ನಾನು ರೆಡ್ಡಿ ಸಮಾಜದವನೆಂದು ಹೇಳಲು ಹೆಮ್ಮೆ: ಗಾಲಿ


Team Udayavani, Jul 24, 2017, 12:31 PM IST

24-DV-1.jpg

ದಾವಣಗೆರೆ: ರಾಜ್ಯದ 60 ವಿಧಾನ ಸಭಾ ಕ್ಷೇತ್ರದಲ್ಲಿ ತಲಾ 30 ಸಾವಿರ ಮತದಾರರನ್ನು ಹೊಂದಿರುವ ರೆಡ್ಡಿ ಸಮುದಾಯ ನನ್ನದು ಎಂದು ಹೇಳಿಕೊಳ್ಳಲು ನಾನು ಹಿಂದೇಟು ಹಾಕುವುದಿಲ್ಲ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.

ಭಾನುವಾರ ಕಮ್ಮವಾರಿ ಭವನದಲ್ಲಿ ಶ್ರೀ ವೆಂಕಟೇಶ್ವರ ಸೇವಾ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಹೇಮರಡ್ಡಿ ಮಲ್ಲಮ್ಮ ಜಯಂತಿ, ಪ್ರತಿಭಾ ಪುರಸ್ಕಾರ, ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದ ಅವರು, ಮೊದಲು ನಾನು ರೆಡ್ಡಿ ಸಮುದಾಯದವನೆಂದು ಗುರುತಿಸಿಕೊಳ್ಳಲು ಹಿಂಜರಿಯುತ್ತಿದ್ದೆ. ಆದರೆ, ಬೆಂಗಳೂರಿನಲ್ಲಿ ಇತೀಚಿಗೆ ವೇಮ, ಹೇಮರೆಡ್ಡಿ ಸಮಾಜದ ಸಮಾವೇಶದಲ್ಲಿ ಸೇರಿದ ಜನಸಂಖ್ಯೆ ನೋಡಿದ ಮೇಲೆ ನನಗೆ ನಾನು ಸಮುದಾಯದವನೆಂದು ಹೇಳಿಕೊಳ್ಳಲು ಹೆಮ್ಮೆ ಅನ್ನಿಸುತ್ತದೆ ಎಂದರು.

ಬೆಂಗಳೂರಿನ ಸಮಾವೇಶಕ್ಕೆ ಸುಮಾರು 4 ಲಕ್ಷ ಜನರು ಸೇರಿದ್ದರು. ಇತ್ತೀಚೆಗೆ ಸರ್ಕಾರ ಕೈಗೊಂಡಿರುವ ಜನಗಣತಿ ವೇಳೆ ನಮ್ಮ ಸಮುದಾಯ 60 ವಿಧಾನ ಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ತಲಾ 30 ಸಾವಿರ ಮತದಾರರನ್ನು ಹೊಂದಿದೆ. ನಾನು ಈವರೆಗೆ ಒಂದಿಷ್ಟು ತಾಲೂಕುಗಳಲ್ಲಿ ಮಾತ್ರ ನಾವಿದ್ದೇವೆ ಅಂದುಕೊಂಡಿದ್ದೆ. ಆದರೆ, ಕರ್ನಾಟಕದ ಮೂಲೆ ಮೂಲೆಯಲ್ಲೂ ನಾವು ಇದ್ದೇವೆ ಎಂದು ಹೇಳಿದರು.

ದಾವಣಗೆರೆ ಮಧ್ಯ ಕರ್ನಾಟಕ ನಗರಿಯಾಗಿದೆ. ಇಲ್ಲಿ ನಮ್ಮ ಸಮುದಾಯ ಉತ್ತಮ ಸಂಖ್ಯೆಯಲ್ಲಿದೆ. ಇಲ್ಲಿಯೇ ಸಮಾಜ ಬೆಳೆಯಬೇಕಿದೆ. ಇಲ್ಲಿಯೇ ಇರುವ ವೇಮನ ಮಠವನ್ನು ಅಭಿವೃದ್ದಿ ಪಡಿಸೋಣ. ಇನ್ನೊಂದು ಸಿದ್ಧಗಂಗಾ ಮಠ ಇಲ್ಲಿದೆ ಎಂಬಂತೆ ಸೇವೆ ಮಾಡೋಣ. ನಾನು ಮಠದ ಏಳಿಗೆಗೆ
ಶ್ರಮಿಸಲು ಸದಾ ಸಿದ್ಧ. ಇಂದು ಕಾರ್ಯಕ್ರಮಕ್ಕೆ ಬರುತ್ತಿದ್ದೇನೆ ಎಂಬುದು ಗೊತ್ತಾಗುತ್ತಲೇ ಅನೇಕ ಮಠಾಧೀಶರು ನನ್ನನ್ನು ಮಠಕ್ಕೆ ಆಹ್ವಾನಿಸಿದ್ದರು. ಎಲ್ಲಾ ಮಠಗಳಿಗೆ ಇಂದು ನಾನು ಭೇಟಿನೀಡಿ ಬಂದೆ ಎಂದು ತಿಳಿಸಿದರು.

ನೀವು ಯಾವುದೇ ಕಾರ್ಯಕ್ರಮಕ್ಕೆ, ರಾಜ್ಯದ ಯಾವುದೇ ಮೂಲೆಗೆ ಆಹ್ವಾನಿಸಿದರೂ ನಾನು ಬರಲು ಸಿದ್ಧ. ಅಲ್ಲಿ 50 ಮನೆ ಇವೆಯಾ, 5000 ಮನೆ ಇವೆಯಾ ಮುಖ್ಯವಲ್ಲ. ನಮ್ಮ ಸಮುದಾಯದ ಜನರಿರುವುದು ಮುಖ್ಯ. ನಿಮ್ಮೆಲ್ಲಾ ಕಷ್ಟ ಸುಖದಲ್ಲಿ ನಾನು ಭಾಗಿಯಾಗುತ್ತೇನೆ. ಕಳೆದ 6 ತಿಂಗಳಲ್ಲಿ ನಾನು ರಾಜ್ಯದ ವಿವಿಧ ಬಾಗಗಳಲ್ಲಿ ನಡೆದ 43 ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದೇನೆ ಎಂದು ತಿಳಿಸಿದರು.

ಹೇಮರೆಡ್ಡಿ ಮಲ್ಲಮ್ಮ ಪವಾಡ ಸೃಷ್ಟಿಸಿದ ಮಹಾನ್‌ ಸಾಧಕಿ. ಜೀವನದುದ್ದಕ್ಕೂ ಶಿವನನ್ನು ಒಲಿಸಿಕೊಳ್ಳುವಲ್ಲಿ ಯಶ ಕಂಡವರು. ಸಣ್ಣ ವಯಸ್ಸಿನಲ್ಲಿ ತಾಯಿ ಕಳೆದುಕೊಂಡು, ಶಿವನನ್ನೇ ತಾಯಿ ರೂಪದಲ್ಲಿ ಪಡೆದು ಮಮತೆ ಪಡೆದುಕೊಂಡಾಕೆ. ಮದುವೆಯಾದ ನಂತರ ತನ್ನ ಮೈದುನನ್ನು ಪರಿವರ್ತಿಸಿ, ಶರಣನನ್ನಾಗಿಸಿದಳು. ಕೊನೆ ಗಳಿಗೆಯಲ್ಲಿ ಶಿವನನ್ನು ಒಲಿಸಿಕೊಂಡು ರೆಡ್ಡಿ ಸಮಾಜ ಸದಾ ದಾನಮಾಡುವಷ್ಟು ಸಿರಿ ಕೊಡುವಂತೆ ಬೇಡಿಕೊಂಡವರು. ಅಂತಹವರ ಆಶೀರ್ವಾದ ನನ್ನ ಮೇಲೂ ಸಹ ಇದೆ. ಸುಮಾರು 5 ವರ್ಷ ಜನರ ಒಡನಾಟದಿಂದ ದೂರ ಇದ್ದ ನಾನು ಇದೇ ಮಲ್ಲಮ್ಮ ವೇಮನರ ಆಶೀರ್ವಾದದಿಂದ ಮತ್ತೆ ಜನರ ಮಧ್ಯೆಕ್ಕೆ ಬಂದಿದ್ದೇನೆ. ಇದು ನನಗೆ ಸಂತಸ ತರುವ ವಿಷಯವಾಗಿದೆ ಎಂದು ಹೇಳಿದರು.

ಸಂಸದ ಜಿ.ಎಂ. ಸಿದ್ದೇಶ್ವರ್‌, ಮಾಜಿ ಸಚಿವ ಎಸ್‌.ಎ. ರವೀಂದ್ರನಾಥ್‌, ವಿಪ ಮಾಜಿ ಸದಸ್ಯ ಡಾ| ಎ.ಎಚ್‌. ಶಿವಯೋಗಿ ಸ್ವಾಮಿ, ಮಾಜಿ ಶಾಸಕ ಎಸ್‌.ವಿ. ರಾಮಚಂದ್ರ, ಜಿಪಂ ಮಾಜಿ ಅಧ್ಯಕ್ಷ ವೀರೇಶ್‌ ಎಂ. ಹನಗವಾಡಿ, ಮಾಜಿ ಮೇಯರ್‌ ಅಶ್ವಿ‌ನಿ ಪ್ರಶಾಂತ್‌, ಆರ್‌ಎಸ್‌ ಎಸ್‌ ಮುಖಂಡ ಕೃ. ನರಹರಿ, ಬಸಪ್ಪ ರೆಡ್ಡಿ, ವಿನಯ್‌ ಪಾಟೀಲ್‌, ಕವಿತ ವಸಂತ ಇತರರು ವೇದಿಕೆಯಲ್ಲಿದ್ದರು.

ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳು, ಶಾಲೆಗೆ ಶೇ.100ರಷ್ಟು ಫಲಿತಾಂಶ ತಂದುಕೊಡಲು ಕಾರಣರಾದ ಶಿಕ್ಷಕರು, ಸ್ತ್ರೀ ಶಕ್ತಿ ಸಂಘಗಳ ಪದಾಧಿಕಾರಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ,

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.