ಆರ್ಥಿಕ ಸ್ಥಿತಿಗತಿ ಸುಧಾರಣೆಯಾಗಬೇಕು: ಅದೇ ಕತೆ ಪುನರಾವರ್ತನೆ


Team Udayavani, Aug 21, 2017, 8:03 AM IST

21-an-3.jpg

ರೈಲ್ವೇ ಯಾವಾಗ ರಾಜಕೀಯ ಪಕ್ಷಗಳಿಗೆ ಮತಗಳಿಸಿಕೊಡುವ ವ್ಯವಸ್ಥೆಯಾಗಿ ಬದಲಾಯಿತೋ ಅಂದಿನಿಂದ ರೈಲ್ವೆ ಇಲಾಖೆಯ ದಕ್ಷತೆ ಕಡಿಮೆಯಾಗಿದೆ. 

ಶನಿವಾರ ಉತ್ತರ ಪ್ರದೇಶದ ಮುಜಾಫ‌ರ್‌ ನಗರದಲ್ಲಿ ರೈಲು ಅಪಘಾತ ಸಂಭವಿಸಿದೆ. ಕಳೆದ ವರ್ಷ ಉತ್ತರ ಪ್ರದೇಶದಲ್ಲೇ ಕಾನ್ಪುರ ಬಳಿ ರೈಲೊಂದು ಹಳಿಯಿಂದ ಕೆಳಗುರುಳಿ 150ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದರು ಎಂದು ನೆನಪಾದದ್ದು ಶನಿವಾರ ಅಪಘಾತ ನಡೆದಾಗ. ಎರಡೂ ಘಟನೆಗಳಿಗೆ ರೈಲು ಹಳಿ ತಪ್ಪಿದ್ದೇ ಕಾರಣ. ಆದರೆ ಹೀಗೊಂದು ಭೀಕರ ಘಟನೆ ನಡೆದ ಬಳಿಕವೂ ರೈಲ್ವೇ ಇಲಾಖೆ ಅಪಘಾತಗಳನ್ನು ತಪ್ಪಿಸಲು ಪರಿಣಾಮಕಾರಿಯಾದಂತಹ ಯಾವ ಕ್ರಮಗಳನ್ನು ಕೈಗೊಂಡಿಲ್ಲ ಎನ್ನುವುದು ಸಾಬೀತಾಗಿದೆ. ಕಳೆದ ಐದು ವರ್ಷಗಳಲ್ಲಿ 586 ರೈಲು ಅಪಘಾತಗಳು ಸಂಭವಿಸಿವೆ ಎನ್ನುತ್ತದೆ ವರದಿ. ಈ ಪೈಕಿ ಶೇ. 53 ಅಪಘಾತಗಳಿಗೆ ರೈಲು ಹಳಿ ತಪ್ಪಿದ್ದು ಕಾರಣ. 2014ರ ನವಂಬರಿನಿಂದೀಚೆಗೆ 20ಕ್ಕೂ ಹೆಚ್ಚು ರೈಲು ಅಪಘಾತಗಳು ಸಂಭವಿಸಿವೆ. ಪ್ರತಿ ಸಲ ಅಪಘಾತವಾದಾಗ ಮೃತರ ಬಂಧುಗಳಿಗೆ, ಗಾಯಾಳುಗಳಿಗೆ ಸರಕಾರ ಒಂದಷ್ಟು ಲಕ್ಷ ಪರಿಹಾರ ಕೊಟ್ಟು ಕೈತೊಳೆದು ಕೊಳ್ಳುತ್ತದೆ. ಇಷ್ಟರಿಂದಲೇ ತಮ್ಮ ಮನೆಯವರನ್ನು,  ಬಂಧುಗಳನ್ನು ಕಳೆದುಕೊಂಡವರಿಗೆ ನ್ಯಾಯ ಒದಗಿಸಿದಂತಾಯಿತೆ? 

 ಒಂದು ಕುತೂಹಲಕಾರಿ ಅಂಶ ಏನೆಂದರೆ ಬಹುತೇಕ ಅಪಘಾತಕ್ಕೆ ಈಡಾಗುವುದು ಬಡವರು ಪ್ರಯಾಣಿಸುವ ರೈಲುಗಳು. ಅಂದರೆ ರಾಜಧಾನಿ, ಶತಾಬ್ಧಿಯಂತಹ ಶ್ರೀಮಂತರೇ ಹೆಚ್ಚಾಗಿ ಪ್ರಯಾಣಿಸುವ ರೈಲುಗಳು ಅಪಘಾತಕ್ಕೊಳಗಾಗುವುದು ಬಹಳ ಅಪರೂಪ. ಹಾಗೆಂದು ಶ್ರೀಮಂತರು ಪ್ರಯಾಣಿಸುವ ರೈಲುಗಳು ಹೆಚ್ಚು ಸುರಕ್ಷಿತ ಎಂದಲ್ಲ. ಅವುಗಳು ಓಡುವುದು ಕೂಡ ಅದೇ ಹಳಿಯಲ್ಲಿ, ಅವುಗಳನ್ನು ನಿಯಂತ್ರಿಸುವುದು ಕೂಡ ಅದೇ ಸಿಗ್ನಲ್‌ ವ್ಯವಸ್ಥೆ. ಆದರೆ ಈ ರೈಲುಗಳು ಓಡುವಾಗ ಇಡೀ ವ್ಯವಸ್ಥೆ ಒಂದು ರೀತಿಯ ಕಟ್ಟೆಚ್ಚರದ ಸ್ಥಿತಿಯಲ್ಲಿರುತ್ತದೆ. ಈ ರೈಲುಗಳು ಅತ್ಯಾಧುನಿಕ ಬೋಗಿಗಳನ್ನು ಹೊಂದಿವೆ, ಇಂಜಿನ್‌ ಉತ್ತಮವಾಗಿದೆ. ಈ ರೈಲುಗಳು ಓಡುವಾಗ  ಸಿಬಂದಿಗಳು ಭಾರೀ ಎಚ್ಚರಿಕೆಯಿಂದ ಕರ್ತವ್ಯ ನಿಭಾಯಿಸುತ್ತಾರೆ ಮತ್ತು ಹಳಿಗಳ ತಪಾಸಣೆಯನ್ನೂ ಉತ್ತಮವಾಗಿ ಮಾಡಲಾಗುತ್ತದೆ. ಇದು ಭಾರತದ ನೌಕರಶಾಹಿಯ ಮನೋಧರ್ಮವನ್ನು ತಿಳಿಸುವ ಒಂದು ಚಿಕ್ಕ ಅಂಶ ಮಾತ್ರ.  ಪ್ರತಿ ಸಲ ಅಪಘಾತವಾದಾಗ ಸಚಿವರು ತಪ್ಪಿತಸ್ಥರ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂಬ ಮಾಮೂಲು ಹೇಳಿಕೆಯನ್ನು ನೀಡುತ್ತಾರೆ? ಆದರೆ ತಪ್ಪಿತಸ್ಥರು ಯಾರು? ಎಂದಾದರೂ ರೈಲು ಅಪಘಾತಕ್ಕೆ ಕಾರಣರಾದ ತಪ್ಪಿತಸ್ಥರಿಗೆ ಶಿಕ್ಷೆಯಾದ ಬಗ್ಗೆ ಕೇಳಿದ್ದೇವೆಯೇ? ಇಷ್ಟಕ್ಕೂ ಯಾರನ್ನು ತಪ್ಪಿತಸ್ಥರು ಎನ್ನುವುದು? ಬಡಪಾಯಿ ಗ್ಯಾಂಗ್‌ಮನ್‌ಗಳನ್ನಾಗಲಿ, ರೈಲು ಚಾಲಕರನ್ನಾಗಲಿ ಶಿಕ್ಷಿಸಿದರೆ ಈ ಸಮಸ್ಯೆ ಬಗೆಹರಿಯಲಂತೂ ಸಾಧ್ಯವಿಲ್ಲ. 150ಕ್ಕೂ ಹೆಚ್ಚಿನ ವರ್ಷಗಳ ಇತಿಹಾಸ ಹೊಂದಿರುವ ರೈಲ್ವೆಗೆ ಇನ್ನೂ ಆಧುನಿಕತೆಯ ಸ್ಪರ್ಷ ಕೊಡುವ ಕೆಲಸ ಸಮರ್ಪವಾಗಿ ಆಗುತ್ತಿಲ್ಲ. ಇದನ್ನು ಮಾಡಲಿಕ್ಕೆ ರೈಲ್ವೇ ಬಳಿ ಹಣವಿಲ್ಲ. ಇಂಡಿಯನ್‌ ಏರ್‌ಲೈನ್ಸ್‌ ಬಳಿಕ ದಿವಾಳಿಯಾಗುವ ಸರದಿಯಲ್ಲಿ ರೈಲ್ವೇ ಇದೆ ಎನ್ನುವುದು ಪೂರ್ತಿ ಉತ್ಪ್ರೇಕ್ಷಿತ ಮಾತಂತೂ ಅಲ್ಲ.     ರೈಲ್ವೇ ನಷ್ಟದಲ್ಲಿ ಓಡಲು ತೊಡಗಿ ಹಲವು ವರ್ಷಗಳಾಗಿವೆ. ಸಿಬಂದಿಗಳಿಗೆ ಸಂಬಳ ಬಟವಾಡೆ ಮಾಡಲು ಸಾಲ ಪಡೆಯುವ ಸ್ಥಿತಿ ಬಂದಿದೆ ಎನ್ನುವುದು ರೈಲ್ವೇ ದಯನೀಯ ಸ್ಥಿತಿಯನ್ನು ತಿಳಿಸುತ್ತದೆ. ಆರ್ಥಿಕ ಸ್ಥಿತಿ ಉತ್ತಮವಾಗದೆ ರೈಲ್ವೇಯನ್ನು ಸುರಕ್ಷಿತಗೊಳಿಸುವ ವಿಧಾನಗಳನ್ನು ಕಲ್ಪಿಸಿಕೊಳ್ಳುವುದು ಸಾಧ್ಯವಿಲ್ಲ. ರೈಲ್ವೇ ಸುರಕ್ಷಿತವಾಗಬೇಕಾದರೆ ಮೊದಲು ಆರ್ಥಿಕ ಸ್ಥಿತಿಗತಿ ಸುಧಾರಣೆಯಾಗಬೇಕು. ಜಗತ್ತಿನ ಅತ್ಯುತ್ತಮ ರೈಲ್ವೇ ಜಾಲದಲ್ಲಿ ಭಾರತವೂ ಸೇರಿದೆ ಎನ್ನುವುದು ನಾವು ಹೆಮ್ಮೆ ಪಡಬೇಕಾದ ವಿಚಾರ. ಆದರೆ ರೈಲ್ವೇ ಯಾವಾಗ ರಾಜಕೀಯ ಪಕ್ಷಗಳಿಗೆ ಮತಗಳಿಸಿಕೊಡುವ ವ್ಯವಸ್ಥೆಯಾಗಿ ಬದಲಾಯಿತೋ ಅಂದಿನಿಂದ ರೈಲ್ವೆ ಇಲಾಖೆಯ ದಕ್ಷತೆ ಕಡಿಮೆಯಾಗಿದೆ. ರೈಲ್ವೆಯನ್ನು ರಾಜಕೀಯ ಲೆಕ್ಕಾಚಾರದಿಂದ ಹೊರಗಿಟ್ಟು ಸುಧಾಕರಣಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ.

ಟಾಪ್ ನ್ಯೂಸ್

17

ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್‌ ರೋಲ್ ನಲ್ಲಿ ಫಾಫಾ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

Apex

CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

11-kushtagi

Kushtagi: ವಸತಿ ನಿಲಯದ ಅವ್ಯವಸ್ಥೆ; ವಿದ್ಯಾರ್ಥಿಗಳಿಂದ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mob

OTT; ಅಸಭ್ಯ ಒಟಿಟಿ ನಿಯಂತ್ರಣ: ಶಾಶ್ವತ ಕಡಿವಾಣ ಅಗತ್ಯ

ಒಂದು ದೇಶ-ಒಂದು ಚುನಾವಣೆ ಎಲ್ಲರ ಸಹಮತ ದೊರೆಯಲಿ

ಒಂದು ದೇಶ-ಒಂದು ಚುನಾವಣೆ ಎಲ್ಲರ ಸಹಮತ ದೊರೆಯಲಿ

ಕೃತಕ ಬಣ್ಣ ಬಳಕೆಗೆ ನಿಷೇಧ: ಕಟ್ಟುನಿಟ್ಟಾಗಿ ಪಾಲನೆಯಾಗಲಿ…

ಕೃತಕ ಬಣ್ಣ ಬಳಕೆಗೆ ನಿಷೇಧ: ಕಟ್ಟುನಿಟ್ಟಾಗಿ ಪಾಲನೆಯಾಗಲಿ…

Aviation: ವಿಮಾನಯಾನ: ಭದ್ರತಾ ಕಾರ್ಯತಂತ್ರವೂ ಬದಲಾಗಲಿ

Aviation: ವಿಮಾನಯಾನ: ಭದ್ರತಾ ಕಾರ್ಯತಂತ್ರವೂ ಬದಲಾಗಲಿ

Karnataka Governament: ಕಾರ್ಯಸಾಧು ಶಿಫಾರಸುಗಳ ಜಾರಿಗೆ ಸರಕಾರ ಮುಂದಾಗಲಿ

Karnataka Governament: ಕಾರ್ಯಸಾಧು ಶಿಫಾರಸುಗಳ ಜಾರಿಗೆ ಸರಕಾರ ಮುಂದಾಗಲಿ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

17

ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್‌ ರೋಲ್ ನಲ್ಲಿ ಫಾಫಾ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

12-malpe

Malpe: ಶ್ರೀ ವಡಭಾಂಡ ಬಲರಾಮ ದೇವಸ್ಥಾನ: ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಸಂಪನ್ನ

Apex

CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.