ಹಠ ಬಿಟ್ಟು ಪೀಟರ್‌ ಅಲೆಗ್ಸಾಂಡರ್‌ ಕೇಶಮುಂಡನ


Team Udayavani, Aug 19, 2017, 3:03 PM IST

vijayapur 1.jpg

ವಿಜಯಪುರ: ಜಿಲ್ಲೆಯ ರಾಮಲಿಂಗ ಕೆರೆ ಸಂರಕ್ಷಣೆಗಾಗಿ ಕಳೆದ ಒಂದು ದಶಕದಿಂದ ಕೂದಲು ಕತ್ತರಿಸದೇ ಪ್ರತಿಜ್ಞೆ ಮಾಡಿ
ಸಾಧನೆಗಾಗಿ ಹಠ ಹಿಡಿದಿದ್ದ ಪೀಟರ್‌ ಅಲೆಗ್ಸಾಂಡರ್‌ ಎಂಬ ಹೋರಾಟಗರ ಕೊನೆಗೂ ಶುಕ್ರವಾರ ಕೇಶಮುಂಡನ
ಮಾಡಿಸಿಕೊಂಡಿದ್ದಾರೆ. ನಗರದಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಜಲ ಸಮಾವೇಶದ ಸಂದರ್ಭದಲ್ಲಿ ರಾಷ್ಟ್ರೀಯ ಜಲಗಾಂಧಿ ಎಂದೇ ಖ್ಯಾತರಾಗಿರುವ ಡಾ|ರಾಜೇಂದ್ರಸಿಂಗ್‌ ಅವರು ಸದರಿ ಸಮಾವೇಶದಲ್ಲಿ ರಾಮಲಿಂಗ ಮಾತ್ರವಲ್ಲ, ಜೀವ ಕಳೆದುಕೊಂಡಿರುವ ಎಲ್ಲ ನದಿ-ಕೆರೆಗಳ ಪುನರುಜ್ಜೀವನಕ್ಕೆ ನಿರ್ಣಯ ಅಂಗೀಕರಿಸುತ್ತೇವೆ. ನಿಮ್ಮ ಆಶಯದಂತೆ ರಾಜ್ಯದ ಜಲಸಂಪನ್ಮೂಲ ಸಚಿವರಾದ
ಡಾ| ಎಂ.ಬಿ. ಪಾಟೀಲ ಅವರಿಂದ ನಿಮ್ಮ ಕನಸಿನ ಕೆರೆಗೆ ಮರು ಜೀವ ಕೊಡಿಸುವ ಹೊಣೆ ಹೊರುತ್ತೇವೆ ಎಂದು ಭರವಸೆ ನೀಡಿದರು. ಎಲ್ಲಕ್ಕಿಂತ ಹೆಚ್ಚಾಗಿ ವರೆಗೆ ಒಂಟಿಯಾಗಿದ್ದ ನಿಮ್ಮೊಂದಿಗೆ ನಾವೂ ಕೈ ಜೋಡಿಸುತ್ತೇವೆ. ದೇಶದ ಜಲ ಸಂರಕ್ಷಕ ಹೋರಾಟಗಾರರೆಲ್ಲ ನಿಮ್ಮೊಂದಿಗೆ ಇದ್ದೇವೆ. ಹೀಗಾಗಿ ಈ ಜಲ ಸಮಾವೇಶ ಸಂದರ್ಭದಲ್ಲಿ ನಿಮ್ಮ ಬೇಡಿಕೆ ಈಡೇರಿಸುವ ಭರವಸೆ ದೊರೆಯುವ ಕಾರಣ ಪ್ರತಿಜ್ಞೆ ಕೈಬಿಟ್ಟು, ಕೇಶ ಮುಂಡನ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದರು. ಇದಲ್ಲದೇ ಜಲ ಬಿರಾದರಿ ಸಮಿತಿಯ ಜಿಲ್ಲಾ ಘಟಕದ ಸಂಚಾಲಕರು ನೀವೇ ಆಗಿರುವ ಕಾರಣ ರಾಮಲಿಂಗ ಕೆರೆ ಸಂರಕ್ಷಣೆ ವಿಷಯದಲ್ಲಿ ನಿಮ್ಮೊಂದಿಗೆ ದೇಶದ ಜನವೇ ಬೆನ್ನೆಲುಬಾಗಿ ನಿಲ್ಲುತ್ತದೆ ಎಂದು ಮನವೊಲಿಸಿದರು. ಅಂತಿಮವಾಗಿ ರಾಷ್ಟ್ರೀಯ ಜಲ ಸಮಾವೇಶದ ಸಮಾರೋಪ ನಡೆಯುವ ಶುಕ್ರವಾರ ಬೆಳಗ್ಗೆ ದಶಕದಿಂದ ಬೆಳೆಸಿದ್ದ ಕೇಶಕ್ಕೆ ಕತ್ತರಿ ಹಾಕಿಸಿದ್ದಾರೆ. ಕಳೆದ ಒಂದು ದಶಕದಿಂದ ರಾಮಲಿಂಗ ಕೆರೆ ಸಂರಕ್ಷಣೆಗಾಗಿ ಕೇಶ ಮುಂಡನ
ಮಾಡಿಸದೇ, ಬಗಲಲ್ಲಿ ಬಿಳಿಯ ಬಟ್ಟೆಯ ಜೋಳಿಗೆ, ತಲೆಗೆ ಪೇಟ ಸುತ್ತಿಕೊಂಡು ಜಲ ಸಂತನಂತೆ ಸುತ್ತಿದ್ದ ಪೀಟರ್‌ ಅಲೆಗ್ಸಾಂಡರ್‌, ರಾಮಲಿಂಗ ಕರೆಯ ಪ್ರದೇಶದಲ್ಲೇ ಕೇಶ ಮುಂಡನಕ್ಕೆ ನಿರ್ಧರಿಸಿದರು. ಸ್ಥಳಕ್ಕೆ ತೆರಳಿದ ಡಾ| ರಾಜೇಂದ್ರಸಿಂಗ್‌ ಹಾಗೂ ಜಲ ಬಿರಾದರಿ ಸಂಘಟನೆ ಕಾರ್ಯಕರ್ತರು ಪೀಠರ್‌ ಅವರ ಕೈಗೆ ದೇಶದ 101 ನದಿಗಳ ಜಲತುಂಬಿದ್ದ ಬಿಂದಿಗೆ ನೀಡಿ, ಪ್ರತಿಜ್ಞೆ ಕೈ ಬಿಡಿಸಿ, ಕೇಶಮುಂಡನ ಮಾಡಿಸಿದರು. ಕೇಶ ಮುಂಡನದ ಬಳಿಕ ಜಲ ಜೋಳಿಗೆಯನ್ನೂ ಕಳಚಿ, ಶೂಟುಬೂಟು ತೊಟ್ಟ ಪೀಟರ್‌ ಅವರು ತಲೆಗೆ ತೊಡುತ್ತಿದ್ದ ಬಿಳಿ ವಸ್ತ್ರದ ಪೇಟವನ್ನು ಮಾತ್ರ ಕಳಚಲು ನಿರಾಕರಿಸಿದರು. ಕೇಶಮುಂಡನದ ಬಳಿಕ ಸಮಾರೋಪ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ರಾಮಲಿಂಗ ಕೆರೆ ಸಂರಕ್ಷಣೆಗೆ ಮನವಿ ಮಾಡಿದರು. ಸಮಾವೇಶದಲ್ಲಿ ಕೈಗೊಂಡಿರುವ
ನಿರ್ಣಯದಂತೆ ರಾಮಲಿಂಗ ಕೆರೆಯ ಸಂರಕ್ಷಣೆಗೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ| ಎಂ.ಬಿ.
ಪಾಟೀಲ ಕೂಡ ಭರವಸೆ ನೀಡಿದ್ದಾರೆ ಎಂದು ಪೀಟರ್‌ ಹೇಳಿದರು.

ಟಾಪ್ ನ್ಯೂಸ್

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

SSLC ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿಗೆ ಎದೆನೋವು… ಆಸ್ಪತ್ರೆಗೆ ದಾಖಲು

SSLC ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿಗೆ ಎದೆನೋವು… ಆಸ್ಪತ್ರೆಗೆ ದಾಖಲು

9-muddebihala

Muddebihal: ಆಕಸ್ಮಿಕ ಬೆಂಕಿ: 2 ಲಕ್ಷ ಮೌಲ್ಯದ ಗುಜರಿ ಸಾಮಗ್ರಿ ಬೆಂಕಿಗಾಹುತಿ

1-wqweqewq

BJP; ಜಿಗಜಿಣಗಿ ಹಠಾವೋ, ಬಿಜೆಪಿ ಬಚಾವೋ ಘೋಷಣೆ, ಪ್ರತಿಭಟನೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.