ಧಾರಾನಗರಿಯಲ್ಲಿ ಧಾರಾಕಾರ ಮಳೆ


Team Udayavani, Oct 17, 2017, 12:55 PM IST

h5-rain-pack.jpg

ಧಾರವಾಡ: ಕೊನೆಗೆ ಧಾರವಾಡಕ್ಕೆ ವರ್ಷದಲ್ಲಿ ದೈತ್ಯ ಮಳೆಯೊಂದು ಸುರಿದಂತಾಗಿದ್ದು, ಸೋಮವಾರ ಸುರಿದ ಮಳೆಯ ರಭಸಕ್ಕೆ ಇಡೀ ನಗರವೇ ನೀರಿನಲ್ಲಿ ಮಿಂದೆದ್ದಿತು. ಮಧ್ಯಾಹ್ನ 3:00ಗಂಟೆಗೆ ಆರಂಭಗೊಂಡ ರಭಸದ ಮಳೆ ಸತತ ಎರಡು ತಾಸು ಧೋ ಎಂದು ಸರಿಯಿತು.

ಮಳೆಯ ರಭಸಕ್ಕೆ ನಗರ ಪ್ರಮುಖ ರಸ್ತೆಗಳು, ಬೀದಿಗಳು ಮತ್ತು ವೃತ್ತಗಳು ಜಲಾವೃತಗೊಂಡಿದ್ದವು. ಧಾರವಾಡದ ಪ್ರಧಾನ ವೃತ್ತವಾದ ಜ್ಯುಬಿಲಿ ವೃತ್ತದಲ್ಲಿ ಮಳೆಯ ನೀರು ಮಳೆ ನಿಂತಮೇಲೂ ಅರ್ಧಗಂಟೆ ವರೆಗೂ ಹರೆಯುತ್ತಲೇ ಇತ್ತು. ಇದರಿಂದಾಗಿ ವಾಹನ ಸವಾರರು ಪರದಾಡುವಂತಾಯಿತು. 

ಇನ್ನು ಹುಬ್ಬಳ್ಳಿ-ಧಾರವಾಡ ರಸ್ತೆಯ ಶಂಕರ ಪ್ಲಾಜಾ, ಕೋರ್ಟ್‌ ವೃತ್ತ, ಲಕ್ಷ್ಮೀ ಟಾಕೀಸ್‌ ವೃತ್ತ, ದೈವಜ್ಞ ಕಲ್ಯಾಣ ಮಂಟಪ ಮತ್ತು ಟೋಲ್‌ನಾಕಾ ಬಳಿ ಮಳೆಯ ನೀರು ರಸ್ತೆಯ ತುಂಬ ಹಿರಿಯುವ ದೃಶ್ಯ ಕಂಡು ಬಂದಿತು. ಇನ್ನು ಚೆನ್ನಬಸವೇಶ್ವರ ನಗರದಲ್ಲಿನ ಮನೆಗಳಿಗೆ ನೀರು ನುಗ್ಗಿದ್ದರೆ, ಕೊಪ್ಪದ ಕೆರೆಯ ಬಳಿ ಇರುವ ಮಹಾತ್ಮ ಬಸವೇಶ್ವರ ನಗರದಲ್ಲಿನ ಶಿವಾಲಯವು ಮಳೆಯ ನೀರಿನಿಂದ ಆವೃತವಾಗಿದ್ದ ದೃಶ್ಯ ಕಂಡು ಬಂದಿತು.

ಮುರುಘಾಮಠದ ಪ್ರದೇಶದಲ್ಲಿ ಮಳೆಯ ನೀರು 2 ಅಡಿಗಳಷ್ಟು ಎತ್ತರಕ್ಕೆ ಹರಿದಿದ್ದರಿಂದ ಅಲ್ಲಿನ ನಿವಾಸಿಗಳು ಸ್ವಲ್ಪ ಹೊತ್ತು ಆತಂಕಕ್ಕೆ ಒಳಗಾಗಿದ್ದರು. ಇನ್ನು ಸಿಮೆಂಟ್‌ ರಸ್ತೆ ನಿರ್ಮಾಣ ಮತ್ತು ಒಳಚರಂಡಿ ನಿರ್ಮಾಣ ಕಾಮಾಗರಿಗಳು ನಡೆದ ಭೂಸಪ್ಪ ಚೌಕ್‌, ರವಿವಾರ ಪೇಟೆಯಲ್ಲಿ ಮಳೆಯ ನೀರು ರಸ್ತೆಯನ್ನು ಬಿಟ್ಟು ಸಂದಿಗೊಂದಿಗಳಲ್ಲಿ ನುಗ್ಗಿದ್ದರಿಂದ ಅಕ್ಕ ಪಕ್ಕದ ನಿವಾಸಿಗಳು ಪರದಾಡುವಂತಾಯಿತು. 

ಜನ್ನತ್‌ ನಗರ, ತೇಜಸ್ವಿನಗರ, ಶ್ರೀರಾಮ ನಗರ ಸೇರಿದಂತೆ ಮದಾರ ಮಡ್ಡಿ ಮತ್ತು ಮಾಳಾಪುರದ ತಗ್ಗು ಪ್ರದೇಶಗಳಿಗೆ  ಮಳೆಯ ನೀರು ನುಗ್ಗಿತ್ತು. ಸಾರಿಗೆ ಬಸ್‌ ಡಿಪೋ ಹತ್ತಿರದ ಬಳಿ ಹಿರಿಯುವ ರಾಜ ಕಾಲುವೆ ತುಂಬಿ ಹರೆದ ದೃಶ್ಯ ಕಂಡು ಬಂದಿತು. ಇನ್ನು ಸಾಧನಕೇರಿ, ಪೊಲೀಸ್‌ ಹೆಡ್‌  ಕ್ವಾರ್ಟರ್ಸ್‌, ಹೊಸ ಬಸ್‌ ನಿಲ್ದಾಣದ ಹಿಂಭಾಗ ಸೇರಿದಂತೆ ಅನೇಕ ಪ್ರದೇಶಗಳಲ್ಲೂ ವರುಣ ರುದ್ರಾವತಾರದ ಕುರುಹುಗಳಾಗಿ ಚರಂಡಿಗಳು ಎಲ್ಲೆಂದರಲ್ಲಿ ನುಗ್ಗಿ ಹಿರಿಯುತ್ತಿದ್ದ ದೃಶ್ಯ ಕಂಡು ಬಂದಿತು. 

ಟಾಪ್ ನ್ಯೂಸ್

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ

Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ

MONEY (2)

Hubli ಅಪಾರ್ಟಮೆಂಟ್‌ ನಲ್ಲಿ ಸಿಕ್ಕ ಕೋಟಿ ಕೋಟಿ ಹಣ ಬ್ಯಾಂಕ್ ಗೆ ಜಮೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

accident

Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ

D. K. Shivakumar: ಡಿಕೆಶಿ ರಕ್ಷಿಸಲೆಂದೇ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್‌

D. K. Shivakumar: ಡಿಕೆಶಿ ರಕ್ಷಿಸಲೆಂದೇ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.