ಬಿಐಇಟಿಯಲ್ಲಿ ಇನ್ಹೌಸ್ ಮಾದರಿ ಪ್ರದರ್ಶನ
Team Udayavani, Jun 23, 2017, 1:15 PM IST
ದಾವಣಗೆರೆ: ಮುಂದಿನ ಪರಿಸರ ಸ್ನೇಹಿ ತಂತ್ರಜ್ಞಾನ ಯಾವ ರೀತಿ ಇರಬಲ್ಲದು ಎಂಬುದರ ಪ್ರಾತ್ಯಕ್ಷಿಕೆಯನ್ನು ನೋಡುಗರ ಮುಂದಿಡಲು ಗುರುವಾರ ಬಿಐಇಟಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಇನ್ಹೌಸ್ ತಾಂತ್ರಿಕ ಮಾದರಿಗಳ ಪ್ರದರ್ಶನ ಯಶಸ್ವಿಯಾಯಿತು.
ಪ್ರಕೃತಿಗೆ ಹಾನಿ ಉಂಟು ಮಾಡದ, ಪ್ರಕೃತಿಯಲ್ಲಿಯೇ ಸಿಗುವ ಶಕ್ತಿಗಳನ್ನು ಬಳಕೆಮಾಡಿಕೊಳ್ಳುವ ವಾಹನ, ವಸ್ತು ಉತ್ಪಾದನಾ ಘಟಕ ಸೇರಿದಂತೆ ಹಲವು ಮಾದರಿಗಳನ್ನು ಗಮನ ಸೆಳೆದವು. ವಿದ್ಯಾರ್ಥಿಯೋರ್ವ ಸಿದ್ಧಪಡಿಸಿದ್ದ ಸ್ವಯಂಚಾಲಿತ ವಾಹನ ಎಲ್ಲರ ಗಮನ ಸೆಳೆಯಿತು.
ಸೋಲಾರ್ ಬ್ಯಾಟರಿ, ಪವನ ವಿದ್ಯುತ್ ಶಕ್ತಿಯಿಂದ ಚಲಿಸುವ ಈ ವಾಹನ ಭವಿಷ್ಯದಲ್ಲಿ ನಾವು ಕಾಣಬಹುದಾದ ವಾಹನದ ಮಾದರಿಗಳನ್ನು ಮುಂದಿಟ್ಟಿತು. ಬೆಂಗಳೂರು ಜವಾಹರ್ ಲಾಲ್ ನೆಹರು ವೈಜ್ಞಾನಿಕ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿ ಡಾ| ಕೆ.ಆರ್. ಶ್ರೀನಿವಾಸ್ ಪ್ರದರ್ಶನಕ್ಕೆ ಚಾಲನೆ ನೀಡಿದರು.
ವಿದ್ಯಾರ್ಥಿಗಳು ತಮ್ಮ ಸಂಶೋಧನೆಗಳನ್ನು ಮಾಡುವಾಗ ಮುಂದಿನ ಜಗತ್ತಿನ ಪರಿಕಲ್ಪನೆಯನ್ನು ಆಧಾರವಾಗಿಟ್ಟುಕೊಳ್ಳಬೇಕು. ಆದಷ್ಟು ಪ್ರಕೃತಿದತ್ತವಾಗಿ ಯಥೇತ್ಛವಾಗಿ ಸಿಗುವ ಮುಗಿಯದ ಸಂಪನ್ಮೂಲಗಳನ್ನು ಬಳಕೆಮಾಡಿಕೊಂಡು ಹೊಸ ಅನ್ವೇಷಣೆಮಾಡುವತ್ತ ಗಮನ ಹರಿಸಬೇಕು ಎಂದರು.
ಕಾಲೇಜು ನಿರ್ದೇಶಕ ಪ್ರೊ| ವೈ. ವೃಷಭೇಂದ್ರಪ್ಪ, ಪ್ರಾಂಶುಪಾಲ ಡಾ| ಸುಬ್ರಮಣ್ಯ ಸ್ವಾಮಿ, ಡಾ| ಇ. ರಂಗಸ್ವಾಮಿ, ಡಾ| ಕೆ. ಸದಾಶಿವ, ಡಾ| ಎಸ್. ಕುಮಾರಪ್ಪ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Campaign: ಕಾಂಗ್ರೆಸ್ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ
Gayathri Siddeshwar: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಜನ್ಮದಿನ ಆಚರಣೆ
Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ
Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು
ನಾಮಪತ್ರ ಸಲ್ಲಿಸಿದ ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ
MUST WATCH
ಹೊಸ ಸೇರ್ಪಡೆ
Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ
Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ
Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ
Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ
Lok Sabha Election: ಉಡುಪಿ- ಜಯಪ್ರಕಾಶ್ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ