇತನ ಕಾರ್ಯ ಅನುಕರಣೀಯ ಎಂದು ವಿಜಯವಾಡದ ಜಂಗಾ ನಾಗಿರಡ್ಡಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಕರ್ನಾಟಕದಲ್ಲಿ ಕೃಷ್ಣಾ ನದಿಯಿಂದ ಕೆರೆಗೆ ನೀರು ತುಂಬಲು ರೂಪಿಸಿರುವ ಯೋಜನೆ ದೇಶಕ್ಕೆ ಮಾದರಿ. ಕೃಷ್ಣಾ ನದಿಗೆ ರೂಪಿಸಿರುವ ನಿಡುಮರು ಏತನೀರಾವರಿ ಯೋಜನೆ ನಿರ್ವಹಣೆಯಲ್ಲಿ ನಮ್ಮ ಸರ್ಕಾರ ಎಡವುತ್ತಿರುವ ಕಾರಣ ಸಮಸ್ಯೆಯಾಗುತ್ತಿದೆ ಎಂದು ಅನಂತವಾಡ ಗ್ರಾಮದ ಪೋಲ ರಮೇಶ ಹೇಳುತ್ತಾರೆ.

ಜಿ.ಎಸ್‌.ಕಮತರ

ಟಾಪ್ ನ್ಯೂಸ್

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

SSLC ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿಗೆ ಎದೆನೋವು… ಆಸ್ಪತ್ರೆಗೆ ದಾಖಲು

SSLC ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿಗೆ ಎದೆನೋವು… ಆಸ್ಪತ್ರೆಗೆ ದಾಖಲು

9-muddebihala

Muddebihal: ಆಕಸ್ಮಿಕ ಬೆಂಕಿ: 2 ಲಕ್ಷ ಮೌಲ್ಯದ ಗುಜರಿ ಸಾಮಗ್ರಿ ಬೆಂಕಿಗಾಹುತಿ

1-wqweqewq

BJP; ಜಿಗಜಿಣಗಿ ಹಠಾವೋ, ಬಿಜೆಪಿ ಬಚಾವೋ ಘೋಷಣೆ, ಪ್ರತಿಭಟನೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.