ಸಾಲಬಾಧೆ; ಟ್ರಾನ್ಸ್ ಫಾರ್ಮರ್ ಗೆ ಕೈಹಾಕಿ ಸಾವಿಗೆ ಶರಣಾದ ರೈತ
Team Udayavani, Feb 17, 2017, 12:16 PM IST
ಹಾವೇರಿ : ಸಾಲಬಾಧೆ ಮತ್ತು ನೀರಿಲ್ಲದೆ ಬೆಳೆ ಸೊರಗಿ ಹೋದ ಕಾರಣ ತೀವ್ರವಾಗಿ ನೊಂದ ರೈತನೊಬ್ಬ ಹೊಲದಲ್ಲಿನ ವಿದ್ಯುತ್ ಟ್ರಾನ್ಸ್ಫಾರ್ಮರ್ ಏರಿ ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಶಿಗ್ಗಾವಿಯ ಶಿರಗೋಡ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.
ಚಮನ್ಸಾಬ್ ಅರಶಿನಗುಪ್ಪಿ (60) ಎಂಬ ರೈತ ಆತ್ಮಹತ್ಯೆಗೆ ಶರಣಾಗಿದ್ದು ಶವ ಟ್ರಾನ್ಸ್ಫಾರ್ಮರ್ನಲ್ಲೇ ಸಿಲುಕಿಕೊಂಡಿತ್ತು.
ಖಾಸಗಿಯವರ ಬಳಿ ಮತ್ತು ಬ್ಯಾಂಕ್ ಬಳಿ 3 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದು, ಬೆಳೆಯೂ ನೀರಿಲ್ಲದೆ ಸೊರಗಿ ಹೋಗಿತ್ತು. ತೀವ್ರವಾಗಿ ನೊಂದು ಖಠಿಣ ನಿರ್ಧಾರ ತಳೆದಿದ್ದಾರೆ ಎಂದು ಹೇಳಲಾಗಿದೆ.
ಹೆಸ್ಕಾಂ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ