ಕೊರತೆ ನೀರಿನದ್ದಲ್ಲ-ಸಮಸ್ಯೆ ಕೊಳೆತ ನೀರಿನದ್ದು


Team Udayavani, Mar 22, 2017, 4:32 PM IST

gul5.jpg

ವಾಡಿ: ತಿನ್ನುವ ಆಹಾರ ಹಳಸಿದರೆ ಅದು ಕಸ-ಮುಸುರೆ ಎನ್ನಿಸಿಕೊಳ್ಳುತ್ತದೆ. ಹಾಗೆಯೇ ಕುಡಿಯುವ ನೀರು ಹಳಸಿದರೆ ಕೊಳೆ ನೀರು ಎನ್ನಿಸಿಕೊಳ್ಳುತ್ತದೆ. ಇಂತಹ ಕಲುಷಿತ ಹೊಳೆ ನೀರು ಕುಡಿದ ಜನರ ದೇಹ ಅಕ್ಷರಶಃ ರೋಗದ ಗೂಡಾಗುತ್ತದೆ. ಭೀಮಾ ಮತ್ತು ಕಾಗಿಣಾ ನದಿಗಳ ಹರಿವಿನ ಭಾಗ್ಯ ಪಡೆದಿರುವ ಚಿತ್ತಾಪುರ ತಾಲೂಕಿನ ಜನಕ್ಕೆ ನೀರಿನ ಕೊರೆತೆಯಿಲ್ಲ.

ಆದರೆ ಕೊಳೆತ ನೀರಿನ ಸಮಸ್ಯೆಯಿಂದ ಮಾತ್ರ ಇವರು ಮುಕ್ತರಾಗಿಲ್ಲ. ತಲಾ ಒಂದು ಸಿಮೆಂಟ್‌ ಕಂಪನಿ ಹೊಂದಿರುವ ವಾಡಿ, ಶಹಾಬಾದ, ಚಿತ್ತಾಪುರ ನಗರಗಳು ಶುದ್ಧ ಗಾಳಿಯಿಂದ ವಂಚಿತಗೊಂಡು ಹಲವು ದಶಕಗಳೇ ಉರುಳಿವೆ. ಈಗ ಅಶುದ್ಧ ನೀರಿನ ಉರುಳು ಜನರ ಕೊರಳು ಸುತ್ತಿಕೊಂಡಿದೆ. 

ಭೀಮಾ ನದಿಯ ತಟದಲ್ಲಿರುವ ವಾಡಿ ಪಟ್ಟಣಕ್ಕೆ ಕಳೆದ ಮೂರ್‍ನಾಲ್ಕು ತಿಂಗಳಿಂದ ಹಸಿರುಪಾಚಿಯಿಂದ ಕೂಡಿದ ದುರ್ಗಂಧದ ನೀರು ಸರಬರಾಜು ಆಗುತ್ತಿದೆ. ಕೋಟ್ಯಂತರ ರೂ. ವೆಚ್ಚದ ನೀರು ಶುದ್ಧೀಕರಣ ಘಟಕ ಸ್ಥಾಪನೆಯಾಗಿದ್ದರೂ ಇಲ್ಲಿನ ಜನರು ಶುದ್ಧ ಕುಡಿಯುವ ನೀರಿಗಾಗಿ ದಿನವೂ ಪರಿತಪಿಸುತ್ತಿದ್ದಾರೆ. 

ಸನ್ನತಿ ಬ್ಯಾರೇಜ್‌ನಿಂದ ತಡೆಹಿಡಿಯಲಾದ ನಾಲ್ಕು ಮೀಟರ್‌ ಎತ್ತರದ ಭೀಮಾ ನದಿ ಹಿನ್ನೀರು, ಸುಮಾರು 20 ಕಿ.ಮೀ. ಅಂತರದ ಕುಂದನೂರಿನ ವರೆಗೂ ಹರಡಿ ನಿಂತಿದೆ. ಶಹಬಾದ ಬಳಿ ಕಾಗಿಣಾ ನದಿಗೆ ನಿರ್ಮಿಸಲಾದ ಬ್ಯಾರೇಜ್‌ನಿಂದ ಅತ್ಯಧಿಕ ಪ್ರಮಾಣ ನೀರು ಸಂಗ್ರಹಗೊಂಡಿದೆ.

ಇಂಗಳಗಿ ಸಮೀಪದ ಕಾಗಿಣಾ ನದಿಗೆ ಎಸಿಸಿ ಬ್ಯಾರೇಜ್‌ನಿಂದಲೂ ನೀರಿಗೆ ತಡೆಯೊಡ್ಡಲಾಗಿದೆ. ಕಳೆದ ವರ್ಷದ ಮಾರ್ಚ್‌ನಲ್ಲಿ ಉಂಟಾಗಿದ್ದ ಜಲಕ್ಷಾಮದ ಭೀಕರತೆ ಈ ವರ್ಷವಿಲ್ಲ. ಎಚ್ಚೆತ್ತುಕೊಂಡಿರುವ ಅಧಿಕಾರಿಗಳು, ಜನಪ್ರತಿನಿಧಿಧಿಗಳು ಎರಡೂ ನದಿಗಳಲ್ಲಿ ಸಾಕಷ್ಟು ನೀರು ಸಂಗ್ರಹಕ್ಕೆ ಕ್ರಮಕೈಗೊಂಡಿದ್ದರಿಂದ ಜನರು ನಿಟ್ಟುಸಿರು ಬಿಡುವಂತಾಗಿದೆ. 

ಆದರೆ, ಸಮಸ್ಯೆ ಇದಲ್ಲ. ಈ ಎರಡೂ ನದಿಗಳಲ್ಲಿ ಶೇಖರಣೆಯಾಗಿರುವ ಹಿನ್ನೀರು ಸಂಪೂರ್ಣ ಕೊಳೆಯಾಗಿದೆ. ಹಸಿರು, ಹಳದಿ ಬಣ್ಣಗಳಿಂದ ಮೈದಳೆದು ಹುಳು, ಹುಪ್ಪಡಿ ಹುಟ್ಟಿಕೊಂಡಿವೆ. ಶುದ್ಧೀಕರಣಗೊಳ್ಳದ ದುರ್ವಾಸನೆ ಭರಿತ ಕೊಳೆತ ಹಿನ್ನೀರನ್ನು ಕುಡಿದು ಜನರು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಅಗತ್ಯ ರಸಾಯನಿಕಗಳ ಕೊರತೆಯಿಂದ ಬಳಲುತ್ತಿರುವ ಪಟ್ಟಣದ ನೀರು ಶುದ್ಧೀಕರಣ ಘಟಕ ಇದ್ದೂ ಇಲ್ಲದಂತಿದೆ.

ಸತ್ತ ಜಲಚರಗಳು ನಳದ ನೀರಿನೊಂದಿಗೆ ಮನೆಗಳಿಗೆ ಬರುತ್ತಿದ್ದರೂ ಯಾರೂ ಕೇಳದಂತಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಕುಡಿಯುವ ನೀರನ್ನು ಪುರಸಭೆ ಕೂಡಲೇ ಪರೀಕ್ಷೆಗೆ ಒಳಪಡಿಸದಿದ್ದರೆ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. 

* ಮಡಿವಾಳಪ್ಪ ಹೇರೂರ 

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

yatnal

Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.