ಬಿಳಿ ಉಂಡೆಗಳೆಲ್ಲ ವಿಭೂತಿಯಲ್ಲ
Team Udayavani, Jan 14, 2017, 12:34 PM IST
ವಾಡಿ: ಹಣೆಗೆ ಹಚ್ಚಲು ಉಪಯೋಗಿಸುವ ಬೆಳ್ಳಗಿನ ಉಂಡೆಗಳೆಲ್ಲವೂ ವಿಭೂತಿಯಲ್ಲ. ಗೋವಿನ ಸಗಣಿ ಭಸ್ಮದಿಂದ ಸಿದ್ಧಗೊಳ್ಳುವ ವಿಭೂತಿ ಉಂಡೆಗಳಿಗೆ ಮಾತ್ರ ಆತ್ಮದ ರೋಗಗಳನ್ನು ಕಳೆಯಬಲ್ಲ ಶಕ್ತಿಯಿದೆ ಎಂದು ಹೊನ್ನಕಿರಣಗಿಯ ರಾಚೋಟೇಶ್ವರ ಸಂಸ್ಥಾನ ಮಠದ ಶ್ರೀ ಚಂದ್ರಗುಂಡ ಶಿವಾಚಾರ್ಯ ಸ್ವಾಮೀಜಿ ನುಡಿದರು.
ಪಟ್ಟಣದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಏರ್ಪಡಿಸಲಾಗಿದ್ದ ಧರ್ಮ ಜಾಗೃತಿ ಅಭಿಯಾನ ಸಮಾರಂಭ ಉದ್ಘಾಟಿಸಿ ಶ್ರೀಗಳು ಮಾತನಾಡಿದರು. ಆಕಳು ನಡೆದಾಡುವ ಆಸ್ಪತ್ರೆಯಿದ್ದಂತೆ. ಅದು ಉಸಿರು ಬಿಟ್ಟರೆ ಮನುಷ್ಯನ ನೂರು ರೋಗಗಳು ನಿವಾರಣೆಯಾಗುತ್ತವೆ. ಅಂಗವಿಕಲತೆ ಮತ್ತು ಬುದ್ಧಿಮಾಂದ್ಯ ಮಕ್ಕಳ ಜನನಕ್ಕೆ ಗೋವಿನ ಉತ್ಪನ್ನಗಳ ಸೇವನೆ ಕೊರತೆಯೂ ಕಾರಣವಾಗಿದೆ ಎಂದರು.
ರಾಸಾಯನಿಕ ದ್ರವ್ಯಗಳ ಮಿಶ್ರಣದ ವಿಭೂತಿಗಳು ಮಾರುಕಟ್ಟೆಯಲ್ಲಿ ಸಿಗುತ್ತಿವೆ. ಅವುಗಳ ಬಳಕೆಯಿಂದ ಚರ್ಮಕ್ಕೆ ತೊಂದರೆಯಿದೆ. ನೈಜ ವಿಭೂತಿಗಳ ಲಭ್ಯ ವಿರಳ. ಪರಿಣಾಮ ಕಿರಣಗಿಯ ರಾಚೋಟೇಶ್ವರ ಮಠವು ವಿಭೂತಿ ಸಿದ್ಧತೆಗೆ ಮುಂದಾಗಿದೆ. ಅದಕ್ಕಾಗಿ ಜಿಲ್ಲೆಯಾದ್ಯಂತ ಧರ್ಮ ಜಾಗೃತಿ ಅಭಿಯಾನ ನಡೆಸಲಾಗುತ್ತಿದ್ದು, ಭಕ್ತರಿಂದ ಗೋವಿನ ಸಗಣಿ ಸಂಗ್ರಹಿಸಲಾಗುತ್ತಿದೆ ಎಂದರು.
ಫೆ.1 ರಂದು ಕಿರಣಗಿಯಲ್ಲಿ ನಡೆಯಲಿರುವ ಚಂಡಿಯಾಗದಲ್ಲಿ ಪಾಲ್ಗೊಳ್ಳುವವರು ದವಸ ಧಾನ್ಯದ ಜತೆಗೆ ಮಠಕ್ಕೆ ಗೋವಿನ ಸಗಣಿಯನ್ನು ದಾನವಾಗಿ ನೀಡಬೇಕು ಎಂದು ಹೇಳಿದರು. ಮಲ್ಲಿಕಾರ್ಜುನ ದೇವಸ್ಥಾನ ಸಮಿತಿ ಅಧ್ಯಕ್ಷ ಶಾಂತಪ್ಪ ಶೆಳ್ಳಗಿ, ವೀರಶೈವ ಸಮಾಜದ ಅಧ್ಯಕ್ಷ ಸಿದ್ದಣ್ಣ ಕಲಶೆಟ್ಟಿ, ಸಮಾಜದ ಮುಖಂಡರಾದ ಕಲ್ಯಾಣರಾವ ಶೆಳ್ಳಗಿ, ಅಣ್ಣಾರಾವ ಪಸಾರೆ, ಶರಣಗೌಡ ಚಾಮನೂರ,
ಚಂದ್ರಶೇಖರ ಹಾವೇರಿ, ಮಲ್ಲಣ್ಣಗೌಡ ಗೌಡಪ್ಪನೋರ, ಪರಮೇಶ್ವರ ಬಿಲಗುಂದಿ, ಸಂಗಣ್ಣ ಮೇಲಶೆಟ್ಟಿ, ಬಸವರಾಜ ಕೀರಣಗಿ, ಗುರಣ್ಣ ಸೊಡ್ಡೆ, ನಿಂಗಣ್ಣ ದೊಡ್ಡಮನಿ, ಪರುತಪ್ಪ ಕರದಳ್ಳಿ, ವೀರಣ್ಣ ಯಾರಿ, ಮಲ್ಲಯ್ಯಸ್ವಾಮಿ, ಕಾಶೀನಾಥ ಶೆಟಗಾರ, ಮಲ್ಲೇಶ ನಾಟೀಕಾರ, ಸಂಗಣ್ಣ ಇಂಡಿ, ಶರಣಗೌಡ ಬಿರಾದಾರ ಪಾಲ್ಗೊಂಡಿದ್ದರು. ಸಿದ್ದಯ್ಯಶಾಸ್ತ್ರೀ ನಂದೂರಮಠ ನಿರೂಪಿಸಿ, ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
ಸಚಿವರು ಲೀಡ್ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್
ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ
Kalaburagi; ಮೋದಿ ಗ್ಯಾರಂಟಿಗೆ ನೋ ವಾರಂಟಿ: ಸಚಿವ ಪ್ರಿಯಾಂಕ್ ಖರ್ಗೆ ಟೀಕೆ
MUST WATCH
ಹೊಸ ಸೇರ್ಪಡೆ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್