ನೀರು ಸರಬರಾಜಿಗೆ ನೂರೆಂಟು ಸಮಸ್ಯೆ
Team Udayavani, Jan 18, 2017, 12:35 PM IST
ಹುಬ್ಬಳ್ಳಿ: ಕುಡಿಯುವ ನೀರಿನ ಸರಬರಾಜಿನಲ್ಲಿ ತಾಲೂಕು ಆಡಳಿತ, ಮಹಾನಗರ ಪಾಲಿಕೆ ಹಾಗೂ ಟ್ಯಾಂಕರ್ ಮಾಲೀಕರ ನಡುವೆ ಹಗ್ಗ ಜಗ್ಗಾಟ ಪ್ರಾರಂಭವಾಗಿದೆ. ಗ್ರಾಮೀಣ ಹಾಗೂ ನಗರದ ಹಲವು ಪ್ರದೇಶಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಟ್ಯಾಂಕರ್ ಮಾಲೀಕರು ಹಾಗೂ ಇಲಾಖೆಗಳ ಮಧ್ಯೆ ತಿಕ್ಕಾಟ ನಡೆಯುತ್ತಿದ್ದು, ಇತ್ತೀಚೆಗೆ ಟ್ಯಾಂಕರ್ ಮಾಲೀಕರು ನಡೆಸಿರುವ ಪ್ರತಿಭಟನೆ ಇದಕ್ಕೆ ತಾಜಾ ನಿದರ್ಶನ.
ದರ ಪರಿಷ್ಕರಿಸಿಲ್ಲ: ನೀರು ಸರಬರಾಜು ಮಾಡಲು ಇಲಾಖೆ ಅತಿ ಕಡಿಮೆ ಹಣ ಸಂದಾಯ ಮಾಡುತ್ತಿದೆ. ನಾಲ್ಕು ತಿಂಗಳಿಂದ ಬಿಲ್ ಪಾವತಿಸಿಲ್ಲ ಎಂಬುದು ಟ್ಯಾಂಕರ್ ಮಾಲೀಕರ ಆರೋಪ. ಅಲ್ಲದೆ, ಕಳೆದ 15 ವರ್ಷಗಳಿಂದ ನೀರಿನ ಟ್ಯಾಂಕರ್ ಗಳಿಗೆ ಟೆಂಡರ್ ಕರೆದಿಲ್ಲ. ಇರುವ ವಾಹನಗಳ ಸೇವೆಯನ್ನೇ ಮುಂದುವರಿಸಿದ್ದು, ಇದು ಮಾಲೀಕರಿಗೆ ನುಂಗಲಾರದ ತುತ್ತಾಗಿದೆ.
15 ವರ್ಷಗಳ ಹಿಂದಿನ ಡೀಸೆಲ್ – ಆಯಿಲ್ ಬೆಲೆ, ನಿರ್ವಹಣೆ ವೆಚ್ಚ, ವಿಮಾ ಕಂತು, ಚಾಲಕರ ವೇತನ ಈಗ ಮೂರು – ನಾಲ್ಕು ಪಾಲು ಹೆಚ್ಚಾಗಿದೆ. ಹಳೆಯ ದರ ಕಿ.ಮೀ.ಗೆ 19 ರೂ. ನೀಡುತ್ತಿದ್ದು, ಹೆಚ್ಚಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂಬುದು ಟ್ಯಾಂಕರ್ಗಳ ಮಾಲೀಕರ ಅಳಲು. ಸರ್ಕಾರದ ನಿಯಮಾವಳಿಯಂತೆ ಜಿಲ್ಲಾಡಳಿತದಿಂದ ಹಣ ಪಾವತಿಸುತ್ತಿದೆ.
ನಾಲ್ಕು ತಿಂಗಳಿಂದ ಹಣ ಸಂದಾಯ ಮಾಡಿಲ್ಲ ಎನ್ನುತ್ತಿರುವ ವಾಹನ ಮಾಲೀಕರಿಗೆ ದಾಖಲಾತಿಗಳನ್ನು ನೀಡುವಂತೆ ಸೂಚಿಸಲಾಗಿತ್ತು. ಅವರು ನೀಡದ ಹಿನ್ನೆಲೆಯಲ್ಲಿ ಬಿಲ್ ತಡೆ ಹಿಡಿಯಲಾಗಿತ್ತು. ಕೆಲವು ದಾಖಲೆಗಳನ್ನು ಪಡೆದು ಬಿಲ್ ಪಾವತಿಸುವಂತೆ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ ಎಂದು ಜಲಮಂಡಳಿ ಕಾರ್ಯ ನಿರ್ವಾಹಕ ಅಭಿಯಂತರ ಅಶೋಕ ಮಾಡ್ಯಾಳ ಹೇಳುತ್ತಾರೆ.
ಜಿಪಿಎಸ್ ಅಳವಡಿಕೆ: ಜ. 1ರಿಂದ ನೀರು ಸರಬರಾಜು ಮಾಡುವ ವಾಹನಗಳಿಗೆ ಜಿಪಿಎಸ್ ಅಳವಡಿಸಿದ್ದು, ಪ್ರತಿದಿನವೂ ವಾಹನಗಳ ತಪಾಸಣೆ ಮಾಡಿ, ವಾಹನ ಸಂಚಾರ ಮಾಡುವ ಸ್ಥಳ ಇತ್ಯಾದಿಗಳ ಮೇಲೆ ಅಧಿಕಾರಿಗಳು ನಿಗಾ ವಹಿಸಿದ್ದಾರೆ. ಇದರಿಂದ ನೀರಿನ ಸರಬರಾಜು ಸುಗಮವಾಗಿದೆ. ಪ್ರತಿದಿನ ಗ್ರಾಮೀಣ ಭಾಗಕ್ಕೆ ಸುಮಾರು 120 ಟ್ಯಾಂಕರ್ ಹಾಗೂ ನಗರ ಪ್ರದೇಶದಲ್ಲಿ 100-110 ಟ್ರಿಪ್ ನೀರು ಸರಬರಾಜು ಮಾಡಲಾಗುತ್ತಿದೆ.
ಇನ್ನು ಟೆಂಡರ್ ಕರೆದರೆ ದಿನವೂ ಟ್ರಿಪ್ ಆಗಲಿ, ಆಗದಿರಲಿ ವಾಹನ ಮಾಲೀಕರಿಗೆ ಹಣ ಸಂದಾಯ ಮಾಡಬೇಕು. ಇದರ ಬದಲಾಗಿ ಟ್ರಿಪ್ ಹಾಗೂ ಸಂಚರಿಸಿದ ಕಿಮೀ ಆಧರಿಸಿ ಟ್ಯಾಂಕರ್ಗಳ ಮಾಲೀಕರಿಗೆ ಹಣ ಸಂದಾಯ ಮಾಡಲಾಗುತ್ತಿದೆ. ಜಿಪಿಎಸ್ ಅಳವಡಿಸಿದ ಕಾರಣಕ್ಕೆ ವಾಹನ ಮಾಲೀಕರು ಪ್ರತಿಭಟನೆ ನಡೆಸಿರಬೇಕು ಎಂದು ಅಧಿಕಾರಿಗಳು ಹೇಳುತ್ತಾರೆ.
ಫೆ. 1ರ ಗಡುವು: ನೀರಿನ ಟ್ಯಾಂಕರ್ ಮಾಲೀಕರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಫೆ. 1ರ ವರೆಗೆ ಗಡುವು ನೀಡಿದೆ. ಡೀಸೆಲ್ ವ್ಯತ್ಯಾಸದ ಹಣ ನೀಡಬೇಕು, ನಾಲ್ಕು ತಿಂಗಳ ಬಾಕಿ ಹಣ ಸಂದಾಯವಾಗಬೇಕು, ಪ್ರತಿ ತಿಂಗಳು 10ನೇ ತಾರೀಕಿನೊಳಗೆ ಬಿಲ್ ಸಂದಾಯವಾಗಬೇಕು, ಜಿಪಿಎಸ್ ಅಳವಡಿಕೆ ಮಾಡಲಾಗಿದ್ದು, ಇದರ ನಿಗಾ ದಿನನಿತ್ಯ ನಡೆಯಬೇಕು. ತಪ್ಪು ಮಾಡಿದ ವಾಹನದವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕು.
ಅಧಿಕಾರಿಗಳ ಮನೆಗೆ ನೀರು ಸರಬರಾಜಿಗೆ ಹೋದರೆ ನಾಲ್ಕೈದು ಗಂಟೆಗಳ ಕಾಲ ನಿಲ್ಲಿಸಿಕೊಳ್ಳುವುದರಿಂದ ಟ್ರಿಪ್ ಮುಗಿಸಲು ತೊಂದರೆಯಾಗುತ್ತಿದ್ದು, ಈ ಕುರಿತು ಕ್ರಮ ತೆಗೆದುಕೊಳ್ಳಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸಬೇಕೆಂದು ನೀರಿನ ಟ್ಯಾಂಕರ್ ಮಾಲಿಕರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
* ಬಸವರಾಜ ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ