ಏಕಕಾಲದಲ್ಲಿ 104 ಉಪಗ್ರಹಗಳ ಉಡಾವಣೆ; ನನಸಾಗಲಿ ಇಸ್ರೋ ಕನಸು


Team Udayavani, Feb 13, 2017, 3:45 AM IST

12-ANKANA-3.jpg

ಈವರೆಗೆ ವಿಶ್ವದ  ಯಾವೊಂದೂ  ದೇಶವೂ ಏಕಕಾಲದಲ್ಲಿ  100 ಉಪಗ್ರಹಗಳನ್ನು  ಬಾಹ್ಯಾಕಾಶಕ್ಕೆ  ಕಳುಹಿಸಿದ ನಿದರ್ಶನ ಇಲ್ಲ. ಸದ್ಯ  ಏಕಕಾಲದಲ್ಲಿ ಗರಿಷ್ಠ ಸಂಖ್ಯೆಯ ಉಪಗ್ರಹಗಳನ್ನು  ಹಾರಿಸಿದ  ವಿಶ್ವದಾಖಲೆ  ರಷ್ಯದ  ಹೆಸರಿನಲ್ಲಿದ್ದು, 2014ರ ಜೂನ್‌ನಲ್ಲಿ  ರಷ್ಯ ಸುಧಾರಿತ ಕ್ಷಿಪಣಿ ಬಳಸಿ  37 ಉಪಗ್ರಹಗಳನ್ನು  ಉಡಾಯಿಸಿದ್ದೇ  ಈವರೆಗಿನ  ದಾಖಲೆ. ಅಮೆರಿಕದ  ನಾಸಾ  29 ಉಪಗ್ರಹಗಳನ್ನು  ಏಕಕಾಲದಲ್ಲಿ  ನಭಕ್ಕೆ  ಕಳುಹಿಸಿದುದು  ಎರಡನೇ ದಾಖಲೆ.

ಬಾಹ್ಯಾಕಾಶ  ಕ್ಷೇತ್ರದಲ್ಲಿ  ಸಾಧನೆಯ  ಮೆಟ್ಟಿಲುಗಳನ್ನು  ಹಂತಹಂತವಾಗಿ  ಏರುವ ಮೂಲಕ  ವಿಶ್ವ ಭೂಪಟದಲ್ಲಿ  ಗುರುತಿಸಿಕೊಂಡಿರುವ  ಭಾರತ  ಇದೀಗ  ಇನ್ನೊಂದು  ಮಹತ್ಸಾಧನೆಗೆ  ಸಜ್ಜಾಗಿದೆ.  ಭಾರತೀಯ ಬಾಹ್ಯಾಕಾಶ ಸಂಶೋಧನ  ಸಂಸ್ಥೆ (ಇಸ್ರೋ) ಫೆ. 15ರಂದು  ಆಂಧ್ರಪ್ರದೇಶದ  ಶ್ರೀಹರಿಕೋಟಾದಲ್ಲಿರುವ   ಸತೀಶ್‌ ಧವನ್‌ ಉಪಗ್ರಹ ಉಡಾವಣಾ  ಕೇಂದ್ರದಿಂದ ಉಡಾವಣಾ ವಾಹಕ ಪಿಎಸ್‌ಎಲ್‌ವಿ-ಸಿ37 ಏಕಕಾಲದಲ್ಲಿ  ಭಾರತದ  ಮೂರು ಸಹಿತ  ವಿವಿಧ ದೇಶಗಳ  104 ಉಪಗ್ರಹಗಳನ್ನು  ಹೊತ್ತು ಬಾಹ್ಯಾಕಾಶಕ್ಕೆ  ನೆಗೆದೇರಲಿದೆ. ಈ ಮೂಲಕ  ಭಾರತ  ವಿಶ್ವ ದಾಖಲೆ ನಿರ್ಮಾಣಕ್ಕೆ  ಮುಂದಾಗಿದ್ದು  ಇಸ್ರೋದ  ಈ  ಅಮೋಘ ಪ್ರಯತ್ನಕ್ಕೆ  ಇದೀಗ ದಿನಗಣನೆ  ಆರಂಭಗೊಂಡಿದೆ. 

ಈವರೆಗೆ ವಿಶ್ವದ  ಯಾವೊಂದೂ  ದೇಶವೂ ಏಕಕಾಲದಲ್ಲಿ  100 ಉಪಗ್ರಹಗಳನ್ನು  ಬಾಹ್ಯಾಕಾಶಕ್ಕೆ  ಕಳುಹಿಸಿದ ನಿದರ್ಶನ ಇಲ್ಲ. ಸದ್ಯ  ಏಕಕಾಲದಲ್ಲಿ ಗರಿಷ್ಠ ಸಂಖ್ಯೆಯ ಉಪಗ್ರಹಗಳನ್ನು  ಹಾರಿಸಿದ  ವಿಶ್ವದಾಖಲೆ  ರಷ್ಯದ  ಹೆಸರಿನಲ್ಲಿದ್ದು, 2014ರ ಜೂನ್‌ನಲ್ಲಿ  ರಷ್ಯ ಸುಧಾರಿತ ಕ್ಷಿಪಣಿ ಬಳಸಿ  37 ಉಪಗ್ರಹಗಳನ್ನು  ಉಡಾಯಿಸಿದ್ದೇ  ಈವರೆಗಿನ  ದಾಖಲೆ. ಅಮೆರಿಕದ  ನಾಸಾ  29 ಉಪಗ್ರಹಗಳನ್ನು  ಏಕಕಾಲದಲ್ಲಿ  ನಭಕ್ಕೆ  ಕಳುಹಿಸಿದುದು  ಎರಡನೇ ದಾಖಲೆ. ಕಳೆದ  ವರ್ಷ ಜೂನ್‌ನಲ್ಲಿ  ಇಸ್ರೋ ಪಿಎಸ್‌ಎಲ್‌ವಿ  ಮೂಲಕ  ಏಕಕಾಲದಲ್ಲಿ  20 ಉಪಗ್ರಹಗಳನ್ನು  ಬಾಹ್ಯಾಕಾಶಕ್ಕೆ  ಕಳುಹಿಸುವ ಮೂಲಕ   ರಾಷ್ಟ್ರೀಯ  ದಾಖಲೆ ನಿರ್ಮಿಸಿತ್ತು.  ಇದೀಗ  ಭಾರತ  ವಿಶ್ವದಲ್ಲಿಯೇ ಮೊದಲ  ಬಾರಿಗೆ  100ಕ್ಕೂ ಅಧಿಕ ಉಪಗ್ರಹಗಳನ್ನು  ಏಕಕಾಲದಲ್ಲಿ  ಉಡಾಯಿಸುವ ಸಾಹಸಕ್ಕೆ  ಕೈಹಾಕಿದ್ದು, ಇದು  ಯಶಸ್ವಿಯಾದಲ್ಲಿ  ಭಾರತದ ತ್ರಿವರ್ಣ ಧ್ವಜ  ಮತ್ತೂಮ್ಮೆ  ಬಾಹ್ಯಾಕಾಶದಲ್ಲಿ  ಹಾರಾಡಲಿದೆ.  

ಫೆ. 15ರಂದು  ಒಟ್ಟು 1378 ಕೆ.ಜಿ. ತೂಕವಿರುವ  104 ಉಪಗ್ರಹಗಳನ್ನು  ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲಾಗುತ್ತಿದೆ.  ಈ ಉಪಗ್ರಹಗಳ ಪೈಕಿ ಭಾರತದ ಮೂರು, ಅಮೆರಿಕದ 96  ಮತ್ತು  ಇಸ್ರೇಲ್‌, ಕಜಾಕಿಸ್ಥಾನ್‌, ನೆದರ್‌ಲ್ಯಾಂಡ್ಸ್‌, ಸ್ವಿಟ್ಜರ್‌ಲ್ಯಾಂಡ್‌ ಮತ್ತು ಸಂಯುಕ್ತ ಅರಬ್‌ ಸಂಸ್ಥಾನದ  ತಲಾ ಒಂದೊಂದು ಉಪಗ್ರಹಗಳು ಸೇರಿವೆ. ಕಾಟೋìಸ್ಯಾಟ್‌-2 ಸರಣಿಯಡಿ 714 ಕೆ.ಜಿ. ತೂಕದ  ಒಂದು ಉಪಗ್ರಹ ಮತ್ತು ಎರಡು ನ್ಯಾನೋ ಉಪಗ್ರಹಗಳಾದ  ತಲಾ 15 ಕೆ.ಜಿ. ತೂಕದ  ಐಎನ್‌ಎಸ್‌-1ಎ ಮತ್ತು ಐಎನ್‌ಎಸ್‌ 1ಬಿಯನ್ನು ಭಾರತ  ಈ  ಮೆಗಾ ಉಡಾವಣೆಯಲ್ಲಿ  ಬಾಹ್ಯಾಕಾಶಕ್ಕೆ  ರವಾನಿಸಲಿದೆ. ಕಳೆದ ವರ್ಷದ ಅಂತ್ಯದ ವರೆಗೆ ಇಸ್ರೋ ಪಿಎಸ್‌ಎಲ್‌ವಿ ಉಡಾವಣಾ ವಾಹಕ ಬಳಸಿ  39 ಉಡ್ಡಯನಗಳನ್ನು  ನಡೆಸಿದೆ. ಈ ಪೈಕಿ 37 ನಿಗದಿಯಂತೆ  ಕಕ್ಷೆ  ತಲುಪುವಲ್ಲಿ  ಯಶಸ್ವಿಯಾಗಿದೆ, ಒಂದು  ಸಂಪೂರ್ಣ ವಿಫ‌ಲವಾಗಿ ಇನ್ನೊಂದು  ಭಾಗಶಃ ಯಶಸ್ಸನ್ನು ಕಾಣುವ ಮೂಲಕ ಈ ಉಡಾವಣಾ ವಾಹಕ ಶೇ. 95ರಷ್ಟು ಯಶಸ್ಸು ಕಂಡಿತ್ತು. ಇವಲ್ಲದೆ  ಚಂದ್ರಯಾನ-1, ಮಂಗಳಯಾನ ಮತ್ತು ಆಸ್ಟ್ರೋಸ್ಯಾಟ್‌ನ ಉಡಾವಣೆಯಲ್ಲಿಯೂ  ಪಿಎಸ್‌ಎಲ್‌ವಿಯನ್ನು  ಇಸ್ರೋ  ಯಶಸ್ವಿಯಾಗಿ  ಬಳಸಿಕೊಂಡಿತ್ತು. ಇದೀಗ  ಬುಧವಾರ ನಡೆಯಲಿರುವ ಮೆಗಾ ಉಡಾವಣೆ ಪಿಎಸ್‌ಎಲ್‌ವಿಯ 39ನೇ  ಉಡ್ಡಯನ. ಈ ಉಡ್ಡಯನದ  48 ತಾಸುಗಳ ಕ್ಷಣಗಣನೆ ಸೋಮವಾರ ಆರಂಭಗೊಳ್ಳಲಿದೆ. 

ಈ  ಮಹತ್ಸಾಧನೆಯ ಜತೆಯಲ್ಲಿ  ಭಾರತ  ಇದೇ ಮೊದಲ  ಬಾರಿಗೆ ಶುಕ್ರ ಗ್ರಹಕ್ಕೆ  ಬಾಹ್ಯಾಕಾಶ ನೌಕೆ ಕಳುಹಿಸಿಕೊಡಲು  ಸಜ್ಜಾಗಿದೆ.  ಇದರ  ಜತೆಯಲ್ಲಿ  ಮಂಗಳಯಾನ-2 ಯೋಜನೆಯನ್ನೂ  ಕೈಗೆತ್ತಿಕೊಳ್ಳಲು ಮುಂದಾಗಿದೆ. ಗುರು ಗ್ರಹದತ್ತಲೂ  ದೃಷ್ಟಿ ನೆಟ್ಟಿರುವ  ಇಸ್ರೋ ಸೂರ್ಯನ ಅಧ್ಯಯನಕ್ಕಾಗಿ  ಆದಿತ್ಯ-ಎಲ್‌ 1 ಉಪಗ್ರಹದ ಉಡಾವಣೆಗೆ ಚಿಂತನೆ ನಡೆಸಿದೆ. ಬುಧವಾರ  ನಡೆಯಲಿರುವ ಇಸ್ರೋದ ಈ  ಐತಿಹಾಸಿಕ  ಪ್ರಯತ್ನ  ಸಫ‌ಲವಾಗಿ  ಭಾರತ  ವಿಶ್ವದಾಖಲೆಗೆ ಭಾಜನವಾಗಲಿ ಎಂಬ  ಆಶಯದ ಜತೆಯಲ್ಲಿ  ಇಸ್ರೋದ  ಮುಂದಿನ ಮಹತ್ವಾಕಾಂಕ್ಷೆಯ ಯೋಜನೆಗಳಿಗೆ ಈ  ಯಶಸ್ವಿ ಸಾಧನೆ  ನಾಂದಿ  ಹಾಡಲಿ ಮತ್ತು ಈ ಮೂಲಕ ಭಾರತ ಬಾಹ್ಯಾಕಾಶ  ಕ್ಷೇತ್ರದಲ್ಲಿನ ಪಾರಮ್ಯವನ್ನು  ಮತ್ತಷ್ಟು  ಎತ್ತರಕ್ಕೇರಿಸಿಕೊಳ್ಳಲಿ ಎಂಬುದು  ದೇಶದ  ಜನತೆಯ ಹಾರೈಕೆ. 

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.