ಸ್ವಸ್ಥ ಸಮಾಜಕ್ಕೆ ಮಹತ್ವದ ನಡೆ


Team Udayavani, Mar 29, 2017, 3:45 AM IST

ankana.jpg

ಮನೋರೋಗಿಗಳ ಕಾಳಜಿ ವಹಿಸುವ ಮಸೂದೆ 

ಮನೋರೋಗಿಗಳ ಆರೋಗ್ಯ ಕಾಳಜಿ ವಹಿಸುವ ಮೆಂಟಲ್‌ ಹೆಲ್ತ್‌ ಕೇರ್‌ ಬಿಲ್‌ ಅಂಗೀಕಾರ ಸ್ವಾಗತಾರ್ಹ. ಮಾನಸಿಕ ರೋಗಗಳಿಂದ ಬಳಲುವವರಿಗೆ ಅತ್ಯುತ್ತಮ ಚಿಕಿತ್ಸೆ ಪಡೆಯುವ ಹಕ್ಕನ್ನು ಕೊಡುವ ಈ ಮಸೂದೆಯಲ್ಲಿ ಆತ್ಮಹತ್ಯೆ ಪ್ರಯತ್ನ ಅಪರಾಧ ಅಲ್ಲ ಎಂದು ಸಾರುವ ಇನ್ನೊಂದು ಪ್ರಮುಖ ಅಂಶವೂ ಇದೆ.

ಆರೋಗ್ಯವಂತ ಜನರು ಆರೋಗ್ಯಕರ ಸಮಾಜ ನಿರ್ಮಾಣದ ಅಡಿಪಾಯ ಎನ್ನುವುದನ್ನು ಕೇಂದ್ರ ಸರಕಾರ ಚೆನ್ನಾಗಿ ಅರ್ಥ ಮಾಡಿಕೊಂಡಿರುವಂತೆ ಕಾಣಿಸುತ್ತಿದೆ. ಜನರ ಆರೋಗ್ಯವನ್ನು ಕಾಪಾಡಲು ಜೆನೆರಿಕ್‌ ಔಷಧ ಮಳಿಗೆ, ಸ್ಟೆಂಟ್‌ ದರ ಇಳಿಕೆಯಂತಹ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡ ಬಳಿಕ ಇದೀಗ ಮನೋರೋಗಿಗಳ ಆರೋಗ್ಯದ ಕಾಳಜಿ ವಹಿಸುವ ಮಸೂದೆಯನ್ನು ಅಂಗೀಕರಿಸಿಕೊಂಡಿದೆ. 2013ರಲ್ಲೇ ತಯಾರಾಗಿದ್ದ ಮೆಂಟಲ್‌ ಹೆಲ್ತ್‌ಕೇರ್‌ ಬಿಲ್‌ ಕಳೆದ ವರ್ಷ ರಾಜ್ಯಸಭೆಯಲ್ಲಿ ಮಂಜೂರಾಗಿತ್ತು. ಸೋಮವಾರ ಲೋಕಸಭೆಯಲ್ಲೂ ಮಂಜೂರಾಗಿರುವುದರಿಂದ ಶಾಸನ ರೂಪದಲ್ಲಿ ಜಾರಿಗೆ ಬರಲಿದೆ. ಮಾನಸಿಕ ರೋಗಗಳಿಂದ ಬಳಲುವವರಿಗೆ ಅತ್ಯುತ್ತಮ ಚಿಕಿತ್ಸೆ ಪಡೆಯುವ ಹಕ್ಕನ್ನು ಕೊಡುವ ಈ ಮಸೂದೆಯಲ್ಲಿ ಆತ್ಮಹತ್ಯೆ ಪ್ರಯತ್ನ ಅಪರಾಧ ಅಲ್ಲ ಎಂದು ಸಾರುವ ಇನ್ನೊಂದು ಪ್ರಮುಖ ಅಂಶವೂ ಇದೆ. 

ಸಾವಿನ ಹತ್ತು ಪ್ರಮುಖ ಕಾರಣಧಿಗಳಲ್ಲಿ ಆತ್ಮಹತ್ಯೆ ಒಂದು. ಅಪರಾಧ ದಾಖಲೆ ವಿಭಾಗದ ಅಂಕಿಅಂಶ ತಿಳಿಸುವ ಪ್ರಕಾರ ಪ್ರತಿ ವರ್ಷ ಸರಾಸರಿ 1.35 ಲಕ್ಷ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. 2004ರಿಂದೀಚೆಗೆ ಆತ್ಮಹತ್ಯೆಗಳ ಪ್ರಮಾಣ ಶೇ. 15ರಂತೆ ಹೆಚ್ಚಳವಾಗಿದೆ. ಅದರಲ್ಲೂ 15ರಿಂದ 29 ವರ್ಷದವರ ಆತ್ಮಹತ್ಯೆ ಪ್ರಕರಣಗಳು ಅಧಿಕವಿದೆ. ಆತ್ಮಹತ್ಯೆಗೆ ತೀವ್ರವಾದ ಮಾನಸಿಕ ಒತ್ತಡ ಅಥವಾ ಖನ್ನತೆಯೇ ಕಾರಣವಾಗಿರುತ್ತದೆ. ಐಪಿಸಿ ಕಲಂ 309ರ ಪ್ರಕಾರ ಆತ್ಮಹತ್ಯೆ ಶಿಕ್ಷಾರ್ಹ ಅಪರಾಧ. ತೀವ್ರ ಮಾನಸಿಕ ಒತ್ತಡದಿಂದ ಸಾಯಲು ಬಯಸಿದ ವ್ಯಕ್ತಿ ಅಕಸ್ಮಾತ್‌ ಬದುಕುಳಿದರೆ ವಿಚಾರಣೆಗೊಳಪಡಿಸಿ ಶಿಕ್ಷೆ ವಿಧಿಸುವುದು ಅಮಾನವೀಯ ಕ್ರಮ. ಸಾವು ಅಪೇಕ್ಷಿಸಿದ ವ್ಯಕ್ತಿ ಬದುಕುಳಿದರೆ 
ಅವಧಿನನ್ನು ಮಾನವೀಯ ಅನುಕಂಪದಿಂದ ನೋಡಬೇಕೇ ಹೊರತು ಕಾನೂಧಿನಿನ ಕುಣಿಕೆ ಬಿಗಿದು ಇನ್ನಷ್ಟು ಒತ್ತಡಕ್ಕೆ ನೂಕುವುದರಲ್ಲಿ ಅರ್ಥವಿಲ್ಲ. 

ಈ ಹಿನ್ನೆಲೆಯಲ್ಲಿ ಆತ್ಮಹತ್ಯೆ ಪ್ರಯತ್ನ ಅಪರಾಧ ಅಲ್ಲ ಎಂದು ಪರಿಗಣಿಸುವುದು ಮಾನವೀಯ ನಿರ್ಧಾರ. ಮಾನಸಿಕ ರೋಗಕ್ಕೆ ವಿದ್ಯುತ್‌ ಶಾಕ್‌ ನೀಡುವುದು ದೇಶದಲ್ಲಿರುವ ಜನಪ್ರಿಯ ಚಿಕಿತ್ಸಾ ಪದ್ಧತಿ. ಹೊಸ ಮಸೂದೆ ಇದಕ್ಕೆ ನಿರ್ಬಂಧ ಹೇರಿದೆ. ಮಕ್ಕಳನ್ನು ವಿದ್ಯುತ್‌ ಶಾಕ್‌ ಚಿಕಿತ್ಸೆಗೆ ಗುರಿಪಡಿಸುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ.

ಪ್ರಾಯಪ್ರಬುದ್ಧರಿಗೂ ಈ ಚಿಕಿತ್ಸೆ ನೀಡಲು ಕಠಿಣ ನಿಯಮಗಳನ್ನು ರಚಿಸಲಾಗಿದೆ. ಅಂತೆಯೇ ಮನೋರೋಗಿಗಳಿಗೆ ಯಾವ ರೀತಿಯ ಚಿಕಿತ್ಸೆ ಪಡೆಯಬೇಕೆಂದು ತೀರ್ಮಾನಿಸುವ ಹಕ್ಕನ್ನು ನೀಡಲಾಗಿದೆ. ಈ ವಿಚಾರದಲ್ಲಿ 1987ರಲ್ಲಿ ಜಾರಿಗೆ ತರಲಾಗಿದ್ದ ಮಾನಸಿಕ ಆರೋಗ್ಯ ಕಾಯಿದೆಯಲ್ಲಿದ್ದ ದೊಡ್ಡದೊಂದು ಲೋಪವನ್ನು ಸರಿಪಡಿಸಲಾಗಿದೆ. ಹಳೆ ಕಾಯಿದೆಯಲ್ಲಿ ಮನೋರೋಗಿಗಳ ಚಿಕಿತ್ಸೆಯನ್ನು ಸಾಂಸ್ಥಿàಕರಿಸಲಾಗಿತ್ತು. ಅಂದರೆ ಅವರನ್ನು ಮನೆಯವರಿಂದ ಬೇರ್ಪಡಿಸಿ, ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದು ವ್ಯತಿರಿಕ್ತ ಪರಿಣಾಮಕ್ಕೆ ಕಾರಣವಾಗುತ್ತಿತ್ತು. 

ಮಾನಸಿಕ ರೋಗಿಗಳ ಗೌಪ್ಯತೆ ಕಾಪಾಡುವ ಮಹತ್ವದ ಅಂಶವೂ ಮಸೂದೆಯಲ್ಲಿದೆ. ಮಾನಸಿಕ ರೋಗಿಗಳ ಚಿಕಿತ್ಸೆಗಾಗಿ ಕೇಂದ್ರ ಸರಕಾರ ಮಾನಸಿಕ ಆರೋಗ್ಯ ಪ್ರಾಧಿಕಾರ ರಚಿಸಲಿದೆ. ಪ್ರತಿ ರಾಜ್ಯವೂ ಮಾನಸಿಕ ಆರೋಗ್ಯ ಪ್ರಾಧಿಕಾರವನ್ನು ಸ್ಥಾಪಿಸಿಕೊಳ್ಳಬೇಕು. ಎಲ್ಲ ಮಾನಸಿಕ ಆರೋಗ್ಯ ಚಿಕಿತ್ಸಾಲಯಗಳು, ಮನೋವೈದ್ಯರು, ನರ್ಸ್‌ಗಳು ಮತ್ತು ಕಾರ್ಯಕರ್ತರು ಈ ಪ್ರಾಧಿಕಾರಗಳಲ್ಲಿ ನೋಂದಾಯಿಸಿಕೊಳ್ಳಬೇಕು. ಮನೋರೋಗಿಗಳ ಹಕ್ಕುಗಳ ರಕ್ಷಣೆಗಾಗಿ ಮಾನಸಿಕ ಆರೋಗ್ಯ ಪರಿಶೀಲನಾ ಮಂಡಳಿ ಅಸ್ತಿತ್ವಕ್ಕೆ ಬರಲಿದೆ. ದೇಶದ ಶೇ. 7ರಷ್ಟು ಜನರು ಒಂದಿಲ್ಲೊಂದು ಮಾನಸಿಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಆತ್ಮಹತ್ಯೆ ಪ್ರಮಾಣ ಕಳವಳಕಾರಿಯಾಗಿ ಹೆಚ್ಚಾಗಲು ಮಾನಸಿಕ ರೋಗಗಳೇ ಮೂಲಕಾರಣ. ಜನರ ಮಾನಸಿಕ ಆರೋಗ್ಯವನ್ನು ಕಾಪಾಡಲು ಸಮಗ್ರ ಶಾಸನದ ಅಗತ್ಯವಿದೆ ಎನ್ನುವುದು ಸತ್ಯ. ಇದೇ ವೇಳೆ ಮನೋರೋಗಿಗಳನ್ನು ನೋಡುವ ಜನರ ದೃಷ್ಟಿಯೂ ಬದಲಾಗುವ ಅಗತ್ಯವಿದೆ. ಮನೋವೈದ್ಯರಲ್ಲಿ ಹೋಗುವುದೇ ಅವಮಾನ ಎಂಬ ಭಾವನೆ ದೂರವಾಗಬೇಕು. ಮನೋರೋಗಿಗಳನ್ನು ಕೂಡಿ ಹಾಕಿ ಹಿಂಸಿಸುವ ಕ್ರೂರ ಮನೋಧರ್ಮವನ್ನು ಬಿಡಬೇಕು. ಮನೋರೋಗವೂ ಇತರ ರೋಗಗಳಂತೆ ಗುಣವಾಗುತ್ತದೆ. ಎಲ್ಲ ಮನೋರೋಗಗಳು ಹುಚ್ಚು ಅಲ್ಲ ಎನ್ನುವ ಅರಿವು ಮೂಡಬೇಕು.

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

War: ಮತ್ತೆ ಯುದ್ಧ ಬೇಡ

War: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರಾನೇರ ಹಣಾಹಣಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.