ಪರಾರಿಯಾದ 25 ವರ್ಷಗಳ ಬಳಿಕ ಜೈಲಿಗೆ ವಾಪಸ್ಸಾದ!
Team Udayavani, Jul 21, 2017, 3:56 AM IST
ಜೈಲಿನಿಂದ ಪರಾರಿಯಾದ ಕೈದಿಗಳು ನಿಯತ್ತಿನಿಂದ ಜೈಲಿಗೆ ವಾಪಸ್ಸಾದ ಕಥೆಯನ್ನು ನೀವು ಎಲ್ಲಿಯಾದರೂ ಕೇಳಿದ್ದೀರಾ? ಕೇರಳದ ಕೇಂದ್ರೀಯ ಬಂದೀಖಾನೆಯಲ್ಲಿ ಕೊಲೆ ಮೊಕದ್ದಮೆಯಲ್ಲಿ ಬಂಧಿತನಾಗಿದ್ದ ಕೈದಿಯೊಬ್ಬ ಮರಳಿ ಜೈಲಿಗೆ ಬಂದಿರುವ ಪ್ರಕರಣವೊಂದು ನಡೆದಿದೆ. ಅದೂ ಜೈಲಿನಿಂದ ತಪ್ಪಿಸಿಕೊಂಡು 25 ವರ್ಷಗಳಾದ ಬಳಿಕ! ಕೊಚ್ಚಿಯ ಮತ್ತಂಚೆರಿಯ ನಿವಾಸಿ ನಜರ್ (55) 1991ರ ಏಪ್ರಿಲ್ನಲ್ಲಿ ಕೊಲೆ ಮತ್ತು ಇರತ ನಾಲ್ಕು ಮೊಕದ್ದಮೆಗಳ ಸಂಬಂಧ ಜೈಲು ಶಿಕ್ಷೆಗೊಳಗಾಗಿದ್ದ.
1992ರ ಡಿಸೆಂಬರ್ನಲ್ಲಿ ತಿಂಗಳ ಪರೋಲ್ ಮೇಲೆ ಹೊರಬಂದಿದ್ದ. ಆಗ ತಪ್ಪಿಸಿಕೊಂಡು ಪರಾರಿಯಾಗಿದ್ದ. ಆತ ಗಲ್ಫ್ ದೇಶಕ್ಕೆ ಹೋಗಿದ್ದಾನೆ ಎಂದು ನಂಬಲಾಗಿತ್ತು. ಆದರೆ ಸುಮಾರು 25 ವರ್ಷಗಳ ಬಳಿಕ ಮತ್ತೆ ಜೈಲಿ ನಲ್ಲಿ ಪ್ರತ್ಯಕ್ಷನಾಗಿದ್ದಾನೆ. ಹಾಗೆಂದ ಮಾತ್ರಕ್ಕೆ ಆತನ ಪ್ರಾಮಾಣಿಕತೆ ಬಗ್ಗೆ ಯಾರೂ ಮೆಚ್ಚುಗೆ ಸೂಚಿಸುವಂತಿಲ್ಲ. ಆತ ಕ್ಯಾನ್ಸರ್ನಿಂದ ಬಳಲುತ್ತಿದ್ದಾನೆ. ಇದರಿಂದ ಮನೆಯವರಿಗೆ ಹೊರೆಯಾಗುತ್ತಿದೆ ಎಂಬ ಕಾರಣಕ್ಕೆ ಜೈಲಿಗೆ ಮರಳಿದ್ದಾನೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ
Shobha, Bharathi Shetty ಹೊರತು ಬಿಎಸ್ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ
Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್ ಈಗ “ಸಂಯುಕ್ತ’
High Court ಎಚ್ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್ಗೆ ಹೈಕೋರ್ಟ್ ತಡೆ
Kanakagiri ದೇಗುಲಕ್ಕೆ ಬಂದಿದ್ದ ಕರಡಿ ಸೆರೆ ಹಿಡಿಯುವಾಗ ದಾಳಿ: ವೃದ್ಧ ಸಾವು