ಜಮೀನು ಕೊಟ್ಟ ರೈತನಿಗೆ ರೈಲನ್ನೇ ನೀಡಿದ ಕೋರ್ಟ್
Team Udayavani, Mar 19, 2017, 6:03 AM IST
ಉತ್ತರ ವಿಭಾಗೀಯ ರೈಲ್ವೆ ತನ್ನ ಜಮೀನನ್ನು ವಶಪಡಿಸಿಕೊಂಡು ಸೂಕ್ತ ಪರಿಹಾರ ನೀಡಿಲ್ಲ ಎಂದು ಕೋರ್ಟ್ ಮೆಟ್ಟಿಲೇರಿದ್ದ ಪಂಜಾಬ್ನ ಲೂಧಿಯಾನದ ರೈತನಿಗೆ ಕೋರ್ಟು ರೈಲನ್ನೇ ನೀಡಿದೆ! ಆಶ್ವರ್ಯ ಎನಿಸಿದರೂ ನೀವಿದನ್ನು ನಂಬಲೇಬೇಕು. ಈ ಅಮೋಘ ತೀರ್ಪು ನೀಡಿರುವುದು ಇಲ್ಲಿಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಧೀಶರು. ಕೋರ್ಟ್ ಆದೇಶದಂತೆ ರೈಲ್ವೆ ಇಲಾಖೆ, ರೈತ ಸಂಪುರಣ್ ಸಿಂಗ್ಗೆ 2015ರಲ್ಲಿ 1.05 ಕೋಟಿ ರೂ. ಪರಿಹಾರ ನೀಡಬೇಕಿತ್ತು.
ಆದರೆ ಈವರೆಗೂ ನೀಡಿಲ್ಲ. ಇದನ್ನು ಪ್ರಶ್ನಿಸಿ ಅವರು ಕೋರ್ಟ್ ಮೆಟ್ಟಿಲೇರಿದ್ದರು. ತೀರ್ಪು ನೀಡಿರುವ ಕೋರ್ಟು, ದೆಹಲಿ ಮತ್ತು ಅಮೃತಸರದ ನಡುವೆ ಓಡಾಡುವ ರೈಲು ಸಂಖ್ಯೆ 12030ಯನ್ನು ರೈತನಿಗೇ ನೀಡುವಂತೆ ಆದೇಶಿಸಿದೆ. ದೂರುದಾರ ರೈತ ಸಂಪುರಣ್ ಮತ್ತು ಅವರ ಪರ ವಕೀಲರು ಕೋರ್ಟ್ ಆದೇಶವನ್ನು ರೈಲಿನ ಚಾಲಕ ಮತ್ತು ವಿಭಾಗೀಯ ಇಂಜಿನಿಯರ್ಗೆ ನೀಡಿ ರೈಲನ್ನು ವಶಪಡಿಸಿಕೊಂಡರು. 5 ನಿಮಿಷಗಳ ಬಳಿಕ ರೈಲು ಬಿಟ್ಟುಕೊಟ್ಟರು.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ