ಮಾಸ್ ಲೀಡರ್ ಜೊತೆ ಮಾಂಡ್ರೆ ಸ್ಟೆಪ್ಪು
Team Udayavani, Jun 4, 2017, 4:25 PM IST
ಶಿವರಾಜ್ಕುಮಾರ್ ಅಭಿನಯದ “ಮಾಸ್ ಲೀಡರ್’ ಚಿತ್ರದಲ್ಲಿ ಶರ್ಮಿಳಾ ಮಾಂಡ್ರೆ ನಟಿಸುತ್ತಿದ್ದಾರೆ ಎಂಬ ಸುದ್ದಿ ಈ ಹಿಂದೆ ಇದೇ ಬಾಲ್ಕನಿಯಲ್ಲಿ ಹೇಳಲಾಗಿತ್ತು. ಆ ಚಿತ್ರದಲ್ಲಿ ಅವರು ಪತ್ರಕರ್ತೆಯಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ವಿಷಯವನ್ನೂ ಪ್ರಸ್ತಾಪಿಸಲಾಗಿತ್ತು. ಈಗ ಹೊಸ ವಿಷಯ ಏನಪ್ಪಾ ಅಂದ್ರೆ, ಶರ್ಮಿಳಾ ಮಾಂಡ್ರೆ ಚಿತ್ರದ ಹಾಡೊಂದರಲ್ಲಿ ತನ್ನ ಸೊಂಟ ಬಳುಕಿಸಿದ್ದಾರೆ. ಹೌದು, ಅದನ್ನು ಸ್ಪೆಷಲ್ ಸಾಂಗ್ ಅಂತ ಕರೆದರೆ ಅಡ್ಡಿಯಿಲ್ಲ. ಶರ್ಮಿಳಾ ಇಲ್ಲಿ ಪತ್ರಕರ್ತೆಯಾಗಿ ನಟಿಸುತ್ತಿರುವುದರಿಂದ ಒಬ್ಬ ಕಿಂಗ್ಪಿನ್ಗಾಗಿ ಹುಡುಕಾಟ ನಡೆಯುವ ಸನ್ನಿವೇಶದಲ್ಲಿ, ಅವರನ್ನು ಹಿಡಿದು ಕೊಡುವ ಪಾತ್ರವನ್ನು ಮಾಂಡ್ರೆ ನಿರ್ವಹಿಸಿದ್ದಾರೆ. ಒಂದು ಅಡ್ಡದಲ್ಲಿ ಆ ದೊಡ್ಡ ಕಿಂಗ್ಪಿನ್ ಹಿಡಿಯುವ ವೇಳೆ ಹಾಡೊಂದು ಮೂಡಿಬರುತ್ತೆ. ಆ ಹಾಡಿಗೆ ಶರ್ಮಿಳಾ ಸೊಂಟ ಬಳುಕಿಸಿದ್ದಾರೆ.
ಅಂದಹಾಗೆ, ಮಾಂಡ್ರೆ ಇಲ್ಲಿ ಬೆಲ್ಲಿ ಡ್ಯಾನ್ಸ್ ಮಾಡಿದ್ದಾರೆ ಎಂಬುದು ಇನ್ನೊಂದು ವಿಶೇಷ. ಈ ಹಾಡಿಗೆ ಮಾಂಡ್ರೆ ಸೊಂಟ ಬಳುಕಿಸಲು ಒಂದಷ್ಟು ತರಬೇತಿಯನ್ನೂ ಪಡೆದಿದ್ದಾರಂತೆ. ಶರ್ಮಿಳಾ ಜತೆಗೆ ಇಲ್ಲಿ ಬೆಲ್ಲಿ ಡ್ಯಾನ್ಸ್ನಲ್ಲಿ ನುರಿತ ಒಂದಷ್ಟು ರಷ್ಯನ್ ಡ್ಯಾನ್ಸರ್ ಕೂಡ ಸ್ಟೆಪ್ ಹಾಕಿದ್ದಾರಂತೆ. ಈ ಹಾಡಲ್ಲಿ ಶಿವರಾಜ್ಕುಮಾರ್, ವಿಜಯರಾಘವೇಂದ್ರ, ಯೋಗಿ, ಗುರು ಜಗ್ಗೇಶ್ ಕೂಡ ಕಾಣಿಸಿಕೊಂಡಿದ್ದಾರೆ. ಇನ್ನೊಂದು ಪ್ರಮುಖ ವಿಷಯವೆಂದರೆ, ಸಂಗೀತ ನಿರ್ದೇಶಕ ವೀರ್ಸಮರ್ಥ್ ಕೂಡ ಈ ಹಾಡಲ್ಲಿ ವಿಶೇಷ ಪಾತ್ರ ನಿರ್ವಹಿಸಿದ್ದಾರಂತೆ. “ಆಭಿದಾ ಆಭಿದಾ ಏ ಮೇರಾ ನಾಮ್ ಹೇ…’ ಎಂದು ಶುರುವಾಗುವ ಈ ಹಾಡನ್ನು ನಾಗೇಂದ್ರ ಪ್ರಸಾದ್ ಬರೆದಿದ್ದಾರೆ. ವೀರ್ಸಮರ್ಥ್ ಸಂಯೋಜಿಸಿದ್ದಾರೆ. ರಾಮನಗರದ ಶಿಲಾಂದ್ರ ಎಂಬ ರೆಸಾರ್ಟ್ನಲ್ಲಿ ಕಲಾನಿರ್ದೇಶಕ ಮೋಹನ್ ಹಾಕಿದ ಸೆಟ್ನಲ್ಲಿ ಗುರುಪ್ರಶಾಂತ್ ರೈ ಕ್ಯಾಮೆರಾ ಹಿಡಿದಿದ್ದಾರೆ.
ಮೋಹನ್ ನೃತ್ಯ ಸಂಯೋಜಿಸಿದ್ದಾರೆ. ಈ ಹಾಡನ್ನು ದೋಹದಲ್ಲಿ ಚಿತ್ರೀಕರಿಸುವ ಯೋಚನೆ ನಿರ್ಮಾಪಕ ತರುಣ್ ಶಿವಪ್ಪ ಅವರಿಗಿತ್ತು. ಆದರೆ, ನಿರ್ದೇಶಕ ಸಹನಾಮೂರ್ತಿ ಅವರು ಅದೇ ರೀತಿಯ ಸೆಟ್ ಇಲ್ಲಿ ಹಾಕಿಸಿ ಚಿತ್ರೀಕರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ʼಖಲ್ನಾಯಕ್ʼ ಸಿನಿಮಾದ ಪ್ರಧಾನ ಪಾತ್ರದ ರೇಸ್ನಲ್ಲಿ ಬಿಟೌನ್ ಸ್ಟಾರ್ಸ್ ಜೊತೆ ಯಶ್, ಅಲ್ಲು?
Malaika Arora: ಮಲೈಕಾಗೆ ಎರಡನೇ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ ಮಗ; ಶಾಕ್ ಆದ ಮುನ್ನಿ
Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್
Salman Khan: ನಟ ಸಲ್ಮಾನ್ ಖಾನ್ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ
ಪೊಲೀಸ್ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್ ಸ್ಟರ್ ಆದದ್ದೇಗೆ?
MUST WATCH
ಹೊಸ ಸೇರ್ಪಡೆ
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
Kasaragod ವಿವಿಪ್ಯಾಟ್ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ
ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವ್ಯಂಗ್ಯ
ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ