BJP ಸಚಿವರು ಏನನ್ನು ತೊಡಬೇಕು ? ಸ್ವಾಮಿ ಏನ್ ಹೇಳ್ತಾರೆ ಕೇಳಿ
Team Udayavani, Dec 26, 2017, 3:19 PM IST
ಹೊಸದಿಲ್ಲಿ : ವಿವಾದಿತ ಹಿರಿಯ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ತನ್ನ ಪಕ್ಷದ ಸಚಿವರು ವಿದೇಶೀ ಉಡುಪು ತೊಡುಪುಗಳನ್ನು ಬಹಿಷ್ಕರಿಸಬೇಕು ಎಂದು ಹೇಳಿದ್ದಾರೆ.
ಟ್ವಿಟರ್ನಲ್ಲಿ ಈ ಸಲಹೆ ನೀಡಿರುವ ಸ್ವಾಮಿ, ಬಿಜೆಪಿ ಮೊತ್ತ ಮೊದಲಾಗಿ ಲಿಕ್ಕರ್ ಬ್ಯಾನ್ ಮಾಡಬೇಕು ಎಂದು ಹೇಳಿದ್ದಾರೆ.
ಬಿಜೆಪಿ ಸಚಿವರು ಭಾರತೀಯ ಹವಾಮಾನಕ್ಕೆ ತಕ್ಕುದಾದ ಬಟ್ಟೆಬರೆಗಳನ್ನು ಧರಿಸುವ ಶಿಸ್ತನ್ನು ರೂಢಿಸಿಕೊಳ್ಳಬೇಕು; ವಿದೇಶೀ ಶೈಲಿಯ ಉಡುಪು ತೊಡುಪುಗಳು ಗುಲಾಮಗಿರಿಯ ಸಂಕೇತ ಎಂದು ರಾಜ್ಯಸಭೆಯ ಸದಸ್ಯರಾಗಿರುವ ಸ್ವಾಮಿ ಟ್ವೀಟ್ ಮಾಡಿದರು.
ಸಂವಿಧಾನದ 49ನೇ ವಿಧಿಯ ಆಶಯಕ್ಕೆ ಅನುಗುಣವಾಗಿ ಬಿಜೆಪಿ ಮದ್ಯಪಾನವನ್ನು ನಿಷೇಧಿಸಬೇಕು; ಇದನ್ನು ಪಕ್ಷದ ಶಿಸ್ತನ್ನಾಗಿ ಬಿಜೆಪಿ ಮಾಡಬೇಕು ಎಂದು ಸ್ವಾಮಿ ಹೇಳಿದರು.
ಪಾರ್ಲಿಮೆಂಟ್ನ ಸೆಂಟ್ರಲ್ ಹಾಲ್ ನಲ್ಲಿ ನಡೆದಿದ್ದ ಪಂಡಿತ್ ಮದನ ಮೋಹನ ಮಾಳವೀಯ ಅವರ ಹುಟ್ಟು ಹಬ್ಬದ ಸಮಾರಂಭದಲ್ಲಿ ಯಾವುದೇ ಎನ್ಡಿಎ ಸಚಿವರು ಪಾಲ್ಗೊಂಡಿಲ್ಲ ಎಂದು ಸ್ವಾಮಿ ಟೀಕಿಸಿದ್ದಾರೆ. ಬಿಜೆಪಿಯ ಸಚಿವರ ಉಡುಪು ತೊಡುಪುಗಳ ಶೈಲಿ ಈಗಲೂ ಅವರ ಬ್ರಿಟಿಷ್ ಸಾಮಾಜ್ಯಶಾಹಿಯ ಗುಲಾಮಗರಿಯನ್ನು ಸಂಕೇತಿಸುವಂತಿವೆ ಎಂದು ಹೇಳಿದ್ದಾರೆ.
ಜೆಎನ್ಯು ನಲ್ಲಿ ನಡೆಯಲಿದ್ದ “ಅಯೋಧ್ಯೆಯಲ್ಲೇ ರಾಮ ಮಂದಿರ ಏಕೆ?’ ಎನ್ನುವ ಕುರಿತ ತನ್ನ ಉಪನ್ಯಾಸ ಕಾರ್ಯಕ್ರಮ ರದ್ದಾದ ಬಗ್ಗೆ ಪ್ರತಿಕ್ರಿಯಿಸಿರುವ ಸ್ವಾಮಿ, “ಜೆಎನ್ಯು ಗೆ ನನ್ನ ಚಿಂತನಾ ಲಹರಿಗಳು ಯುವಕರ ಮೇಲೆ ದುಷ್ಪ್ರಭಾವ ಬೀರಬಹುದೆಂಬ ಹೆದರಿಕೆ ಇರುವಂತಿದೆ’ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ