ಐಶ್ವರ್ಯಾ ಮೇಲೂ ಕಣ್ಣು ಹಾಕಿದ್ದ ಹಾರ್ವೆ
Team Udayavani, Oct 14, 2017, 11:24 AM IST
ನ್ಯೂಯಾರ್ಕ್: ಹಾಲಿವುಡ್ನ ಘಟಾನುಘಟಿ ಮಂದಿಯನ್ನು ಬೆಚ್ಚಿಬೀಳಿಸುವ ಲೈಂಗಿಕ ಹಗರಣಗಳು ಬಯಲಾಗುತ್ತಿದ್ದು, ಅಲ್ಲಿನ 30ಕ್ಕೂ ಹೆಚ್ಚು ನಟಿಯರು ತಮಗಾದ ಲೈಂಗಿಕ ಕಿರುಕುಳ ಅನುಭವವನ್ನು ಬಿಚ್ಚಿಡುತ್ತಿದ್ದಾರೆ.
ಹಾಲಿವುಡ್ ಖ್ಯಾತ ನಿರ್ಮಾಪಕ ಹಾರ್ವೆ ವೇಯ್ನ್ ಸ್ಟೇಯ್ನ ವಿರುದ್ಧ ಪ್ರಸಿದ್ಧ ನಟಿ ಏಂಜಲೀನಾ ಜ್ಯೂಲಿ, ಗ್ವೆಯಿ°ತ್ ಪೆತ್ರೋ ಸೇರಿದಂತೆ ಹಲವಾರು ಮಂದಿ ದನಿ ಎತ್ತಿದ್ದು, ಇದನ್ನು ಜೆನ್ನಿಫರ್ ಲಾರೆನ್ಸ್, ಮೆರ್ಲ್ ಸ್ಟ್ರೀಪ್, ಕೇಟ್ ವಿನ್ಸೆಟ್ನಂತ ನಟಿಯರು ಬೆಂಬಲಿಸುತ್ತಿದ್ದಾರೆ.
ಇದೆಲ್ಲದಕ್ಕಿಂತ ಆಘಾತಕಾರಿ ವಿಚಾರವೆಂದರೆ, ಭಾರತದ ಖ್ಯಾತ ನಟಿ ಐಶ್ವರ್ಯಾ ರೈ ಮೇಲೂ ಹಾರ್ವೆ ಕಣ್ಣು ಹಾಕಿದ್ದ ಎಂಬುದು ಬಯಲಾಗಿದೆ. ಐಶ್ವರ್ಯಾ ರೈ ಅವರು ಕೆಲಸ ಮಾಡುತ್ತಿದ್ದ ಟ್ಯಾಲೆಂಟ್ ಕಂಪನಿಯ ಮ್ಯಾನೇಜರ್ ಸಿಮೋನ್ ಶೆಪಿಲ್ಡ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಹಾಲಿವುಡ್ ಸಿನಿಮಾವೊಂದರ ಬಗ್ಗೆ ಮಾತನಾಡುವ ಸಲುವಾಗಿ ತಾನು ಮತ್ತು ಐಶ್ವರ್ಯಾ ಹಾರ್ವೆ ಕಚೇರಿಗೆ ಹೋಗಿದ್ದೆವು. ಆತ ಹಲವಾರು ಬಾರಿ ನನಗೆ ಆಚೆ ಹೋಗುವಂತೆ ಹೇಳಿದ. ನಾನು ಒಪ್ಪದೇ ಅಲ್ಲೇ ನಿಂತುಕೊಂಡೆ. ಕಡೆಗೆ ನಾವು ಹೊರಟಾಗ ತಡೆದು, ಐಶ್ವರ್ಯಾರನ್ನು ಏಕೆ “ಒಬ್ಬಂಟಿ’ಯಾಗಿ ನನ್ನ ಬಳಿ ಬಿಡಲಿಲ್ಲ ಎಂದು ಕೇಳಿದ ಎಂದು ಹೇಳಿದ್ದಾರೆ.
ಆತ ಕೆಟ್ಟದಾಗಿ ಬಳಸಿಕೊಳ್ಳುತ್ತಾನೆ ಎಂಬ ಕಾರಣದಿಂದಲೇ ನಾನು ನನ್ನ ಕ್ಲೈಂಟ್ ಆದ ಐಶ್ವರ್ಯಾ ಅವರನ್ನು ಆತನ ಬಳಿಗೆ ಮತ್ತೂಮ್ಮೆ ಹೋಗಲು ಬಿಡಲೇ ಇಲ್ಲ. ಆತನ ಯಾವುದೇ ಸಿನಿಮಾವನ್ನೂ ಒಪ್ಪಿಕೊಳ್ಳಲಿಲ್ಲ ಎಂದಿದ್ದಾರೆ.
ಇದಷ್ಟೇ ಅಲ್ಲ, ನ್ಯೂಯಾರ್ಕ್ ಟೈಮ್ಸ್ಗೆ ನಟಿ ಗ್ವೆಯಿ°ತ್ ಪೆತ್ರೋ ತಮ್ಮನ್ನು ಹೇಗೆ ಹಾರ್ವೆ ಲೈಂಗಿಕವಾಗಿ ಬಳಸಿಕೊಳ್ಳಲು ನೋಡಿದ್ದ ಎಂಬ ಬಗ್ಗೆ ವಿವರಿಸಿ ದ್ದಾರೆ. ಆತನ ಎಮ್ಮಾ ಸಿನಿಮಾಗೆ ಅವಕಾಶ ನೀಡುವ ಸಲುವಾಗಿ ಹಾರ್ವೆ ತನ್ನನ್ನು ಹೋಟೆಲ್ಗೆ ಕರೆಸಿಕೊಂಡಿದ್ದ.
ಕೆಟ್ಟದಾಗಿ ಮುಟ್ಟಿ, ನೀನೇಕೆ ನನ್ನ ಬೆಡ್ ರೂಂಗೆ ಬಂದು ಮಸಾಜ್ ಮಾಡಬಾರದು ಎಂದು ಕೇಳಿದ್ದ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ʼಖಲ್ನಾಯಕ್ʼ ಸಿನಿಮಾದ ಪ್ರಧಾನ ಪಾತ್ರದ ರೇಸ್ನಲ್ಲಿ ಬಿಟೌನ್ ಸ್ಟಾರ್ಸ್ ಜೊತೆ ಯಶ್, ಅಲ್ಲು?
Malaika Arora: ಮಲೈಕಾಗೆ ಎರಡನೇ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ ಮಗ; ಶಾಕ್ ಆದ ಮುನ್ನಿ
Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್
Salman Khan: ನಟ ಸಲ್ಮಾನ್ ಖಾನ್ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ
ಪೊಲೀಸ್ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್ ಸ್ಟರ್ ಆದದ್ದೇಗೆ?
MUST WATCH
ಹೊಸ ಸೇರ್ಪಡೆ
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ