ಗದಗ: ಭಾರೀ ಮಳೆ, ನೀರಿನ ರಭಸಕ್ಕೆ ಕೊಚ್ಚಿ ಹೋದ ಕೆಎಸ್ ಆರ್ ಟಿಸಿ ಬಸ್
Team Udayavani, May 15, 2017, 11:00 AM IST
ಗದಗ:ಸ್ಥಳೀಯರ ಎಚ್ಚರಿಕೆಯನ್ನು ಲೆಕ್ಕಿಸದೇ ದೊಡ್ಡೂರು ಹಳ್ಳದ ಸೇತುವೆ ಮೇಲೆ ಕೆಎಸ್ ಆರ್ ಟಿಸಿ ಬಸ್ ಅನ್ನು ಚಲಾಯಿಸಿದ್ದರಿಂದ ಬಸ್ ನೀರಿನ ರಭಸಕ್ಕೆ ಕೊಚ್ಚಿ ಹೋದ ಘಟನೆ ಸೋಮವಾರ ಬೆಳಗ್ಗೆ ಗದಗ ಜಿಲ್ಲೆಯ ಲಕ್ಷ್ಮೇಶ್ವರದ ದೊಡ್ಡೂರ ಗ್ರಾಮದಲ್ಲಿ ನಡೆದಿದೆ.
ಗದಗದಲ್ಲಿ ಭಾನುವಾರ ರಾತ್ರಿ ಧಾರಾಕಾರ ಮಳೆ ಸುರಿದಿತ್ತು. ಇದರಿಂದಾಗಿ ದೊಡ್ಡೂರು ಹಳ್ಳದ ಸೇತುವೆ ಮೇಲೆ ನೀರು ತುಂಬಿ ಹರಿಯುತ್ತಿತ್ತು. ಈ ಸಂದರ್ಭದಲ್ಲಿ ಕೆಎಸ್ ಆರ್ ಟಿಸಿ ಚಾಲಕ ಬಸ್ ಅನ್ನು ಸೇತುವೆ ಮೇಲೆ ಚಲಾಯಿಸಿದಾಗ ನೀರಿನ ರಭಸಕ್ಕೆ ಬಸ್ ಹಳ್ಳಕ್ಕೆ ಬಿದ್ದಿತ್ತು.
ಪ್ರಯಾಣಿಕರ ಕೂಗಾಟ, ಚೀರಾಟ ಕೇಳಿ ಸ್ಥಳೀಯರು ಸ್ಥಳಕ್ಕೆ ಆಗಮಿಸಿದ್ದರು. ಬಸ್ ಚಾಲಕ, ಕಂಡಕ್ಟರ್ ಸೇರಿ ಐದು ಮಂದಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಏಯ್ ಗ್ಲಾಸ್ ಒಡೆದು ಆ ಕಡೆ ಹೋಗೋ:
ಬಸ್ ನಲ್ಲಿದ್ದ ಬಹುತೇಕ ಪ್ರಯಾಣಿಕರನ್ನು ಸ್ಥಳೀಯರು ಹಗ್ಗದ ಸಹಾಯದಿಂದ ರಕ್ಷಿಸಿದ್ದರು. ಏತನ್ಮಧ್ಯೆ ಬಸ್ ನೊಳಗಿದ್ದ ಅಜ್ಜ ಹೆದರಿಕೆಯಿಂದ ಬಸ್ ಕಿಟಕಿ ಬಳಿಯೇ ನಿಂತಿದ್ದನ್ನು ಕಂಡು ಗ್ರಾಮಸ್ಥರು, ಗ್ಲಾಸ್ ಒಡೆದು ಆ ಕಡೆ ಹೋಗೋ ಎಂದು ಹೇಳುತ್ತಿದ್ದರೆ, ಮತ್ತೊಂದು ಗುಂಪು ಏಯ್ ಅಜ್ಜ ಏನೂ ಆಗಲ್ಲ ಹಗ್ಗ ಹಿಡಿದು ಬಾರೋ ಎಂದು ಹೇಳುತ್ತಿದ್ದರು.ಆದಕ್ಕೆ ಅಜ್ಜ ನಾ ಹೆಂಗ್ ಬರಲಪ್ಪ ಎಂದು ಹೇಳುತ್ತಿದ್ದ. ಅಂತೂ ಕೊನೆಗೆ ಅಜ್ಜ ಧೈರ್ಯ ಮಾಡಿ ಹಗ್ಗ ಹಿಡಿದು ದಡ ಸೇರಿರುವ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag; ನಮ್ಮದು ಬಡವರಿಗೆ ಬದುಕು ಕಟ್ಟಿ ಕೊಡುವ ಪ್ರಣಾಳಿಕೆ: ಬಸವರಾಜ ಬೊಮ್ಮಾಯಿ
Panchmasali ಸಮಾಜಕ್ಕೆ ಬಿಜೆಪಿಯಿಂದ ಅನ್ಯಾಯ: ವಚನಾನಂದ ಸ್ವಾಮೀಜಿ
Gadag; ವೀರೇಶ್ವರ ಪುಣ್ಯಾಶ್ರಮಕ್ಕೆ ಭೇಟಿ ನೀಡಿ ಗದ್ದುಗೆಯ ದರ್ಶನಾಶೀರ್ವಾದ ಪಡೆದ ಶ್ರೀರಾಮುಲು
Naregal; ಪ್ರೇಮಿಯೊಂದಿಗೆ ನೇಣಿಗೆ ಶರಣಾದ ನವವಿವಾಹಿತೆ!
Gadag; ವಚನಾನಂದ ಶ್ರೀಗಳ ಮಾತನ್ನು ಗಂಭೀರವಾಗಿ ಪರಿಗಣಿಸುತ್ತೇವೆ: ಬಸವರಾಜ ಬೊಮ್ಮಾಯಿ