ಲಿಂಗಾಯತ ರ್ಯಾಲಿ ಯಶಸ್ಸಿಗೆ ಮನವಿ
Team Udayavani, Aug 18, 2017, 12:30 PM IST
ಧಾರವಾಡ: ಬೆಳಗಾವಿಯಲ್ಲಿ ಆ.22ರಂದು ನಡೆಯಲಿರುವ ಲಿಂಗಾಯತ ಮಹಾ ರ್ಯಾಲಿ ಕುರಿತಂತೆ ನಗರದ ಮುರುಘಾಮಠದಲ್ಲಿ ಗುರುವಾರ ಪೂರ್ವಭಾವಿ ಸಭೆ ನಡೆಯಿತು. ಸಾನ್ನಿಧ್ಯ ವಹಿಸಿದ್ದ ಶ್ರೀಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸಂವಿಧಾನಾತ್ಮಕ ಮಾನ್ಯತೆ ಸಿಗುವ ಲಕ್ಷಣಗಳಿವೆ.
ಹೀಗಾಗಿ ಲಿಂಗಾಯತರೆನ್ನುವ ಎಲ್ಲರೂ ಈ ರ್ಯಾಲಿಯಲ್ಲಿ ಭಾಗವಹಿಸಿ ಶಕ್ತಿ ತುಂಬುವ ಕೆಲಸ ಮಾಡಬೇಕು. ಈಗ ಹೋರಾಟ ಮಾಡಿದರೆ ಮುಂದೆ ಒಳ್ಳೆಯ ಫಲವಾಗಿ ಪ್ರತ್ಯೇಕ ಧರ್ಮದ ಸ್ಥಾನಮಾನ ಲಭಿಸಲಿದ್ದು, ಇದರಿಂದ ಸಾಹಿತ್ಯ, ಶೈಕ್ಷಣಿಕ ಸೇರಿದಂತೆ ವಿವಿಧ ಸ್ಥರಗಳಿಂದ ಲಿಂಗಾಯತ ಧರ್ಮದ ಜನರ ಒಳಿತಿಗೆ ಕಾರಣವಾಗಲಿದೆ.
ಇದಕ್ಕಾಗಿ ಸರ್ವ ರೀತಿಯಿಂದಲೂ ಪ್ರಯತ್ನಕ್ಕಾಗಿ ಶ್ರಮಿಸೋಣ ಎಂದರು. ಲಿಂಗಾಯತ-ವೀರಶೈವ ಬೇರೆ ಬೇರೆ ಆಗಿದ್ದು, ಈಗಾಗಲೇ ವೀರಶೈವ ಪ್ರತ್ಯೇಕ ಧರ್ಮಕ್ಕಾಗಿ ಸಲ್ಲಿಸಿರುವ ಪ್ರಸ್ತಾವನೆ ತಿರಸ್ಕೃತಗೊಂಡಿದೆ. ಈಗ ಅದೇ ತಪ್ಪು ಮಾಡುವ ಗೋಜಿಗೆ ಹೋಗಬಾರದು. ನಮ್ಮ ಮಾತೃಭಾಷೆ ಸಂಸ್ಕೃತವಲ್ಲ, ಕನ್ನಡ. ಹೀಗಾಗಿ ಕನ್ನಡದಲ್ಲಿ ಇರುವ ವಚನಗಳೇ ಲಿಂಗಾಯತ ಧರ್ಮದ ಧರ್ಮ ಗ್ರಂಥಗಳಾಗಿವೆ ಎಂದರು.
ಜೈ ಬಸವ ಮೂಲ ಮಂತ್ರ: ಸಾಹಿತಿ ಡಾ| ರಂಜಾನ್ ದರ್ಗಾ ಮಾತನಾಡಿ, ಲಿಂಗಾಯತರಿಗೆ ಜೈ ಬಸವ ಅನ್ನುವುದೇ ಮಂತ್ರ ಆಗಬೇಕು. ಈ ಮಂತ್ರದಲ್ಲಿ ಇರುವ ಆನಂದ ಬೇರೆ ಯಾವುದರಲ್ಲೂ ಸಿಗದು.ಮೊನ್ನೆ ನಡೆದ ಸ್ವಾತಂತ್ರ ದಿನಾಚರಣೆ ವೇಳೆ ಸಚಿವ ಎಂ.ಬಿ.ಪಾಟೀಲ ತಮ್ಮ ಭಾಷಣದ ಕೊನೆಯಲ್ಲಿ ಜೈಬಸವ ಹೇಳುವ ಮೂಲಕ ಈ ಆನಂದ ಹೆಚ್ಚಿಸಿದ್ದು, ಜೈ ಬಸವ ಎಂಬುದು ಲಿಂಗಾಯತರ ಮೂಲ ಮಂತ್ರವಾಗಬೇಕು ಎಂದರು.
ಲಿಂಗಾಯತರನ್ನು ಎದುರಿಸುವ ಶಕ್ತಿ ಯಾರಿಗೂ ಇಲ್ಲ. ಹೀಗಾಗಿ ಧರ್ಮಗುರು ಬಸವಣ್ಣವನ್ನಾಗಿ ಸೀÌಕರಿಸಿ, ಜೈ ಬಸವ ಮಂತ್ರದೊಂದಿಗೆ ವಚನಗಳೇ ನಮ್ಮ ಧರ್ಮ ಭಂಡಾರ ಎಂಬುದನ್ನು ಅರಿತು ಕನ್ನಡ ಮಾತೃಭಾಷೆಯ ಈ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ದೊರಕಿಸಿಕೊಡುವ ಮೂಲಕ ಬಸವಣ್ಣನವರನ್ನು ಗೆಲ್ಲಿಸಬೇಕಿದೆ ಎಂದರು.
ಅಖೀಲ ಭಾರತ ವೀರಶೈವ ಮಹಾಸಭಾದ ಮಾಜಿ ಜಿಲ್ಲಾಧ್ಯಕ್ಷ ಶಿವಣ್ಣ ಬೆಲ್ಲದ ಮಾತನಾಡಿ, ಈವರೆಗೂ ಲಿಂಗಾಯತ ಧರ್ಮಕ್ಕೆ ಸರಿಯಾದ ಹೋರಾಟದ ದಿಕ್ಕು ಇರಲಿಲ್ಲ. ಈಗ ಹೋರಾಟದ ದಿಕ್ಕು ಸರಿಯಾಗಿದೆ. ಆ.22 ರಂದು ನಡೆಯಲಿರುವ ರ್ಯಾಲಿಗೆ ಎಲ್ಲರೂ ಕೈ ಜೋಡಿಸುವ ಅಗತ್ಯವಿದ್ದು, 6 ಸ್ವತಂತ್ರ ಧರ್ಮದ ಬಳಿಕ ಲಿಂಗಾಯತವನ್ನು 7ನೇ ಸ್ವತಂತ್ರ ಧರ್ಮವನ್ನಾಗಿ ಮಾಡುವ ಕಾರ್ಯ ಆಗಬೇಕಿದೆ ಎಂದರು.
ಈಗಾಗಲೇ ಅಖೀಲ ಭಾರತ ವೀರಶೈವ ಮಹಾಸಭಾ ಸ್ಥಾಪನೆ ಇದ್ದು, ಅದರ ಹೆಸರು ಬದಲಿಸಿ ಅಖೀಲ ಭಾರತ ಲಿಂಗಾಯತ ಮಹಾಸಭಾ ಸ್ಥಾಪಿಸುವ ತುರ್ತು ಅಗತ್ಯವಿದೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಮಾತನಾಡಿ, ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡಬೇಕೆಂಬುದು ನಾಡಿನ ಎಲ್ಲಾ ಮಠಾಧಿಶರ ಒತ್ತಾಸೆ.
ಬದಲಾಗುವ ಧರ್ಮಕ್ಕಾಗಿ ಹಕ್ಕು ಕೇಳುತ್ತಿದ್ದಾರೆ ಅಷ್ಟೆ. ಲಿಂಗಾಯತ ಮಹಾರ್ಯಾಲಿಯಲ್ಲಿ ಪಾಲ್ಗೊಳ್ಳಲು ಧಾರವಾಡ ಜಿಲ್ಲೆಯಿಂದ 800 ಕ್ಕೂ ಅ ಧಿಕ ವಾಹನಗಳ ವ್ಯವಸ್ಥೆ ಮಾಡಿದ್ದಾರೆ. ಜನರ ಬೇಕು ಬೇಡಿಕೆಗಳನ್ನು ನಮ್ಮ ಸರ್ಕಾರ ಈಡೇರಿಲಿದೆ. ಇದರಲ್ಲಿ ಯಾವ ಪಕ್ಷ ಅಥವಾ ಮುಖಂಡರ ಪ್ರತಿಷ್ಠೆ ಬೇಡ.
ಸಮಾಜದ ಹಿತಕ್ಕಾಗಿ ಎಲ್ಲರೂ ಒಟ್ಟಾಗಿ ಶ್ರಮಿಸಬೇಕು ಎಂದರು. ಜಿಪಂ ಸದಸ್ಯ ಕೆ.ಸಿ.ಪುಡಕಲಕಟ್ಟಿ, ತಾಪಂ ಅಧ್ಯಕ್ಷ ಮಲ್ಲಪ್ಪ ಭಾವಿಕಟ್ಟಿ, ಡಾ|ಶಂಭುಲಿಂಗ ಹೆಗಡಾಳ, ಬಸವರಾಜ ಬಿಕ್ಕಣ್ಣವರ, ಎಚ್.ಸಿ.ಮೊರಬ, ಮಲ್ಲನಗೌಡ ಪಾಟೀಲ, ಮಹದೇವ ಹಂಪಣ್ಣವರ, ರಮೇಶ ಪಾಟೀಲ, ರಾಜು ಬೆಳ್ಳಕ್ಕಿ, ಬಸಯ್ಯ ಗಣಾಚಾರಿ, ಸಿದ್ದರಾಮಣ್ಣ ನಡಕಟ್ಟಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
MUST WATCH
ಹೊಸ ಸೇರ್ಪಡೆ
Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ