ದಂತ ಸುತ್ತು ಪರೆ ರೋಗ, ವಸಡು ರೋಗಗಳ ಕಾರಣಗಳು
Team Udayavani, Aug 13, 2017, 6:25 AM IST
ಹಿಂದಿನ ವಾರದಿಂದ – ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ದಂತ ವೈದ್ಯರು, ನಿಮ್ಮ ಮನೆಯಲ್ಲಿ , ನಿಮ್ಮ ತಂದೆ, ತಾಯಿಗಳ ಹಲ್ಲಿನ, ವಸಡಿನ ರೋಗವಿರುವ, ಅವರಿಗೆ ಯಾವ ಪ್ರಾಯದಲ್ಲಿ ಹಲ್ಲು ಉದುರಿ ಹೋಗಿತ್ತು. ಅಥವಾ ಅವರಿಗೆ, ಸಕ್ಕರೆ ಕಾಯಿಲೆ ಇರುವ ಬಗ್ಗೆ ಅಥವಾ ನಿಮಗೆ ಸಕ್ಕರೆ ಕಾಯಿಲೆ ಇರುವ ಬಗ್ಗೆ ಕೇಳಬಹುದು, ಕೆಲವೊಮ್ಮೆ ನಿಮ್ಮ ತಂದೆ, ತಾಯಿ, ಅಥವಾ ನಿಮ್ಮ ಅಣ್ಣ ತಮ್ಮಂದಿರನ್ನು , ಅಥವಾ ನಿಮ್ಮ ಹತ್ತಿರದ ಸಂಬಂಧಿಗಳಲ್ಲಿ ಸಕ್ಕರೆ ಕಾಯಿಲೆ ಇರುವ ಬಗ್ಗೆ ಕೇಳಲೂ ಬಹುದು. ಹೀಗೆ ದಂತ ವೈದ್ಯರು ಕೇಳಲು ಪ್ರಮುಖ ಕಾರಣವಿರುತ್ತದೆ. ಸಕ್ಕರೆ ಕಾಯಿಲೆ ರೋಗಕ್ಕೂ, ವಸಡು ರೋಗಕ್ಕೂ ಸಂಬಂಧವಿದೆ. ಹೀಗೆ ನಿಮ್ಮ ದೇಹದ ಇತರೇ ರೋಗಗಳನ್ನು ಗುಣಪಡಿಸಿಕೊಳ್ಳುವುದರಿಂದ ವಸಡು ರೋಗದಿಂದಲೂ ದೂರವಿರಬಹುದು.
ಹಲ್ಲು ಕೀಳಿಸಿಕೊಂಡ ನಂತರ ಸರಿಯಾದ ಸಮಯದಲ್ಲಿ ಕೃತಕ ಹಲ್ಲನ್ನು ಜೋಡಿಸಿಕೊಳ್ಳಿ. ಕೆಲವೊಮ್ಮೆ ಹಲ್ಲನ್ನು ಕೀಳಿಸಿದ ನಂತರ, ಆ ಜಾಗದಲ್ಲಿ ಕೃತಕ ಹಲ್ಲನ್ನು ಇಟ್ಟುಕೊಳ್ಳದೇ ಇರುವುದರಿಂದ, ಅಕ್ಕಪಕ್ಕದ ಹಲ್ಲುಗಳು ಈ ಜಾಗಕ್ಕೆ ಸರಿದು, ಅದಲ್ಲದೇ ಮೇಲಿನ ದವಡೆಹಲ್ಲು ಈ ಜಾಗಕ್ಕೆ ಸರಿದು, ಹಲ್ಲಿನ ಮಧ್ಯೆ ಜಾಗವಾಗಲು ಸಾಧ್ಯವಗಾಉವುದಲ್ಲದೇ, ಬೇರೆ ಬೇರೆ ಹಲ್ಲುಗಳ ಮೇಲೆ, ಬೇರೆ ಬೇರೆ ರೀತಿಯ ಭಾರ ಬೀಳುವುದರಿಂದ ಅತಿಯಾದ ಭಾರದಿಂದಾಗಿ ಅಥವಾ ಮೇಲಿನ ಹಲ್ಲಿನ ಭಾರವು ಸರಿಯಾಗಿ, ನೇರವಾಗಿ ಕೆಳಗಿನ ಹಲ್ಲಿನ ಮೇಲೆ ಬೀಳದೇ ಇರುವುದರಿಂದ ಹಲ್ಲಿನ ಸುತ್ತಲು ಇರುವ ಎಲುಬು ಹಾಳಾಗುತ್ತಾ ಇರುವುದು. ಇದರಿಂದಾಗಿ, ಹಲ್ಲಿನ ಸುತ್ತಲೂ ಇರುವ ಎಲುಬು ನಶಿಸಿ, ಹಲ್ಲಿನ ಸುತ್ತ ಪರೆ, ರೋಗಗಳಿಗೆ ತುತ್ತಾಗುವುದು ಕೂಡ. ಹಾಗಾಗಿ ಮೇಲಿನ ಹಲ್ಲಿನ ಕಚ್ಚುವ ಭಾರ, ಕೆಳಗಿನ ಹಲ್ಲಿಗೆ ಅದರ ಭಾರ ಬೀಳುವ ದಾರಿ ಮತ್ತು ಅವಧಿ ಎಲ್ಲವೂ ನಿಯಮಿತವಾಗಿರಬೇಕು.
ವಸಡಿನ ರೋಗಗಳಿಗೆ, ಬ್ಯಾಕ್ಟೀರಿ ಯಾಗಳಿಂದ ಕೂಡಿದ ದಂತ ಪಾಚಿ (ಪ್ಲಾಶ್) ಪ್ರಮುಖ ಕಾರಣವಾದರೂ, ಇದು, ಇತರೇ ಕಾರಣಗಳಿಂದ ಜಾಸ್ತಿಯಾಗಬಹುದು. ಬೇರೆ ಕಾರಣಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಆವಾಗಾವಾಗ ದಂತ ವೈದ್ಯರನ್ನು ಸಂದರ್ಶಿಸುವುದು ಉತ್ತಮ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ
Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ